ಬಾಳಿಗೆ ಅರುಣೋದಯ

ಕಾವ್ಯ ಸಂಗಾತಿ

ಬಾಳಿಗೆ ಅರುಣೋದಯ

ಶಾಲಿನಿ ಕೆಮ್ಮಣ್ಣು

.

ಮನವೇ ಮರೆತು ಹೋಗದಿರು
ಹೃದಯವೇ ದೂರ ಮಾಡದಿರು
ತನುವೇ ನನ್ನ ತೊರೆಯದಿರು
ನಯನ ವೇ ನೋಟ ಬದಲಾಯಿಸದಿರು
ಕರವೇ ಕವಲಾಗದಿರು
ಕಾಲೇ ಅನ್ಯ ಪಥ ತುಳಿಯದಿರು
ಪ್ರಾಣವೇ ಜೀವವ ಸಂತೈಸು
ದುಂಬಿಯೆ ಜೇನ ಮುತ್ತಿಕ್ಕು
ಕಂಪಿಲ್ಲದ ಕುಸುಮದಂತೆ
ಬರಡಾದ ಬಯಲಂತೆ
ಕಳೆ ಇಲ್ಲದ ಆಭರಣದಂತೆ
ಕಾಯುತಿದೆ ಈ ಒಡಲು
ನಿನ್ನ ಪ್ರೇಮ ಸಿಂಚನಕೆ
ಮಧುರ ಸಿಹಿ ಚುಂಬನಕೆ
ಅಪ್ಪುಗೆಯ ಆನಂದಕೆ
ಬಾ ಮಳೆಯೇ ತಂಪಾಗಿ
ಮುದದೆ ಅರುಣೋದಯ ವಾಗಿ

——————-

Leave a Reply

Back To Top