ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಟಂಕಾಗಳು

ಟಂಕಾಗಳು ಕೆ. ಸುನಂದಾ ಹಸಿದ ಹೊಟ್ಟೆಅರಸು ವೇಷ ; ಖಾಲಿಊಟದ ತಟ್ಟೆಜೀವನ ಸಾಗಿಸಲುಬೀದಿ ನಾಟಕದಾಟ** ನಡೆ ನುಡಿಯುಒಂದಾಗಲು ; ಜೀವನಸಾರ್ಥಕವಾಯ್ತುಕಪಟ ಮೋಸಗಳುಅಧಃಪತನ ವಾಯ್ತು** ನಾನೇ ಎಂಬುದುಅಹಂಕಾರ ; ನನ್ನದೇಎಂದರೆ ನಾಶಜೀವನ ನಡೆಸಲುಅರಿತು ಸಾಗಬೇಕು** ಜೀವನದಲ್ಲಿಸತ್ಯಕ್ಕೆ ; ಸಾವೇ ಇಲ್ಲಅಸತ್ಯ ಬೇಡಸಂಸ್ಕಾರ ವಂತರಿಗೆಜಯ ಕಟ್ಟಿಟ್ಟ ಬುತ್ತಿ** ಸಾವಿರ ಜನಸೇರಿ ಆಡುವ ಮಾತುಲೆಕ್ಕಕ್ಕೆ ಅಲ್ಲಆತ್ಮನ ನಿರ್ಧಾರವುಒಳಿತಿಗೆ ದಾರಿಯು** ಜೀವನ ಸಾರಕೆಲಸ ಮಾಡಿ ತಿನ್ನುಅನ್ಯರನೆಂದೂತಿರಸ್ಕರಿಸದಿರುಒಳಿತಿನ ಗುಟ್ಟಿದು** ಆಡದೇ ಮಾಡುಕೆಲಸ ಕೈ ಬಿಡದುಹಂಬಲವೇಕೆಫಲ ಅವನ ಇಚ್ಛೆನಿಷ್ಕಾಮ ಕರ್ಮ ಸಾಕು* ಸತ್ಯದ ನುಡಿಕೊನೆವರೆಗೆ ನಡಿಅಸತ್ಯ ಬೇಡದೇವನೇ ಬರುವನುಭಕ್ತನಿದ್ದೆಡೆ ಓಡಿ **************************************

ಟಂಕಾಗಳು Read Post »

ಕಾವ್ಯಯಾನ

ನವನವೋನ್ಮೇಶಶಾಲಿನಿ !

ಕವಿತೆ ನವನವೋನ್ಮೇಶಶಾಲಿನಿ ! ಕಾತ್ಯಾಯಿನಿ ಕುಂಜಿಬೆಟ್ಟು ಕವನ ಹುಟ್ಟುತ್ತಿಲ್ಲನವಮಾಸ ಉರುಳಿದರೂಹೆರದೆ ಹೊಟ್ಟೆಯೇ ಮೈ ಆಗಿರುವ ತುಂಬುಬಸಿರಿಯ ಹಾಗೆ ಅಂಗಾತಏದುಸಿರಲಿ ಅವಡುಗಚ್ಚಿ ಕಾಯುತ್ತಿರುವೆ ನಾಳೆ ಮೋಡಗಳ ಗಭ೯ ಸೀಳಿಕೊಂಡುನೇಸರ ಹುಟ್ಟುತ್ತಾನೆಕಾಳುಗಳು ಕಣ್ತೆರೆದುಕವಿತೆಗಳನ್ನು ಹೆರುತ್ತವೆಕಿರಣಗಳು ಆಟಿಕೆಗಳಾಗುತ್ತವೆಸುರುಳಿ ಸುಳಿವ ಕೋಮಲ ಬೆರಳುಗಳಿಗೆಇರುಳಲಿ ಹೂವುಗಳು ಬಸಿರಲಿ ಕಾಯಿಬ್ರೂಣಗಳನ್ನು ಹೆರಲುಕಾಯುತ್ತವೆಎಲ್ಲ ನಾಮ೯ಲ್ ಡೆಲಿವರಿ ನಾಳೆಗಳು ನಗುತ್ತವೆ ಕಾಲದ ಧಾವಂತದ ನಡಿಗೆ ಕಂಡುಮುಸಿಮುಸಿ ಎಂತೆಂಥ ಭಾಸ ಭವಭೂತಿ ಬೋಜಕಾಳಿದಾಸರು ಕಾಳುಗಳಲ್ಲಿ ಕಣ್ತೆರೆದು ಹಾಲತೆನೆತೆನೆಗಳನ್ನು ಉಣಿಸಿ…ಭಾಸನು ಕಾಲಕ್ಕೆ ದಾಸನಾಗಿಭವಭೂತಿಯು ಕಾಲರುದ್ರನ ಹಣೆಯ ವಿಭೂತಿಯಾಗಿಕಾಲ ತಾನು ಹೆತ್ತದ್ದನ್ನೇ ತಾನೇ ತೆತ್ತು… ಕಾಳಿದಾಸನು ಕಾಲದಾಸನಾಗಿ… ಕಾವ್ಯ ಕಾಲ ಕಾಲಕ್ಕೂ ಹೊಸ ಹೊಸತಾಗಿ ಕಾಲಾತೀತವಾಗಿ… ನವನವೋನ್ಮೇಶಶಾಲಿನಿ ! ಓಹ್! ನಾನು ಈಗಷ್ಟೇ ಹೆತ್ತ ಕವಿತೆಒಂದು ಇರುವೆಯ ಹಾಗೆ ಒಂದು ಅಕ್ಕಿಕಾಳು ಹೊತ್ತು ನಡೆಯುತ್ತಲೇ ಇದೆಕಾಲನ ತುಟಿಯ ಸಂದಿಯಲ್ಲಿ *******************************************

ನವನವೋನ್ಮೇಶಶಾಲಿನಿ ! Read Post »

ಕಾವ್ಯಯಾನ

ಒಳ್ಳೆಯ ದಿನವೆಂದರೆ…

ವಿಲಿಯಂ ಬ್ಲೇಕ್ ನ Holy Thursday ಅನುವಾದ: ವಿಠ್ಠಲ ದಳವಾಯಿ ಕಂಪಿಸುವ ದನಿಯು ಹಾಡೇ?ಅದು ಸಂತಸದ ಪದವಾಗಿ ಬದಲಾದೀತೆ?ಬಹುಪಾಲು ಮಕ್ಕಳು ಮೂಳೆ ಚಕ್ಕಳವಾದರೆಇದು ಬಡವರ ಭೂಮಿಯೇ ಹೌದು! ಅವರ ಮಗನ ಕಣ್ಣು ಎಂದೂ ಹೊಳೆಯುವದಿಲ್ಲಬರದಿಂದ ಬಣ್ಣಗೆಟ್ಟು ಒಣಗಿಯೇ ಇವೆ ಹೊಲಬದುಕು ಪೂರಾ ಕಲ್ಲು ಮುಳ್ಳಿನ ಹಾದಿಎಂದಿಗೆ ಕೊನೆ ಮಾಗಿ ಚಳಿಯ ತೇದಿ? ಒಂದು ಸಿರಿವಂತ, ಫಲವತ್ತಾದ ಭೂಮಿಯಲ್ಲಿಅತ್ತು ಅತ್ತು ಸತ್ತು ಹೋಗುವ ಕಂದಮ್ಮಗಳಿಗೆತುತ್ತು ಉಣಿಸಲೂ ಕೈಯೇಳದಿದ್ದರೆಈ ನೆಲ ಭವ್ಯ, ಪವಿತ್ರ ಎನ್ನಬಹುದೇ? ಎಲ್ಲೆಡೆಗೂ ಸೂರ್ಯನ ಬೆಳಗು ಬಂದರೆಎಲ್ಲೆಡೆಗೂ ಭೋರ್ಗರೆದು ಮಳೆ ಸುರಿದರೆಎಂದೂ ಹಸಿವಿನಿಂದ ದಿಗಿಲಾಗೋದಿಲ್ಲ ಪರಿವಾರಆಗ ಕರೆಯಬಹುದು ಅದು ಪವಿತ್ರ ಗುರುವಾರ ****************************************

ಒಳ್ಳೆಯ ದಿನವೆಂದರೆ… Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯ ಮಲ್ಲ ಇಲ್ಲಿ ಚುನಾವಣೆಯ ಹಸಿವು ಹೆಚ್ಚಾಗುತಿದೆಮುಖಂಡರುಗಳ ಓಡಾಟವು ಹೆಚ್ಚಾಗುತಿದೆ ಗಲ್ಲಿ-ಗಲ್ಲಿಗಳಲ್ಲಿ ಓಟು-ನೋಟಿನದ್ದೆ ಮಾತುಮನೆ-ಮನಗಳಲ್ಲಿ ಮತ್ಸರವು ಹೆಚ್ಚಾಗುತಿದೆ ಶಾಂತಿಗಾಗಿ ಅವಿರೋಧವೆ ಚಂದ ಎನ್ನುವರುಕೋಟಿ ಕಬಳಿಸುವ ದಾಹವು ಹೆಚ್ಚಾಗುತಿದೆ ಊರು ಉದ್ಧಾರದ ಮಾತುಗಳು ಕೇಳುತಿವೆದೊಡ್ಡವರಲ್ಲಿ ತಿನ್ನುವ ಗುಣವು ಹೆಚ್ಚಾಗುತ್ತಿದೆ ಬೇಲಿಯೇ ಎದ್ದು ಹೊಲ ಮೇಯುತಿದೆ ‘ಮಲ್ಲಿ’ಜನರ ಮನಸುಗಳಲ್ಲಿ ಕ್ರೋಧವು ಹೆಚ್ಚಾಗುತಿದೆ ******************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶುಭಲಕ್ಷ್ಮಿ ಆರ್ ನಾಯಕ ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲುವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತುಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದುಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನುನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ ಎಲ್ಲರೂ ಎಲ್ಲರ ಒಳಿತನೆ ಬಯಸುತ್ತಿರುವಾಗಜೀವನದಲಿ ಜಂಜಾಟದಿಂದ ಕುಗ್ಗದಿರು ಗೆಳತಿ ಅರಿತು ಬಾಳಿದರೆ ಜಗದಲಿ ಮುಳ್ಳು ಹೂವಾಗುವುದುಸಹನೆಯಿಂದ ಬಾಳ ನೂಕುವುದ ಮರೆಯದಿರು ಗೆಳತಿ ಆತ್ಮಸಾಕ್ಷಿಯಿಂದ ಒಳಿತ ಬಯಸಿದೆ ಶುಭಳ ಮನವುಅರಿಯದೇ ಅದನು ನೀ ಸುಮ್ಮನೆ ರೇಗದಿರು ಗೆಳತಿ ********************************

ಗಜಲ್ Read Post »

ಕಾವ್ಯಯಾನ

ಅಪ್ಪನ ಕೊನೇ ಪತ್ರ.!

ಕವಿತೆ ಅಪ್ಪನ ಕೊನೇ ಪತ್ರ.! ಅಲ್ಲಾಗಿರಿರಾಜ್ ಕನಕಗಿರಿ ಬರುವ ಹೊಸ್ತಿಲು ಹುಣ್ಣಿಮೆಗೆರಕ್ತ ಹೆಪ್ಪುಗಟ್ಟುವ ಚಳಿ ಗಾಳಿ. ಒಂದು ವೇಳೆ ನಾನು ಕೊರೆಯುವ ಚಳಿಗೆಬೀಸುವ ವಿಷ ಗಾಳಿಗೆ ದಿಲ್ಲಿ ಗಡಿಯಲ್ಲಿಹೆಣವಾದರೆ ಯಾರೂ ಹೆದರಬೇಡಿ. ನನ್ನ ಹೆಣಕ್ಕೆ ಗೋರಿ ಕಟ್ಟುವ ಬದಲುಕೊರೆಯುವ ಚಳಿಯಲ್ಲಿ ನನ್ನ ಹೆಣ ಸುಟ್ಟು ಮೈ ಬಿಸಿ ಮಾಡಿಕೊಳ್ಳಿ.ಮುಂದಿನ ದಿನಗಳ ಹೋರಾಟಕ್ಕೆ ಅಣಿಯಾಗಿ. ನನ್ಹೆಣ ಸುಟ್ಟ ಬೂದಿ ಮನೆಗೆ ಬಂದರೆ ನಿನ್ನವ್ವನ ಹಣೆಗೆ ಹಚ್ಚಿ.ಕಣ್ಣೀರು ಬಂದರೆ ಬೆಳೆಗೆ ಹರಿಸಿಬಿಡಿ.ನಾ ಇಲ್ಲವೆಂದು ಒಕ್ಕಲುತನ ಜೊತೆಗೆ ಹೋರಾಟಎಂದೂ ನಿಲ್ಲದಿರಲಿ ಮಗನೆ. ಇದು ನಿನಗೆ ಕೊನೇ ಪತ್ರ…. ಇಂತಿ ನಿನ್ನ ಅಪ್ಪ “ಅನ್ನದಾತ”. ************************************

ಅಪ್ಪನ ಕೊನೇ ಪತ್ರ.! Read Post »

ಇತರೆ

ಮಲೆನಾಡಿಗರ ತುಮುಲ

ಅನಿಸಿಕೆ ಮಲೆನಾಡಿಗರ ತುಮುಲ ಗಣೇಶಭಟ್ ಶಿರಸಿ ಪಶ್ಚಿಮ ಘಟ್ಟಗಳ ಹಾಗೂ ಅಲ್ಲಿನ ಜೀವವೈವಿದ್ಯ ರಕ್ಷಣೆಯ ಉದ್ದೇಶದಿಂದ ೨೦೧೧ರಲ್ಲಿ ಡಾ. ಮಾಧವ ಗಾಡ್ಗೀಲ್ ಸಮಿತಿ ನೀಡಿದ ವರದಿಯನ್ನು ತಿರಸ್ಕರಿಸಿದನಂತರ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವ ಸಮಿತಿ ರಚಿಸಲಾಗಿತ್ತು. ಪಶ್ಚಿಮ ಘಟ್ಟದಲ್ಲಿ ಮಾನವನ ಹಸ್ತಕ್ಷೇಪವನ್ನು ಸೀಮಿತಗೊಳಿಸಬೇಕೆಂದು ಸೂಚಿಸಿರುವ ಎರಡನೇ ವರದಿಯ ಅನುಷ್ಠಾನಕ್ಕೂ ಹಿಂಜರಿಯುತ್ತಿರುವ ಕರ್ನಾಟಕದ ಸರ್ಕಾರ ಹಸಿರು ನ್ಯಾಯಾಲಯದ ಮೆಟ್ತಲೇರುವ ಪ್ರಯತ್ನ ನಡೆಸಿದೆ. ಈ ಎರಡೂ ವರದಿಗಳು ಪರಿಸರ ಪೂರಕ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತವೆಯಾದರೂ, ಡಾ. ಮಾಧವ ಗಾಡ್ಗೀಳ್ ವರದಿ ಹೆಚ್ಚು ಜನಪರವಾಗಿದೆ. ಪ್ರತಿಯೊಂದು ಅಭಿವೃದ್ಧಿ ಯೋಜನೆಯಲ್ಲೂ ಜನರ ಸಹಭಾಗಿತ್ವವನ್ನ ಕಡ್ಡಾಯಗೊಳಿಸಬೇಕೆಂಬ ಗಾಡ್ಗೀಳ ವರದಿ, ಗುತ್ತಿಗೆದಾರರ, ಉದ್ಯಮಿಗಳ, ಅಧಿಕಾರಿಗಳ ರಾಜಕಾರಣಿಗಳ ಕಣ್ಣುರಿಗೆ ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಸರ್ಕಾರದ ಖಜಾನೆಯನ್ನು ಲೂಟಿಹೊಡೆಯುತ್ತಿರುವ ಗುಂಪಿಗೆ, ಜನಸಾಮಾನ್ಯರಿಗೆ ಆರ್ಥಿಕ ಅಧಿಕಾರ ಸಿಗುವುದು ಬೇಕಾಗಿಲ್ಲ. ಜನಸಾಮಾನ್ಯರು ಈ ಗುಂಪಿನ ಗುಲಾಮರಾಗಿ ಸದಾ ಇರಬೇಕು, ಸಂಪತ್ತನ್ನು ತಾವು ಕೊಳ್ಳೆಹೊಡೆಯುತ್ತಿರಬೇಕೆಂದು ಬಯಸುವವರು ಈ ವರದಿಯ ಕುರಿತು ಜನರಲ್ಲಿ ಅಪನಂಬಿಕೆ, ಭೀತಿಯನ್ನು ಹುಟ್ಟಿಸುತ್ತಿದ್ದಾರೆ.   ಪರಿಸರ ಪೂರಕ ಅಭಿವೃದ್ಧಿಯ ಪಥದಿಂದಲೇ ಮಾನವ ಸಮಾಜದ ಏಳ್ಗೆ , ಉನ್ನತಿ, ಮತ್ತು ಪ್ರಗತಿಯ ನಿರಂತರತೆ ಸಾಧ್ಯ. ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಎಷ್ಟೋ ನಾಗರಿಕತೆಗಳು ನಶಿಸಿಹೋಗಿದ್ದನ್ನು ಇತಿಹಾಸ ದಾಖಲಿಸಿದೆ. ಆರ್ಥಿಕ ವಿಕೇಂದ್ರೀಕರಣದತ್ತ ಅಡಿ ಇಡುವ ಗಾಡ್ಗೀಳ ವರದಿಯ ಅನುಷ್ಠಾನ ಉತ್ತಮ ಆಯ್ಕೆ. ಈ ವರದಿಯನ್ನು ಈಗಾಗಲೇ ಮೂಲೆಗುಂಪು ಮಾಡಿರುವದರಿಂದ ಕನಿಷ್ಠ ಪಕ್ಷ ಕಸ್ತೂರಿರಂಗನ್ ವರದಿಯನ್ನಾದರೂ ಅನುಷ್ಠಾನಕ್ಕೆ ತಂದು , ಮಾನವ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ತಡೆ ಒಡ್ಡಲೇ ಬೇಕು. ಸ್ವಾರ್ಥಿಗಳ ಹುನ್ನಾರಕ್ಕೆ ಒತ್ತು ನೀಡಿದರೆ,  ರಾಜ್ಯದ ಪರಿಸ್ಥಿತಿ ಅದರಲ್ಲೂ ವಿಷೇಶವಾಗಿ ಮಲೆನಾಡ ನಿವಾಸಿಗಳ ಬದುಕು ಅಪಾಯಕ್ಕೆ ಸಿಲುಕುವುದು ನಿಶ್ಚಿತ.     ಪಶ್ಚಿಮ ಘಟ್ಟಗಳ  ಅರಣ್ಯ ಮತ್ತು ಜೀವ ವೈವಿಧ್ಯತೆಯ ನಾಶದಿಂದ ಭಾರತ ಮಾತ್ರವಲ್ಲ ಪಾಶ್ಚ್ಯಾತ್ಯ ರಾಷ್ಟ್ರಗಳೂ ಹವಾಮಾನ ವೈಪರೀತ್ಯ  ಅನುಭವಿಸ ಬೇಕಾಗುತ್ತದೆಂಬುದನ್ನು ಅಧ್ಯಯನಗಳು ದೃಢಪಡಿಸಿವೆ.       ಮಾನವ ಮತ್ತು ಪರಿಸರದ ನಡುವೆ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಜನರ ಸಹಭಾಗಿತ್ವದೊಂದಿಗೆ ಈ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯ; ಸ್ವ ಹಿತಾಸಕ್ತ ಗುಂಪುಗಳ ಹಿಡಿತದಿಂದ ಹೊರಬಂದು ನೇತಾರರು ನಿರ್ಣಯ ತೆಗೆದುಕೊಳ್ಳಬೇಕು ಅಷ್ಟೇ.   ********************************************

ಮಲೆನಾಡಿಗರ ತುಮುಲ Read Post »

ಕಾವ್ಯಯಾನ

ನೀಳ್ಗೆರೆ

ಕವಿತೆ ನೀಳ್ಗೆರೆ ಅಕ್ಷತಾ ರಾಜ್ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ !ನೀನೋ! ಉಸುರುತಿಹುದು ನೀಳ್ಗೆರೆ || ಊರು ಕೇರಿ ಸುತ್ತಿ ಸವೆದ ಪಾದ ತಿರುಗಿ ಸೋಲಲುಅಲ್ಲೇ ಮಂಡಿಯೊಳಗೆ ನಿಂತ ಕಾಲ್ಗಳವು ನಕ್ಕವುಮುಸುಕಿನೊಳಗೆ ಜಟ್ಟಿಗುದ್ದು ಕಂಡವನಾರೋ ಅರಿಯರುಮೊದಲು ಯಾರು ಎಂಬ ಈರ್ಷ್ಯೆ ಸುತ್ತಲಿದ್ದ ಜಗದೊಳು ಹಲವು ಬಣ್ಣ ಇಹುದು ಅಲ್ಲಿ ಕಾಣದಿಹ ಕತ್ತಲುನೂರು ರುಚಿಯು ಸೇರಿ ನಡೆಯುತಿಹುದು ಹಿಮನದಿಬೀಸುಗಾಳಿಯೆಲ್ಲಿ ಒಂಟಿ? ಸುತ್ತಲಿಹರು ಬೇಡರುಆದರೊಂದು ಪ್ರಶ್ನೆಯಿಹುದು ಯಾರು ಮುಂದೆ ನಡೆಯೊಳು ಅರಳಿ ನಿಂತ ಕಿರಣದೆದುರು ‘ನಾನು’ ಮಂಜುಬಿಂದುಕರಗಲೇನೋ! ಉಳಿಯಲೇನೋ! ಪ್ರಶ್ನೆಯಿಹುದೇ ಅಲ್ಲಿ?ನಡೆದು ನಡೆವ ಕಾಲುಹಾದಿ ತಿರುವು ಹಲವು ಇಲ್ಲಿಗೆರೆಯ ದಾಟಿ ನಡೆದರದುವೆ ಮಂದೆ ತೊರೆದ ಹಾದಿ ಯಾಕೆ ಹೀಗೆ ನಮ್ಮ ನಡುವೆ ಕಾಣದಿಹ ತೆಳ್ಗೊಡೆನಾನೋ ! ನೀನೋ ! ಉಸುರುತಿಹುದು ನೀಳ್ಗೆರೆ || ******************************************

ನೀಳ್ಗೆರೆ Read Post »

ಇತರೆ

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು

ಲೇಖನ ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು  ಡಾ.ರೇಣುಕಾ. ಅ. ಕಠಾರಿ ಕನ್ನಡ ನಾಡಿನ ಚರಿತ್ರೆಯಲ್ಲಿ ‘ವಚನ ಸಾಹಿತ್ಯ’ ಹೊಸ ಮೈಲುಗಲ್ಲನ್ನೇ ಸೃಷ್ಠಿಸಿತ್ತು. ಕುಟುಂಬದಲ್ಲಿ ಹೆಣ್ಣು ಸ್ವಾತಂತ್ರ್ಯ   ಕಳೆದುಕೊಂಡ ಕಾಲದಲ್ಲಿ ಶರಣ ಪರಂಪರೆಯು ಆಕೆಗೆ ಸ್ಥಾನವನ್ನು ಒದಗಿಸಿಕೊಟ್ಟಿತು. ಈ ಮೊದಲು ಹೆಣ್ಣನ್ನು ಶೂದ್ರ ಸಮಳೆಂಬ ಅಪವಾದವನ್ನು ಹೊತ್ತುಕೊಂಡು ಬದುಕಬೇಕಾಗಬೇಕಿತ್ತು. ಹಾಗೆ ಅವಳನ್ನು  ಅಜ್ಞಾನಿಯನ್ನಾಗಿ ಮಾಡಿದ್ದರು. ಮಹಿಳೆಯರಿಗೆ ಮೋಕ್ಷ ಬೇಕಾದರೆ ಪತಿಯ ಸೇವೆಯ ಮೂಲಕವೇ ಸಾಧ್ಯವೆಂಬ ಕಲ್ಪನೆಯನ್ನು ಬಲವಂತವಾಗಿ ಆಕೆಯ ಮೇಲೆ ಹೊರಿಸುತ್ತಿದ್ದರು. ಈ ಮೊದಲು ನಡೆಯುತ್ತಿದ್ದ ಎಲ್ಲ ಹಿಂಸಾ ಕೃತ್ಯಗಳಿಗೆ ಅಂತ್ಯ ಹಾಕಬೇಕೆಂದೇ ಹನ್ನೆರಡನೆಯ ಶತಮಾನವು ಹೊಸ ಕ್ರಾಂತಿಯ ರೂಪವನ್ನು ತಾಳಿತು. ಆ ಸಂದರ್ಭದಲ್ಲಿ ಹಲವಾರು ಮಹಿಳಾ ವಚನಕಾರ್ತಿಯರು ತಮ್ಮ ಜೀವನದಲ್ಲಿ ಕಂಡಿರುವ ಎಲ್ಲ ಸುಖ-ದು:ಖಗಳನ್ನು, ನೋವು-ನಲಿವುಗಳನ್ನು ಹೀಗೆ ಮೊದಲಾದುವುಗಳ ಕುರಿತು ವಚನಗಳನ್ನು ರಚಿಸುವುದರ ಮೂಲಕ ತಮ್ಮ ತಮ್ಮ ಆತ್ಮ ನಿವೇದನೆಯನ್ನು ಮಾಡಿಕೊಳ್ಳಲು ಹೊಸ ಮಾರ್ಗದ ಸೃಷ್ಠಿ ಆಗತೊಡಗಿತು. ಅಕ್ಷರವನ್ನು ಕಲಿಯದ ಅದೆಷ್ಟೋ ಮಹಿಳೆಯರು ಅಕ್ಷರ ಜ್ಞಾನದೊಂದಿಗೆ ಸಾಹಿತ್ಯ ಸೃಷ್ಠಿಯಲ್ಲಿ ಮುಂದಾದರು. ಚಿಂತನ ಮಂಥನಗಳೊಂದಿಗೆ ಪರಸ್ಪರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳವಂತಹ ಕಾಲ ನಿರ್ಮಾಣವಾಯಿತು. ಹೀಗೆ ಮಹಿಳೆಯರು ತಮ್ಮತನವನ್ನು ಅರಿತುಕೊಳ್ಳಲು ಆತ್ಮಾವಲೋಕನ ಮಾಡಿಕೊಂಡರು.  ಶರಣರ ದಾಂಪತ್ಯ ಒಂದು ಪರಂಪರೆಯ ಧರ್ಮವನ್ನೆ ಸೃಷ್ಟಿಸಿದೆ. ಬದುಕಿನಲ್ಲಿ ಶಾಂತಿ ನೆಮ್ಮದಿ ಸುಖ-ದು:ಖಗಳನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಂತಹ ಧ್ಯಾನ ಮಾರ್ಗದ ಜೊತೆಗೆ ಆಧ್ಯಾತ್ಮದ ಕೊಂಡಿಯನ್ನು ಅನುಸರಿಸಿದರು. ಲೌಕಿಕ ಬದುಕನ್ನು ಸಂಪನ್ನಗೊಳಿಸಿಕೊಳ್ಳುವುದು ಮತ್ತು ಅದರ ಜೊತೆಗೆ ಪರಮಾರ್ಥ ಸಾಧನೆಯ ಗುರಿ ಶರಣರದಾಗಿತ್ತು. ಇದಕ್ಕೆ ಅನುಗುಣವಾಗಿ ಸಾಕಷ್ಟು ಶರಣೆಯರು ಸತಿಪತಿ ಭಾವವನ್ನು ಪಡೆದರು. ಅನುಭವಿಸಿದ ಜೀವನದ ಸಾರವನ್ನು ಕಂಡುಕೊಂಡು, ಮಲ್ಲಿಕಾರ್ಜುನನ್ನೇ ಹುಡುಕುತ್ತ ನಿರತಳಾಗಿಯೇ ಆಧ್ಯಾತ್ಮದ ಸಾಧನೆಯನ್ನು ಕಂಡುಕೊಂಡವಳು ಅಕ್ಕಮಹಾದೇವಿ. ಅಂತೆಯೇ ಆತ್ಮ ನಿವೇದನೆಯೆನ್ನುವುದು ಎರಡು ಹೃದಯಗಳ ಅನ್ಯೋನ್ಯ ಮಿಲನವಾಗಿ ಶಿವಪಥದಲ್ಲಿ ನಡೆದು ದೇವನ ಪಾದವನ್ನು ಸೇರಲು ಸಹಾಯಕವಾಗುವ ಒಂದು ಅವಕಾಶವೆಂದು ನಂಬಿಕೊಂಡಿದ್ದರು. ಆಕೆಯ ಬದುಕಿನ ಚಿತ್ರಣದ ಎಲ್ಲ ನೆಲೆಗಳು ಅವಳ ವಚನಗಳಲ್ಲಿ ಕಾಣುತ್ತೇವೆ. ಅಕ್ಕನ ಒಂದೊಂದು ವಚನಗಳು ಒಂದೊಂದು ಕಥೆಯನ್ನು ಹೇಳುತ್ತವೆ ಹಾಗೇ ಆತ್ಮದ ಪರಿಶೋಧವೂ ಇದೆ. ಇಡೀ ಜೀವನದುದ್ದಕ್ಕೂ ಚೆನ್ನನನ್ನು ನೆನೆಯುತ್ತಲೆ ತನ್ನೊಡಲದ ವೇದನೆಯನ್ನು ಅನುಸಂಧಾನಿಸಿಕೊಳ್ಳಲು ಪ್ರಯತ್ದಿಸಿದ ಮಹಾ ಶರಣೆ. “ಉರಕ್ಕೆ ಜವ್ವನಗಳು ಬಾರದ ಮುನ್ನ ಮನಕ್ಕೆ ನಾಚಿಕೆಗಳು ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ ಹೆಂಗೂಸೆಂಬ ಭಾವ ತೋರುವ ಮುನ್ನ ನಮ್ಮವರಂದೆ ಮದುವೆಯ ಮಾಡಿದರು”            (ಅಕ್ಕನ ವಚನಗಳು: ಸಂ.ಡಾ.ಸಾ.ಶಿ. ಮರುಳಯ್ಯ- ೧೯೯೩. ಬೆಂಗಳೂರು ಪು.ಸಂ೧೫)             ಅಕ್ಕನಲ್ಲಿ ಅಂತರಂಗದ ತೊಳಲಾಟವಿದೆ. ಆಕೆಯ ಭಾವದ ಜೊತೆಗೆ ಆಕೆ ಹಾಕಿಕೊಂಡಿರುವ ನೂರಾರು ಆಸೆ ಆಕಾಂಕ್ಷೆಗಳನ್ನು ಬಹಿರಂಗವಾಗಿ ಇಡಲು ಬಯಸುವ ಸಾಲುಗಳು ಎದ್ದು ಕಾಣುತ್ತವೆ. ಜಾಗತೀಕರಣದ ತುದಿಯನ್ನು ದಾಟಿ ನಿಲ್ಲುತ್ತಿರುವ ನಾವುಗಳು ಆತ್ಮದ ಶೋಧದಲ್ಲಿ ತೊಡಗುವುದು ಅನಿವಾರ‍್ಯವೆನಿಸುತ್ತದೆ. ತಾನು ಮನದಲ್ಲಿ ಬಯಸಿದ ಆ ಚೆನ್ನನ ಹೆಸರು ಹೇಳುವ ಮೊದಲೆ, ಹಿರಿಯರು ಮಾಡಿದ ಮದುವೆಗೆ ಅರ್ಥವಿದೆಯಾ? ಎಂದು ವ್ಯಂಗ್ಯವಾಗಿ ಹೇಳುವ ನುಡಿ ಇವತ್ತಿಗೂ ಜೀವಂತವಾಗಿದೆ. ಅಕ್ಕನ ಈ ವಚನದಲ್ಲಿ ಹೇಳಿದ ಎಲ್ಲ ಶಬ್ಧಗಳ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಸತ್ಯದ ಕೊಂಡಿ ಒಂದೊಂದೇ ಧ್ವನಿಗಳನ್ನು ಧ್ವನಿಸಿ ಎದ್ದು ನಿಲ್ಲುತ್ತವೆ. ಆನಾದಿ ಕಾಲದಿಂದಲೂ ಹೆಣ್ಣು ಎನ್ನುವ ಕಾರಣಕ್ಕೆ ಒಪ್ಪಿಗೆ ಇಲ್ಲದಿದ್ದರೂ ಮದುವೆಯೆಂಬ ಹೊಸ ಹಣೆ ಬರಹವನ್ನು ಕಟ್ಟುತ್ತಿದ್ದರು. ಇದು ಶೋಷಣೆಯ ರೂಪವೆಂದು ಭಾವಿಸುವಲ್ಲಿ ಯಾವುದೆ ತಪ್ಪಿಲ್ಲವೆಂದು ಅನಿಸುತ್ತದೆ. ಹಾಗೇ ಅಕ್ಕ ಪ್ರಶ್ನಿಸುವ ಮಾತು ಬಂಡಾಯದ ಹೊಸರೂಪವೇ ಹೊರತು ಬೇರೇನಲ್ಲ? “ಚೆನ್ನ ಮಲ್ಲಿಕಾರ್ಜುನಯ್ಯ ನೀನಿಲ್ಲದನ್ಯರ ಮುಖವ ನೋಂಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ”                  (ಅಕ್ಕನ ವಚನಗಳು, ದ್ವಿ ಸಂಸ್ಕರಣ ಸಂ.ಎಲ್. ಬಸವರಾಜು.೧೯೭೨,ಮೈಸೂರು)             ಹೆಣ್ಣು ತನ್ನತನದ ಹಿಂದೆಯೇ ಸಾಗುವುದು ಆಕೆ ಕಟ್ಟಿಕೊಂಡ ಒಂದು ಬೇಲಿ ಅಷ್ಟೇ. ಆದರೆ ಅದರಾಚೆಗೂ ಆಕೆಯ ಬೇಕು ಬೇಡಿಕೆಗಳನ್ನು ಮನದಾಳದಂತೆ ಪೂರೈಸಿಕೊಳ್ಳಲು ಅಸಾಧ್ಯವೆಂದು ಭಾವಿಸಬೇಕು? ಪರಸ್ಪರವಾಗಿ ಇರುವ ಬದುಕೇ ಭಿನ್ನ. ಮುಖಾಮುಖಿಯಾಗಿಸದೇ ಮತ್ತು ಬೇರೆ ಎಲ್ಲಿಯೋ ಇರುವ ಚಹರೆಯನ್ನು ಅನುಸಂಧಾನ ಮಾಡಿಕೊಳ್ಳಲು ಸಾಧ್ಯವೇ? ಎಂಬ ವಿಚಾರವಂತಿಕೆಗಳು ಬಹು ಸವಾಲನ್ನು ಎತ್ತುತ್ತವೆ. ಅಕ್ಕನ ತುಡಿತಗಳು ವೇದನೆಯಾಗಿ ಅಲಿದಾಡುವ ಬಗೆ ಬಹು ತನ್ಮಯತೆಯನ್ನು ಉಂಟು ಮಾಡುತ್ತದೆ. ಅಂದರೆ, ‘ಚೆನ್ನ ಮಲ್ಲಿಕಾರ್ಜುನೆನಗೆ ಕಟ್ಟದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವನು’. ಎಂದು ಅರುಹುವ ಮಾತು ಇಂದಿಗೂ ಜೀವಂತವಾಗಿ ನಮ್ಮನ್ನು ಪ್ರಶ್ನಿಸುತ್ತದೆ. ಇದೇ ನಾವು ಆತ್ಮಾವಲೋಕವೆಂದು ಕರೆಯುವುದು. ಹುಡುಕಾಟದ ಆಕೆಯ ತಲ್ಲಣಗಳು ಒಂದೊಂದೆ ಅಲೆಯಾಗಿ ಅಪ್ಪಳಿಸುವ ಒಡಲ ದಂಡೆಗೆ ಆತ್ಮದ ಸಾಕ್ಷಾತ್ಕಾರದ ಅವತಾರವಾಗಿದೆಂದು ಅರ್ಥವಾಗುವುದು. “ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದ ಬಳಿಕ ಕಾಯದ ಸುಖವ ನಾನೇನೆಂದರಿಯನು ಆರು ಸೋಂಕಿದರೆಂದರಿಯೆನು ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚ(ಪ್ಪಿ)ತವಾದ ಒಳಿಕ ಹೌರಗೇನಾಯಿತೆಂದರಿಯೆನು” (ಪು.ಸA ೨೩ ವಚನ ಸಂ ೭೬-ಅಕ್ಕನ ವಚನಗಳು: ದ್ವಿ ಸಂಸ್ಕರಣ ಸಂ.ಎಲ್.ಬಸವರಾಜು ೧೯೭೨, ಮೈಸೂರು) ಹೆಣ್ಣು ತನ್ನೊಳಗೆಯೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡಿದ್ದಾಳೆ.  ಹಾಗೆ ಅಕ್ಕನ ಮನದ ಪ್ರಪಂಚದಲ್ಲಿ ಆ ಚೆನ್ನನ್ನು ಕಾಣುವ ಹಂಬಲ ಹೆಣ್ತತನದ ಒಂದು ರೂಪ ಅಷ್ಟೇ ಎಂದು ತಿಳಿಯುತ್ತದೆ. ಇದು ಸರ್ವಕಾಲಕ್ಕೂ ಸತ್ಯವೆ ಆಗಿರುತ್ತದೆ. ನೀನೆ ನನ್ನ ಪ್ರಾಣವೆಂದ ಮೇಲೆ ಎಲ್ಲವೂ ನೀನೆ ಇದರಲ್ಲಿ ಸಂಶಯವೇ? ಪಾರಮಾರ್ಥಿಕದ ಸುಖವೇ ಬೇಡವೆಂದು ತನುವಿನಲ್ಲಿ ಇರುವ ನಿನ್ನ ಇರುವಿಕೆಯ ಕಾಯಕವೊಂದೆ ಸಾಕು ಎಂದು ಹೆಣ್ಣು ತನ್ನ ನಿವೇದನೆಗಳನ್ನು ಒಗ್ಗೂಡಿಸುವ ಪರಿ ಅಕ್ಕನಲ್ಲಿ ಅನನ್ಯವಾಗಿದೆ.. ಬೇರೆಯವರ ಮಾತುಗಳ ನಿಂದನೆಯೂ ಬಂದರೂ ಬಿರುಗಾಳಿಗೆ ಅಣುರೇಣುವಿನಂತೆ ಮಾಯವಾಗುವೆಂಬ ಅಕ್ಕನ ಮನದ ಒಪ್ಪತ ನಿಲುವು ಸಾಟಿಯಾಗಿದೆ. “ಹಸಿವಾದಡೆ ಊರೊಳಗೆ ಬಿಕ್ಷಾನ್ನಗಳುಂಟು  ತೃಷೆಯಾದಡೆ ಕೆರೆ ಹಳ್ಳ ಭಾವಿಗಳುಂಟು  ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು  ಶಯನಕ್ಕೆ ಹಾಳು ದೇಗುಲಗಳುಂಟು  ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು” (ಶಿವಶರಣೆಯರ ವಚನ ಸಂಪುಟ. ಸಂ.ಡಾ. ವೀರಣ್ಣ ರಾಜೂರ ೧೯೯೩. ಬೆಂಗಳೂರು ಪು.ಸಂ. ೧೦೪. ಪು. ೩೩೬)  ಸಹಜವಾಗಿ ಜೀವವನ್ನು ಉಳಿಸಿಕೊಳ್ಳಲು ಮತ್ತು ಬದುಕು ನಡೆಸಲು ಕೆಲವು ಸಕ್ರಿಯೆಗಳ ಅಥವಾ ಆಹಾರ ಪದಾರ್ಥಗಳು ಚಿಕ್ಕ ಗುಡಿಸಲು ಅವಶ್ಯಕವಿರುತ್ತದೆ. ಅವುಗಳನ್ನು ಪಡೆದುಕೊಂಡ ಮೇಲೆ ಮನವೆಂಬ ಶುದ್ಧಿಗೆ ಆತ್ಮದ ಅವಲೋಕನ ಹೊಳೆಯಬೇಕು. ಆಗ ಮಾತ್ರ ಆತ್ಮದ ಸಂಗಾತಿಯ ಪೂರ್ಣತೆ ಇರುವಿಕೆ ಆಗುತ್ತದೆ. ಅಕ್ಕಳ ಚೆನ್ನನೊಂದಿಗೆ ಮಾಡಿಕೊಂಡಿರುವ ಸಂಧಾನದ ಅರಿವು ಇಂದು ನೂತನ. “ಅಕ್ಕನ ವಚನಗಳು ಅವಳ ಆತ್ಮಚರಿತೆಯ ಮತ್ತು ವ್ಯಕ್ತಿತ್ವದ ಜೀವಂತ ಮತ್ತು ಜ್ವಲಂತ ದಾಖಲೆಗಳಾಗಿವೆ’’ ಎಂದು ಡಾ.ರಂ.ಶ್ರೀ ಮುಗಳಿರವರು ಹೇಳಿರುವ ಹೇಳಿಕೆ ಸತ್ಯವೆನಿಸುವುದು. ಆತ್ಮವಂಚನೆ ಇಲ್ಲದೆ ಅಕ್ಕನ ವಚನಗಳು ಆತ್ಮ ಶೋಧನೆಯ ಪ್ರಕ್ರಿಯೆಯಲ್ಲಿ ಮೂಡಿಬಂದಿದೆ. ಹಾಗೇ ಚೆನ್ನನೊಂದಿಗೆ ಅಕ್ಕ ಅತ್ಮವಲೋಕನ ಮಾಡಿಕೊಂಡ ಪರಿ ಅನನ್ಯವಾದುದು. ಅಕ್ಕಳ ಈ ನಿವೇದನೆಯು ಪರಂಪರೆಯಲ್ಲಿ ಒಂದು ಗಟ್ಟಿ ನೆಲೆಯನ್ನು ಸ್ಥಾಪಿಸಿದ್ದು ವಿಶೇಷ. ಹೆಣ್ಣಿನ ಆತ್ಮ ನಿವೇದನೆಗೆ ಮುಕ್ತ ಸ್ವಾತಂತ್ರ್ಯವಿದ್ದಿಲ್ಲಾ? ಎನ್ನುವ ಅನುಮಾನದ ಬೆಂಕಿ ಇದೀಗ ಬೂದಿಯಾಗಿದೆ. ಸ್ವಾತಂತ್ರ್ಯ ವಿಲ್ಲದ ಕಾಲದಲ್ಲಿ ಅಕ್ಕಳು ತನ್ನ ವಿಚಾರದ ಕಹಿ-ಸಿಹಿ ನೆನಪುಗಳನ್ನು ಆತ್ಮದೊಳಗೆ ಅಡಗಿಸಿ ಅವುಗಳನ್ನು ವಿಹರಿಸಲು ರೂಪಕದ ಮೂಲಕ ಕ್ರಿಯೆ ನಡೆಸಿದಳು. ಆ ಕಾರಣಕ್ಕೆ ಅಕ್ಕಮಹಾದೇವಿಯ ಆತ್ಮ ನಿವೇದನೆಗಳ ಹೊಳಪು ಇವತ್ತು ಪ್ರಜ್ವಲಿಸುತ್ತಿವೆ. ಹೆಣ್ಣು ಏಕಕಾಲದಲ್ಲಿ ಮಾಯೆಯಾಗಿ, ಸಂಪತ್ತಾಗಿ, ಸಖಿ ಮತ್ತು ಸತಿಯಾಗಿ ಜೊತೆ ಜೊತೆಗೆ ಹಾಕುವ ಹೆಜ್ಜೆಗಳು ಸವಾಲಾಗಿರುತ್ತವೆ. ******************************************************

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು Read Post »

ಇತರೆ

ಚಿಟ್ಟೆ

ಲೇಖನ ಚಿಟ್ಟೆ ಆಶಾ ಸಿದ್ದಲಿಂಗಯ್ಯ ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ. ಕಾಯ್ರ್ನ್ಸ್ ಬರ್ಡ್ವಿಂಗ್ ಎನ್ನುವುದು ಆಸ್ಟ್ರೇಲಿಯಾದಲ್ಲಿನ ಅತಿ ದೊಡ್ಡ ಚಿಟ್ಟೆ ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ ‘ಲೆಪಿಡಾಪ್ಟರಿಸ್ಟ್’ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ. ಜೀವನ ಚಕ್ರ ಒಂದು ಜೀವನ ಚಕ್ರವು ಜೀವಂತ ಜೀವಿಯು ತನ್ನ ಜೀವಿತಾವಧಿಯಲ್ಲಿ ಆರಂಭದಿಂದ ಕೊನೆಯವರೆಗೆ ಹಾದುಹೋಗುವ ಹಂತಗಳಿಂದ ಮಾಡಲ್ಪಟ್ಟಿದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ ಮೆಟಾಮಾರ್ಫಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರ ಅರ್ಥ, ಚಿಟ್ಟೆ ಅದರ ಆರಂಭಿಕ ಲಾರ್ವಾ ಹಂತದಿಂದ ಸಂಪೂರ್ಣವಾಗಿ ಕ್ಯಾಟರ್ಪಿಲ್ಲರ್ ಆಗಿದ್ದರೆ, ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆ ಆಗುತ್ತದೆ. ಚಿಟ್ಟೆಯು ರೂಪ ತಾಳುವ ಮುನ್ನ ಕಂಬಳಿಹುಳುವಾಗಿರುತ್ತದೆ. ಅದರ ಆಹಾರ ಮ್ಯಾಣ ಮಲ್ಲಿಗೆ ಗಿಡ.  ಗಿಡದ  ಎಲೆಯ ತುಂಬೆಲ್ಲಾ ಸುಮಾರು ಗಾಢ ಕೆಂಪು ವರ್ಣದ, ಹಸಿರು ಬಣ್ಣದ ತಲೆ, ಉಳಿದ ಭಾಗದಲ್ಲಿ ಸಣ್ಣ ಸಣ್ಣ ಮುಳ್ಳಿನಂತಹ ಮೃದು ಕವಲುಗಳಿರುವ  ಕಂಬಳಿಹುಳುಗಳು ಹರಿದಾಡುತ್ತಾ ಎಲೆಯನ್ನು ಭಕಾಸುರನಂತೆ ಮುಕ್ಕುತ್ತವೆ. ಹಾಗೆ ಎಲೆಗಳನ್ನು ತಿನ್ನುತ್ತಾ, ತಿನ್ನುತ್ತಾ ಬೆಳೆಯತೊಡಗುತ್ತವೆ. ಚಿಟ್ಟೆ ಜೀವನ ಚಕ್ರವು ನಾಲ್ಕು ಹಂತಗಳನ್ನು ಹೊಂದಿದೆ: ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ. ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿಹುಳುಗಳು ಸಾಮಾನ್ಯವಾಗಿ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರೊಲೆಗ್ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ. ಒಂದು ಕ್ಯಾಟರ್ಪಿಲ್ಲರ್ ಪ್ರಾಥಮಿಕ ಚಟುವಟಿಕೆ ತಿನ್ನುವುದು. ಅವು ಹೊಟ್ಟೆಬಾಕತನದ ಹಸಿವನ್ನು ಹೊಂದಿದ್ದಾವೆ ಮತ್ತು ನಿರಂತರವಾಗಿ ತಿನ್ನುತ್ತವೆ.  ಕ್ಯಾಟರ್ಪಿಲ್ಲರ್ ತಿನ್ನುವುದರಿಂದ, ಅದರ ದೇಹವು ಗಣನೀಯವಾಗಿ ಬೆಳೆಯುತ್ತದೆ. ಕಠಿಣ ಹೊರ ಚರ್ಮ ಅಥವಾ ಎಕ್ಸೋಸ್ಕೆಲೆಟನ್, ಆದಾಗ್ಯೂ, ವಿಸ್ತರಿಸಲಾಗದ ಕ್ಯಾಟರ್ಪಿಲ್ಲರ್ ಜೊತೆಗೆ ಬೆಳೆಯುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ. ಬದಲಾಗಿ, ಹಳೆಯ ಎಕ್ಸೋಸ್ಕೆಲೆಟನ್ನು ಮೊಲ್ಟಿಂಗ್ ಎನ್ನುವ ಪ್ರಕ್ರಿಯೆಯಲ್ಲಿ ಚೆಲ್ಲುತ್ತದೆ ಮತ್ತು ಅದನ್ನು ಹೊಸ, ದೊಡ್ಡದಾದ ಎಕ್ಸೋಸ್ಕೆಲೆಟನ್ ಬದಲಿಸಲಾಗುತ್ತದೆ. ಒಂದು ಮರಿಹುಳುವು ನಾಲ್ಕರಿಂದ ಐದು ಮೊಳಕೆಗಳಷ್ಟು ಹಾದುಹೋಗುವುದಕ್ಕೆ ಮುಂಚೆಯೇ ಹೋಗಬಹುದು. ಚಿಟ್ಟೆಯ ಜೀವನಚಕ್ರದ ನಾಲ್ಕನೇ ಮತ್ತು ಅಂತಿಮ ಹಂತವು ವಯಸ್ಕವಾಗಿದೆ. ಚಿಟ್ಟೆ ಹೊರಹೊಮ್ಮುತ್ತದೆ. ಇದು ಅಂತಿಮವಾಗಿ ಪುನಃ ಚಕ್ರವನ್ನು ಪ್ರಾರಂಭಿಸಲು ಮೊಟ್ಟೆಗಳನ್ನು ಇಡುತ್ತವೆ. ಹೆಚ್ಚಿನ ವಯಸ್ಕ ಚಿಟ್ಟೆಗಳು ಕೇವಲ ಒಂದು ವಾರ ಅಥವಾ ಎರಡು ದಿನಗಳಲ್ಲಿ ಬದುಕುತ್ತವೆ, ಕೆಲವು ಜಾತಿಗಳು 18 ತಿಂಗಳುಗಳವರೆಗೆ ಬದುಕಬಹುದು. ಬಟರ್ಫ್ಲೈ ಚಟುವಟಿಕೆಗಳು ಚಿಟ್ಟೆಗಳು ಸಂಕೀರ್ಣ ಜೀವಿಗಳಾಗಿವೆ. ಅವುಗಳ ದಿನನಿತ್ಯದ ಜೀವನವನ್ನು ಅನೇಕ ಚಟುವಟಿಕೆಗಳಿಂದ ನಿರೂಪಿಸಬಹುದು. ನೀವು ಅನುಸರಿಸುವವರಾಗಿದ್ದರೆ  ಅನೇಕ ಚಟುವಟಿಕೆಗಳಲ್ಲಿ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹೂವಿಂದ ಹೂವಿಗೆ ಹಾರುವ ಮಕರಂದವನ್ನು ಹೀರುವ  ಚಿಟ್ಟೆಯನ್ನು ಗಮನಿಸಬಹುದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಕರ್ಷಸಿಸುವ ಚಿಟ್ಟೆಗಳು ಅಲ್ಪಯುಷ್ಯ ಹೊಂದಿದ್ದರೂ ಹಾರಡುತ್ತ ಖುಷಿಯಾಗಿ ಜೀವನ ಕಳೆಯುತ್ತಾ, ಸದಾ ಕೊರಗುವ ಮನುಷ್ಯರಿಗೆ ಜೀವನ ಪಾಠವು ಸಹ ಹೌದು ಚಿಟ್ಟೆಯ ಆಹಾರ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತ ಮತ್ತು ವಯಸ್ಕ ಚಿಟ್ಟೆಗಳು ವಿಭಿನ್ನ ಆಹಾರದ ಆದ್ಯತೆಗಳನ್ನು ಹೊಂದಿವೆ, ಅವುಗಳ ಬಾಯಿಯ ಭಾಗಗಳಲ್ಲಿನ ವ್ಯತ್ಯಾಸಗಳಿಂದಾಗಿ. ಮರಿಹುಳುಗಳು ತಿನ್ನುವುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತವೆ, ಅದಕ್ಕಾಗಿಯೇ ಸ್ತ್ರೀ ಚಿಟ್ಟೆ ಕೆಲವು ಸಸ್ಯಗಳಲ್ಲಿ ಮಾತ್ರ ತನ್ನ ಮೊಟ್ಟೆಗಳನ್ನು ಇಡುತ್ತದೆ. ಆಕೆಯ ಮೊಟ್ಟೆಗಳಿಂದ ಹೊರಬರುವ ಹಸಿದ ಮರಿಹುಳುಗಳಿಗೆ ಸೂಕ್ತವಾದ ಆಹಾರವಾಗಿ ಸಸ್ಯಗಳು ಯಾವವುಗಳನ್ನು ಸೇವಿಸುತ್ತವೆ ಎಂದು ಅವು ಸಹಜವಾಗಿ ತಿಳಿದಿರುತ್ತವೆ. ಮರಿಹುಳುಗಳು ಹೆಚ್ಚು ಚಲಿಸುವುದಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಒಂದೇ ಸಸ್ಯದಲ್ಲಿ ಅಥವಾ ಅದೇ ಎಲೆಗಳಲ್ಲಿ ಕಳೆಯಬಹುದು! ತಮ್ಮ ಪ್ರಾಥಮಿಕ ಗುರಿ ಅವು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ಅವುಗಳ pupate ಸಾಕಷ್ಟು ದೊಡ್ಡದಾಗಿದೆ. ಮರಿಹುಳುಗಳು ಎದೆಹಾಲು ಎಂದು ಕರೆಯಲ್ಪಡುವ ಬಾಯಿ ಭಾಗಗಳನ್ನು ತಿನ್ನುತ್ತವೆ, ಅವುಗಳು ಎಲೆಗಳು ಮತ್ತು ಇತರ ಸಸ್ಯ ಭಾಗಗಳನ್ನು ತಿನ್ನಲು ನೆರವಾಗುತ್ತವೆ. ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಕೆಲವು ಮರಿಹುಳುಗಳನ್ನು ಕೀಟಗಳೆಂದು ಪರಿಗಣಿಸಲಾಗುತ್ತದೆ. ಮರಿಹುಳುಗಳು ಹೆಚ್ಚುವರಿ ನೀರನ್ನು ಕುಡಿಯುವ ಅಗತ್ಯವಿಲ್ಲ ಏಕೆಂದರೆ ಅವು ತಿನ್ನುವ ಸಸ್ಯಗಳಿಂದ ಬೇಕಾಗಿರುವ ನೀರನ್ನು ಪಡೆಯುತ್ತವೆ.  ಚಿಟ್ಟೆಗಳು ಸುತ್ತಲೂ ಸುತ್ತುತ್ತವೆ ಮತ್ತು ಹೆಚ್ಚು ವಿಶಾಲ ಪ್ರದೇಶದ ಮೇಲೆ ಸೂಕ್ತವಾದ ಆಹಾರವನ್ನು ಹುಡುಕುತ್ತವೆ..  ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಕ ಚಿಟ್ಟೆಗಳು ವಿವಿಧ ದ್ರವಗಳ ಮೇಲೆ ಮಾತ್ರ ಆಹಾರವನ್ನು ನೀಡುತ್ತವೆ. ಅವು ಪ್ರೋಬೊಸಿಸ್ ಎಂಬ ಟ್ಯೂಬ್ ತರಹದ ನಾಲಿಗೆ ಮೂಲಕ ಕುಡಿಯುತ್ತವೆ. ಇದು ಸಪ್ ದ್ರವ ಆಹಾರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಮತ್ತು ನಂತರ ಚಿಟ್ಟೆ ಆಹಾರವನ್ನು ನೀಡುತ್ತಿರುವಾಗ ಮತ್ತೆ ಸುರುಳಿಯಾಗುತ್ತದೆ. ಹೆಚ್ಚಿನ ಚಿಟ್ಟೆಗಳು ಹೂವಿನ ಮಕರಂದವನ್ನು ಬಯಸುತ್ತವೆ, ಆದರೆ ಇತರವುಗಳು ಮರಗಳನ್ನು ಕೊಳೆಯುವಲ್ಲಿ ಮತ್ತು ಪ್ರಾಣಿ ಸಗಣಿಗಳಲ್ಲಿ, ಕೊಳೆಯುತ್ತಿರುವ ಹಣ್ಣುಗಳಲ್ಲಿ ಕಂಡುಬರುವ ದ್ರವಗಳ ಮೇಲೆ ಆಹಾರವನ್ನು ನೀಡುತ್ತವೆ. ಬಿಸಿಲು ಪ್ರದೇಶಗಳು ಮತ್ತು ಗಾಳಿಯಿಂದ ರಕ್ಷಿಸಲು ಬಯಸುತ್ತವೆ. .*********************************************

ಚಿಟ್ಟೆ Read Post »

You cannot copy content of this page

Scroll to Top