ಕಾವ್ಯಯಾನ

ಒಲವಿನಾಟ

ಮಧುವಸ್ತ್ರದ್

ಕೃಷ್ಣಾ..ಒಲವಿನಾಟವ ಆಡು ಬಾ ಕಾದಿರುವಳು ಬೆಡಗಿ..
ಹೃದಯ ಕಸಿದು ಮನವ ಬೆಸೆದು
ಎಲ್ಲಿರುವೆ ನೀ ಅಡಗಿ..
ಕರ್ಪೂರಗೊಂಬೆ ರೂಪಸಿ ರಂಭೆ
ಕಾಯುತಿಹಳು ಸೊರಗಿ..
ಸೋಕಿದೊಡೆ ನಿನ್ನ ಪ್ರೇಮಜ್ವಾಲೆ
ನೀರಾಗುವಳು ಕರಗಿ..

ಸನಿಹ ನೀನಿರೆ ಮೆಲ್ಲುಸಿರಾಯ್ತು ಪ್ರಣಯ ಕವನ‌..
ಸೂಸಿತು ತಂಗಾಳಿ ಹಾಡುತಲಿ
ಒಲವಿನ ಸವಿಗಾನ..
ತರುಲತೆ ತೂಗಿಬಾಗಿ ನೀಡಿಹವು ಪ್ರೇಮ ಸಿಂಚನ‌‌..
ವನದೇವಿ ನಕ್ಕು ಹಾರೈಸಿಹಳು ನಮ್ಮ ಶುಭಮಿಲನ..

ತನುಮನ ಕಾತರದಿ ಕಾದಿಹವು ನಿನ್ನಾಗಮನದ ಕ್ಷಣ..
ಹೊಳೆದಿಹ ಕೆಂದಾವರೆ ಮೊಗಕೆ ಮುತ್ತಿನಾಭರಣ..
ಬಳುಕುವ ದೇಹಸಿರಿಗೆ ನಿನ್ನ
ಬಾಹುಗಳಾವರಣ‌..
ನಮ್ಮೀ ಒಲವ ಬಂಧನ ಜನ್ಮ
ಜನ್ಮಾಂತರದ ಋಣ..

*********

Leave a Reply

Back To Top