
ಕಾವ್ಯ ಸಂಗಾತಿ
ತೀರವಿರದ ಕಡಲು
ಅರುಣ ನರೇಂದ್ರ
ಮುಗಿಯದ ಪದಗಳು

ಅವ್ವನ ಬಗ್ಗೆ ಬರೆಯಬೇಕೆಂದೆ
ಅವನು ನೆನಪಾಗುತ್ತಾನೆ
ಏಕೆಂದರೆ ಅವನೊಳಗೆ
ನನ್ನವ್ವ ಇದ್ದಾಳೆ
ಅದೆಷ್ಟು ಹೃದಯಗಳು
ಇಲ್ಲಿ ಖೂನಿಯಾಗಿವೆ ಗಾಲಿಬ್
ಚಳೆ ಹೊಡೆದ ರಕುತದ ಮೇಲೆ
ಪಕಳೆಗಳು ಒದ್ದಾಡುತಿವೆ ಗಾಲಿಬ್

ಮಾಡುವ ಕೆಲಸದಲಿ
ದಣಿವೇ ಇಲ್ಲ
ಈ ಫಕೀರನಿಗೆ
ಏಕೆಂದರೆ
ಜೋಳಿಗೆಯ ತುಂಬಾ
ಬರಿ ಮೊಹಬ್ಬತ್ತಿನ
ಪದಗಳಿವೆ
ಮುಗಿಯದ ಕಥೆಗೆ
ನೀ ಮುನ್ನುಡಿ
ಬರೆಯಬೇಕಿದೆ ದೇವಾ
ವ್ಯೆಥೆಯ ಕಣ್ಣೀರು ಒರೆಸಿ
ನಗುವಿಗೆ ನೀ
ನಾಂದಿ ಹಾಡಬೇಕಿದೆ ದೇವಾ

ಅರುಣ ನರೇಂದ್ರ
ಅಕ್ಕ,ಬಹು ಚೆಂದ ಬರೆದಿರುವಿರಿ.
ಧನ್ಯವಾದಗಳು ಸಹೋದರ