ಕನ್ನಡಮ್ಮನ ಬೆಡಗು

ಕವಿತೆ

ಕನ್ನಡಮ್ಮನ ಬೆಡಗು

ವೀಣಾ ರಮೇಶ್

ಕರುನಾಡು ನನ್ನದು
ಕನ್ನಡವದೇ ಸಾಕು
ನನಗೆ ಬಿರುದು
ಸಂಸ್ಕೃತಿಯ ತವರಿದು
ಹಸಿರು ಸಿರಿಯ
ಶೃಂಗಾರದಲಿ ಬಿರಿದು

ಧೀರ ಶರಧಿಯ ಬಗೆದು
ಕವಿಶ್ರೇಷ್ಠ ರ ಆಗೆದು
ಸಾಹಿತ್ಯ ಶಿಖರದ
ನೆತ್ತಿಯಲಿ ಇಳಿದು
ಹರಿಸಿದಳು ಅಕ್ಷರಧಾರೆ
ಮೊಗೆ ಮೊಗೆದು

ಮಲೆನಾಡ ಕಾಡಲ್ಲಿ
ಕಂಗೊಳಿಸಿದ ಸುಂದರಿ
ರಸಋಷಿಗೆ ಜ್ಞಾನಪೀಠದ
ಹೆಮ್ಮೆಯ ಗರಿ
ನಾಲ್ಕು ತಂತಿಗಳಲಿ
ಮೀಟಿದ ನಾದಲಹರಿ
ನಮ್ಮ ವರಕವಿ

ಶಿಲ್ಪಕಲೆ,ಬೇಲೂರು ಹಳೇಬೀಡಿನ ಬೆಡಗು
ರಾಜ ವೈಭೋಗದ
ಮೈಸೂರಿನ ಸೊಬಗು
ಹಂಪಿಯ ಸುವರ್ಣ ಯುಗ ಕನ್ನಡಾಂಬೆಯ
ಮೆರುಗು.

ಯಕ್ಷ ಪ್ರೇಮಿಗಳ ಹೃದಯದಲಿ
ಯಕ್ಷಗಾನದ ಹೆಜ್ಜೆಗಳಲಿ
ಮದ್ದಳೆಯ ಸದ್ದಲ್ಲಿ
ಕುಣಿಯಿತು ಯಕ್ಷಗಾನ
ಕಾರಂತರ ಹೆಜ್ಜೆಗಳಲಿ

ಎಲ್ಲೆಲ್ಲೂ
ಮೊಳಗಲಿ ನಿನ್ನ ಕಹಳೆ
ಸಮರಸದ ಸಹಬಾಳ್ವೆ
ಬೆಳಗಲಿ ,ಹರಡಲಿ
ಕನ್ನಡ ದೇವಿಯ
ಪ್ರಭಾವಳಿ

**********

Leave a Reply

Back To Top