ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತೀರವಿರದ ಕಡಲು

ಅರುಣ ನರೇಂದ್ರ

ಮುಗಿಯದ ಪದಗಳು

ಅವ್ವನ ಬಗ್ಗೆ ಬರೆಯಬೇಕೆಂದೆ
ಅವನು ನೆನಪಾಗುತ್ತಾನೆ
ಏಕೆಂದರೆ ಅವನೊಳಗೆ
ನನ್ನವ್ವ ಇದ್ದಾಳೆ

ಅದೆಷ್ಟು ಹೃದಯಗಳು
ಇಲ್ಲಿ ಖೂನಿಯಾಗಿವೆ ಗಾಲಿಬ್
ಚಳೆ ಹೊಡೆದ ರಕುತದ ಮೇಲೆ
ಪಕಳೆಗಳು ಒದ್ದಾಡುತಿವೆ ಗಾಲಿಬ್

ಮಾಡುವ ಕೆಲಸದಲಿ
ದಣಿವೇ ಇಲ್ಲ
ಈ ಫಕೀರನಿಗೆ
ಏಕೆಂದರೆ
ಜೋಳಿಗೆಯ ತುಂಬಾ
ಬರಿ ಮೊಹಬ್ಬತ್ತಿನ
ಪದಗಳಿವೆ

ಮುಗಿಯದ ಕಥೆಗೆ
ನೀ ಮುನ್ನುಡಿ
ಬರೆಯಬೇಕಿದೆ ದೇವಾ
ವ್ಯೆಥೆಯ ಕಣ್ಣೀರು ಒರೆಸಿ
ನಗುವಿಗೆ ನೀ
ನಾಂದಿ ಹಾಡಬೇಕಿದೆ ದೇವಾ

.

ಅರುಣ ನರೇಂದ್ರ

About The Author

2 thoughts on “”

Leave a Reply

You cannot copy content of this page

Scroll to Top