ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮನ ನೆಡದಾಗ

ರೇಶ್ಮಾಗುಳೇದಗುಡ್ಡಾಕರ್

ಗಾಂಧಿಯೇ ಮೊದಲ ಕವಿತೆ

ನಡೆಯುತ್ತ ನಡೆಯುತ್ತಾ ನಡೆದ
ದಾರಿಯೇ ಕಾಣಲಿಲ್ಲ ಹಿಂತಿರುಗಿ
ನೋಡಿದಾಗ ಮುಂದಿರುವ ಗೂಢಾರಣ್ಯವು
ನಡಿಗೆಗೆ ಧೊಳಿಪಟವಾಗಿ
ಅವಶೇಷವೇ ಇಲ್ಲದಂತಾಗಿತ್ತು …..!

ಬದುಕಿನ ಪ್ರವಾಹಕ್ಕೆ ನಿಲ್ಲದ
ಪಯಣ ರಭಸದಿ ಹುಡುಕುತ್ತಲೆ
ಇತ್ತು ನೆಮ್ಮದಿಯ ದಡವ
ದಣಿವರಿಯದ ದೇಹದ ಜೊತೆಗೆ
ಹೆಗಲಲ್ಲಿ ಭದ್ರವಾಗಿದ್ದವು ಕನಸಿನ
ಜೋಳಿಗೆ

ಒಮ್ಮೊಮ್ಮೆ ನಿಂತಲ್ಲೇ ನಿಂತು ,
ಕಾದು ,ಕಾದು , ಕೆಂಡಕಿಂತಲು
ಬಿಸಿಯಾಗಿ ! ಎಲ್ಲ ಬೇಗುದಿಗಳನ್ನು
ತನ್ನೊಳಗೆ ಸುಟ್ಟು ಬೂದಿಮಾಡಿತು ……

ದಿಟ್ಟತನ ನೋಡುಗರ ಎದೆಯಲ್ಲಿ
ಭಯದ ಬುಗುರಿಯ ಆಡಿಸಿದ್ದು
ಕ್ಷಣ ಮಾತ್ರದಲ್ಲಿ
ಸಂಕೋಲೆಗಳನ್ನು ಕಿತ್ತು ಒಸೆದಮೇಲೆ
ಹೆದರುವದು ಯಾತಕ್ಕೆ ?
ಭವಿಷ್ಯ ಕ್ಕೂ ,ವಾಸ್ತವಕ್ಕೂ …..
ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವು
ಭಯದ ಭೂತಗಳು …

*******************************

About The Author

2 thoughts on “ಮನ ನೆಡದಾಗ”

Leave a Reply

You cannot copy content of this page