ಸಂಕ್ರಾಂತಿ ಕಾವ್ಯ ಸುಗ್ಗಿ

ಸಂಕ್ರಾಂತಿ

ಕೆ.ಟಿ.ಜಯಶ್ರೀ

Sankranthi – The harvest festival for farmers – Jivabhumi

ಮುಂಬಾಗಿಲ ತಳಿರ ಸ್ವಾಗತ
ಪಂಚಭೂತ ತತ್ವದರಿವನು
ಹರವುವ ಹೊಸ ಮಡಕೆಯಲಿ
ಘಮಘಮಿಸುತಿದೆ ಪೊಂಗಲ್
ಎಳ್ಳು ಬೆಲ್ಲ ಮೆಲುನುಡಿದಿವೆ

ಜರತಾರಿ ತೊಟ್ಟ ಕುವರಿಯರ
ಮೆರವಣಿಗೆ ಸಾಗಿದೆ ಸಂಜೆಯಲಿ

ಪಥ ಬದಲಿಸಿ ಸಾಗುವಾಗ
ಸೂರ್ಯ ಸಂಭ್ರಮದಿ
ನಗೆ ಚೆಲ್ಲಿತಾ ರಂಗಿನ ರಂಗವಲ್ಲಿ
ಉಷೆ ಸ್ಪರ್ಶಕೆಪುಳಕ
ಮೈಮನದಲಿ

ಎಳ್ಳು ಬೆಲ್ಲ ಹಂಚುವ ಸಡಗರಕೆ
ಲಲನೆಯರ ಲಾಲಿತ್ಯದ ಮೆರಗು

ರಾಸುಗಳ ಕಿಚ್ಚಿನ ಓಟ
ಎಳೆಯರ ಗಾಳಿಪಟದಾಟ
ಮುಗುದೆಯರ ಕೋಲ್ಮಿಂಚಿನೋಟ
ಹರುಷ ಉಕ್ಕಿದೆ ಸುಗ್ಗಿಕಣಿತದಿ

ಸಂಕುಚಿತ ಮನದ ತಮ ಕರಗಿ
ಸಾಗಲಿ ಸೂರ್ಯ ಅಶಾಂತಿಯ ಪಥದಿಂದ ಶಾಂತಿ ಸಾಮರಸ್ಯದ ಸಂಕ್ರಮಣ ಕಾಲದತ್ತ


Leave a Reply

Back To Top