ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೈತ ಗಜಲ್

Farmers doing harvest - Inspirearts

ದೇಶದ ಬೆನ್ನೆಲುಬು ನೀನೆಂದು ಹೊಗಳುತ್ತಾರೆ ಎಲ್ಲರೂ
ನಿನ್ನ ಮೂಳೆ ಚಕ್ಕಳ ಮೈಯ ಮರೆಯುತ್ತಾರೆ ಎಲ್ಲರೂ

ಮೂಕ ಬಸವನ ಕೂಡ ಮೌನ ದುಡಿಮೆ ನಿನ್ನದು
ನಿನ್ನ ಹಿತವ ಗುತ್ತಿಗೆ ಹಿಡಿದಂತೆ ಆಡುತ್ತಾರೆ ಎಲ್ಲರೂ

“ರೈತನ ಬೆವರಿಗೆ ಬೆಲೆ ಎಲ್ಲಿ” ಅಬ್ಬರದ ಮಾತು
ಬೆಳೆಯ ಕೊಳ್ಳುವಾಗ ಅಗ್ಗಕ್ಕೇ ಕೇಳುತ್ತಾರೆ ಎಲ್ಲರೂ

“ಅನ್ನದಾತ ರೈತ, ಜೈಕಿಸಾನ್!” ಘೋಷಣೆ ಜೋರು
ಪೋಷಣೆಯ ಅರಸಿದರೆ ಕಣ್ಣು ತಪ್ಪಿಸುತ್ತಾರೆ ಎಲ್ಲರೂ

ಆ ನಿಸ್ತೇಜ ಕಣ್ಣುಗಳಲ್ಲಿ ಬಿರಿದ ನೆಲ, ಕಮರಿದ ಫಸಲು
ನಿನ್ನ ಹೆಣದ ಮೇಲೆ ಚದುರಂಗ ಆಡುತ್ತಾರೆ ಎಲ್ಲರೂ

ಬೆಳೆಯುವುದನ್ನೇ ಬದುಕಾಗಿಸಿದವನು ನೀನು ‘ಜಂಗಮ’
ಅರೆಹೊಟ್ಟೆಯ ನಿನ್ನ ಮರೆತು ಡೊಳ್ಳು ತುಂಬಿಸುತ್ತಾರೆ ಎಲ್ಲರೂ

*********************************************

ಡಾ. ಗೋವಿಂದ ಹೆಗಡೆ

About The Author

4 thoughts on “”

Leave a Reply

You cannot copy content of this page

Scroll to Top