ಬುದ್ದ ಪೂರ್ಣಿಮಾ ವಿಶೇಷ

ಕಾವ್ಯ ಸಂಗಾತಿ

ಶ್ರೀವಲ್ಲಿ ಮಂಜುನಾಥ

ಆಧ್ಯಾತ್ಮಿಕ ಚಿಂತಕ,
ದಾರ್ಶನಿಕ, ಬೌದ್ಧ
ಧರ್ಮದ ಸಂಸ್ಥಾಪಕ
ಪ್ರಬುದ್ಧ ಈ ಬುದ್ಧ !

ಆಸೆಯೇ ದುಃಖಕ್ಕೆ
ಮೂಲವೆಂಬುದ
ಜಗತ್ತಿಗರುಹಿದ
ಶಾಂತಿಪ್ರಿಯನಿವನು!

ಕ್ಷಣಿಕ ಸುಖಕ್ಕಾಗಿ
ಸಾಗರದಷ್ಷು ದುಃಖಿಸದೆ
ವಾಸ್ತವಿಕ ನೆಲೆಯಲಿ
ಬಾಳೆಂದವನೀ ಬುದ್ಧ !

ನೀವು, ನಿಮ್ಮ ಮನ
ಸದಾ ಪ್ರೀತಿಯಿಂದ
ಕೂಡಿದ್ದಲ್ಲಿ ನಕಾರಾತ್ಮಕ
ಚಿಂತನೆಗೆಡೆಯೆಲ್ಲೆಂದ!

ಪ್ರಾಪಂಚಿಕ ಸುಖ,
ಭೋಗವಲ್ಲದೆ, ಒಳ
ಮನದ ಸುಖದಿ, ನಿಜ
ಶಾಂತಿಯಿಹುದೆಂದ!

ಆಸೆಗಳ ತ್ಯಜಿಸಿದಲಿ
ಜ್ಞಾನೋದಯಕೆ
ಮಾರ್ಗವಿಹುದೆಂಬುದ
ಸಾರಿದನೀ ಶಾಂತಿದೂತ !


Leave a Reply

Back To Top