ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಜ್ಯೋತಿ ಬಿ ದೇವಣಗಾವ.

Abstract Bird Shape, New Topstar2020

ಹೊರಗೆ ನಾಳೆಗಳು ನರಳುತ್ತಿವೆ
ಒಳಗೆ ವರ್ತಮಾನ
ನೋಡಲಾಗದೆ ಕಣ್ಣು ಕಾಲ್ಕಿತ್ತಿತು ಚಿತ್ತ ಜಾಂಡಾ ಊರಿತು
ಮೊದಲಿನ ನೋಟ ಮರಳಲಾರದೇನೋ ನಂಜಿಲ್ಲದಂತೆ

ಜೀವನ್ಮರಣ ಯಾತನೆ ಕರುಳತುಂಬ
ಹೊರಗೋ ಭೀಕರ ಮೌನ ರುದ್ರತಾಂಡವ ಒಳಗೆ
ಜಗದ ಹೊರ ಮೈಯ್ಯನು ಗಾಳಿ ಚೂರು ಬಿಡದೆ ನೆಕ್ಕುತ್ತಿತ್ತು ಎಂಜಲಾಗದಂತೆ

ತುರ್ತು ಚಿಕಿತ್ಸೆ ವಾಹನಕೂ ಉಬ್ಬಸ
ಏರುತಿದೆ ಸಾವ ಸೂಚ್ಯಂಕ
ತೇನ್ಸಿಂಗ್ ಮೆಟ್ಟಿ ಧ್ವಜನೆಟ್ಟ ಪರ್ವತದೆತ್ತರಕೆ
ಮರಣ ಮೃದಂಗ ಎಲ್ಲೆಲ್ಲೂ ಅಂಜಿನಡುಗುವಂತೆ

ಹರುಕುರಗಟಿ,ದವಾಖಾನೆ ದಿರಿಸೇ ಕೊನೆಯಶೃಂಗಾರ
ಗಂಗಾಜಲ ತುಟಿಮುಟ್ಟಲಿಲ್ಲ ಮಂಗಳಾರತಿಗೂ ಹಿಂಜರಿಕೆ ಸೋಕಲು
ಸಾವಿನಕೇಕೆ ಸುತ್ತುವರೆದಿದೆ ಎದೆಯೊಡೆಯುವಂತೆ

ಎಣಿಸದೇ ಹೊಟ್ಟೆ ಹರಿಸಿಕೊಂಡು ಹೂಳಿಸಿಕೊಳ್ಳುತ್ತಿದೆ ನೆಲ
ಉಕ್ಕಿಸಿದ ಅಂತರ್ಜಲದಷ್ಟೇ ಬಸಿಯುತ್ತಿದೆ ನಿರ್ಜೀವನ ಸ್ವೇದ ಕುಡಿಕುಡಿದು ಮತ್ತೇರಿ ಮಲಗಿದೆ ಎಚ್ಚರವಾಗದಂತೆ

************************************

About The Author

5 thoughts on “ಕವಿತೆ”

  1. ಶರಣಪ್ಪ ತಳ್ಳಿ

    ನಿಜಕ್ಕೂ ವರ್ತಮಾನ ತಲ್ಣಣಗೊಂಡಿದೆ.ಸಾವು ನೋವು ಎಂಬುದು ಭೀಬತ್ಸದ ವಾತಾವರಣವಾಗಿದೆ.ಕಣ್ಣಿಗೆ ಕಾಣದ ವೈರಸ್, ಜನರ ಜೀವನವ ಕಸಿದುಕೊಂಡಿದೆ.ಜ್ಯೋತಿ.ಬಿ.ದೇವಣಗಾವ ಮೆಡಮ್ ರವರ ಕವಿತೆಯು ಜೀವ ಮಿಡಿತವಾಗಿದೆ.

  2. ಅನಾಮಿಕ

    ಭಯಾನಕ, ಬಿಬಿತ್ಸ, ರುದ್ರತಾಂಡವ,
    ನರಕ ಸದೃಶ್ಯ ಸಂದರ್ಭ, ಕಾಣದ ಕೈಗಳ ಕೈವಾಡದ ಪ್ರಕೋಪಕ್ಕೆ
    ಜೀವನ್ಮರಣದ ಛಾಯೆ,
    ಬೃಹದಾಕಾರವಾಗಿ ತೋರುತಿದೆ

  3. Mamathashankar

    ಸದ್ಯದ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಭಯಂಕರ ಜೀವನ ಕ್ಷಣವೊಂದನು ಸಮರ್ಥ್ ಪದಗಳಿಂದ ಕಟ್ಟಿಕೊಟ್ಟಿರುವಿರಿ…. ಅಭಿನಂದನೆಗಳು ಮೇಡಂ

  4. ಅಭಿಪ್ರಾಯ ತಿಳಿಸಿದ ಎಲ್ಲ ಸಹ ಹೃದಯಿ ಮನಗಳಿಗೆ ಧನ್ಯವಾದ

Leave a Reply

You cannot copy content of this page

Scroll to Top