ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಭೂಕ೦ಪವಾದ ಮೇಲೆ ಮೇಗರವಳ್ಳಿ ರಮೇಶ್ ಭೂಕ೦ಪವೊ೦ದು ಸ೦ಭವಿಸಿಊರಿಗೆ ಊರೇ ಅವಶೇಷ ವಾದಾಗಹಾಗೇ ಬಿಡಲಾಗುತ್ತದೆಯೆ?ಅಣಿಗೊಳಿಸಲೇ ಬೇಕು ಮತ್ತೆ. ಯದ್ವಾ ತದ್ವಾ ಬಿದ್ದಿರುವಇಟ್ಟಿಗೆ. ಕಬ್ಬಿಣದ ರಾಡುಗಳು, ಗರ್ಡರ್ ಗಳುಛಾವಣಿಯ ಸ್ಲ್ಯಾಬ್,ಮುರಿದ ಫ಼ರ್ನಿಚರ್ಗಳುಒಡೆದ ಕನ್ನಡಿಯ ಚೂರು, ಟೀವಿಪಾತ್ರೆ ಪಡಗ, ನುಜ್ಜುಗುಜ್ಜಾದ ಟ್ರ೦ಕು,ಹರಿದ ಮಣ್ಣಾದ ಬಟ್ಟೆ ಬರೆ,ಚೆಲ್ಲಿದ ಅನ್ನ, ರೊಟ್ಟಿ, ಬ್ರೆಡ್ಡುದೇವರ ಪಟಇವುಗಳ ಮಧ್ಯ ದಾರಿ ಮಾಡಿಕೊಳ್ಳುತ್ತಾಅವಶೇಷಗಳಡಿಯಲ್ಲಿ ಆಕ್ರ೦ದಿಸುತ್ತಿರುವವರನ್ನುನಿಧಾನಎತ್ತಿ ಹತ್ತಿರದ ಆಸ್ಪತ್ರೆಗೆ ಸೇರಿಸ ಬೇಕುಹೆಣಗಳನ್ನೆತ್ತಿ ಸ೦ಸ್ಕಾರ ಮಾಡ ಬೇಕು ಬೃಹತ್ ಯ೦ತ್ರಗಳನ್ನು ತ೦ದುಅವಶೇಷಗಳನ್ನೆಲ್ಲ ಎತ್ತಿಅಣಿಗೊಳಿಸ ಬೇಕು ಮತ್ತೆಹೊಸದಾಗಿ ಊರು ಕಟ್ಟಲು. ವಿನಾಶದ ಒಡಲಿ೦ದ ಮತ್ತೆಬದುಕು ಚಿಗುರಿಸಲು. **************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನುಡಿ ನಾಗರ ಅರುಣಾ ರಾವ್ ಮನುಜನ ಮುಖದಲ್ಲಿನಗೆಯ ಮುಖವಾಡಮರೆಮಾಚುವುದುದುಗುಡ, ದುಮ್ಮಾನಅಷ್ಟೇಕೆ ?ಅಸೂಯೆ ಅನುಮಾನ! ಮುಖವಾಡದ ಹಿಂದಿನ ಮನಅರಿಯದೇ ನಿಜವನ್ನ?ಕಣ್ಣು ಹೇಳದಿದ್ದೀತೇಎದೆಯ ಮಾತನ್ನ?ನಂಬಬಹುದೇ ನಿನ್ನನ್ನಓ ನಾಲಿಗೆಯೇ?ನುಡಿವೆ ನೀ ಏನನ್ನ?ನೀ ಸುಮ್ಮನಿದ್ದರೇನೆ ಚೆನ್ನ! ನಿನ್ನಿಂದ ನೋವುಂಡ ಮನನಯನದಲ್ಲಿ ತೋರೀತುತನ್ನ ನೋವನ್ನ|ಎಲುಬಿಲ್ಲದ ಜಿಹ್ವೆ ನೀನುಡಿದ ನುಡಿಯದುಗಾಯಪಡಿಸೀತು ಎನ್ನ! ಬಿಗಿತುಟಿಯ ದುಡಿವಂದುನೋವಪಡುವಂದು, ಎಂದೆಂದಮಾತಿನಲಿ ಹುಡುಗಿಹುದು ಸತ್ಯಬಿಗಿದ ತುಟಿ ತರಬಲ್ಲದು ಹಾಸಕಟು ಮಾತಿಗಾತಿಗದೆರಾಮಬಾಣ! *********************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಕವೇದನೆ ಶಿವಲೀಲಾ ಹುಣಸಗಿ ಮೌನಕ್ಕೆ ನೂರು ಭಾವಲೇಪನದ ನಂಟುಹಕ್ಕಿ ರೆಕ್ಕೆ ಬಿಚ್ಚಿ ಹಾರಲಾಗದೆ ತತ್ತರಿಸಿದೆಕಣ್ಣಂಚಲಿ ಕಂಬನಿಯ ಹನಿಗಳುತೊಟ್ಟಿಕ್ಕಿದಂತೆ ಸಂತೈಸದಾ ಮನವುಮೂಲೆಗುಂಪಾಗಿ ರೋಧಿಸುತ್ತಿದೆ.ಹೊದ್ದ ಕಂಬಳಿಯ ತುಂಬಾ ತೂತುಬಿತ್ತರಿಸಲಾದಿತೇ ಅಂತರಾಳದ ಹೊರತುಬರದ ಮೇಲೆ ಬರೆಯಳೆದಂತೆ ನೆನಪುಕರಗಬಹುದೇ ಬುಗಿಲೆದ್ದ ಆಕ್ರೋಶದ ಕಂಪುಕಾದಕಬ್ಬಿಣವು ಕುಲುಮೆಯಲಿ ಪಳಗಿದಂತೆನಿನ್ನಾರ್ಭಟಕೆ ಒಂದು ಕ್ಷಣ ಮೈ ಮರೆತಂತೆಹಾಯ್ದ ಹೊದ್ದ ಮನವರಿಕೆಗಳ ತೀಡಿದಾಂಗೆಹರಯವೊಂದೆ ಇಳೆಗೆ ಆಗಾಗಾ ಮೈತಳೆದಾಂಗೆಬರಿದಾದ ಒಡಲು ಬೆಸದು ಮಿಸುಕಿದಂತೆಕಣ್ಣು,ಮೂಗು ಕೈಕಾಲು ಮೂಡಿದ್ದಂತೆಯಾವ ಮೂರ್ತವೋ ಕೊನೆಗಾಲಕೆಕಡಲ ಸೇರದಾ ಮರ್ಮವನು ಬಲ್ಲವರಾರುತುಟಿ ಕಚ್ಚಿ ಕರಗಿಸಿದ ಪಿಂಡದಂತೆ ಎಲ್ಲವುಮೌನವೊಂದು ಉತ್ತರವಾದಿತೆ ಕಂಗಳಿಗೆನಿನ್ನ ಎದೆಯ ಅಗ್ನಿಯಲಿ ಬೇಯುವಮೂಕವೇದನೆಯ ಹಸುಗೂಸಾದಿತೆ.ಇರಳು ಕರಗಿ ಹಗಲು ತೆರೆದರೂಮೂಡದಾ ಕಾಮನಬಿಲ್ಲುಗಳುನೀರಿಗೆಗಳು ನೀರೆಯರಿಲ್ಲದೆ ಒದ್ದಾಡಿಕರಗಿದ ಮೇಣದಂತೆ ಕಮರಿ ಹೋಗಿವೆಗುಡಿಸಲೊಳಗೆ ಕೊಸರಾಡಿ ಸೋತಿವೆಹರೆಯದ ಹಂಗು ತೊರೆದ ಬಾಳಿಗೆತ್ಯಾಪೆಯಾಗಿ ಹೊಸೆಯ ಹೊರಟಂತೆಉಸಿರಾದ ಪ್ರಕೃತಿಯ ಗರ್ಭದೊಳುಮತ್ತೆ ಮೂಡನೆ ನಭದಲಿ ಭಾಸ್ಕರಮೌನ ಮುರಿದು ತಾರೆಯಾಗಲುಮನ ಬಿಚ್ಚಿ ಹಾರಲು ಅನುವಾಗಲು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ರೇಷ್ಮಾ ಕಂದಕೂರ ಮೌನದ ಆಲಾಪಮಾತಿನ ಆರ್ಭಟ ಸರಿಸಿಶಾಂತ ಚಿತ್ತಕೆ ಆಹ್ವಾನ ದುಗುಡ ಅದುಮಿಡುತಸುಪ್ತ ಲೋಕದಿ ವಿಹಾರಜಂಜಡಗಳ ವಿರಮಿಸುವಿಕೆ ಸಮಸ್ಯಯ ಪಿರಾಮಿಡ್ಡಿಗೆಉಪಶಮನದ ಪರಿಸೂಕ್ಷ್ಮ ಅವಲೋಕನ ಪ್ರತಿಭಟಿಸುವ ಪ್ರತಿರೂಪನಿರ್ಣಯಗಳ ಸೂಚಿಕುಹಕತಗೆ ವಿಹಂಗಮ ನೋಟ ಗಟ್ಟಿತನದ ಪ್ರದರ್ಶನಹತೋಟಿಯ ಮನದೊಡಲುಮುಂದಿನ ಸವಾಲಿಗೆ ಅಣಿ ಚಿತ್ತದಲಿ ಅಚ್ಚೊತ್ತಿಮುತ್ತುವವರಿಗ ಎಚ್ಚರಿಕೆ ಘಂಟೆನಡುವೆ ಕೈ ಬಿಟ್ಟವರಿಗೆ ಸವಾಲು ನಿರಾಳತೆಯ ಸ್ವರೂಪವೇದನೆ ಸಹಿಸುವಿಕೆಅಂತರಾಳದ ಸತ್ವ. *******************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮಳೆ ಹನಿ ಕನ್ನಡಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ. ಇಂಗ್ಲೀಷಿಗೆ: ಸಮತಾ ಆರ್. ಮಳೆ ನಿಂತುಹೋದ ಮೇಲೂಯಾರನ್ನೋ ಕಾಯುತ್ತಾಒಂಟಿ ಹಗ್ಗದ ಮೇಲೆಆತುಕೊಂಡ ಸಾಲು ಸಾಲುಮಳೆ ಮಣಿಗಳುಒಲ್ಲದ ಮನಸ್ಸಿನಿಂದಧರೆಗುರುಳುತ್ತಿವೆ. ಬೆಡಗು ಬಿನ್ನಾಣದಲಿಒಂದೇ ಬಿಂದು ಹನಿಹೂ ದಳದ ಮೇಲೆಎತ್ತಿ ಬೊಗಸೆಯೊಳಗಿಟ್ಟುಜೋಪಾನ ಮಾಡ ಬೇಕೆನ್ನುವಷ್ಟರಲ್ಲಿ..ಸಣ್ಣಗೊಂದು ನಕ್ಕುಹೂವಿನೆದೆಯೊಳಗೆ ಹುದುಗಿ ಹೋಯಿತು. ಎಲೆಯ ತುದಿಯಲ್ಲಿಕೊನೇ ಹನಿಇನ್ನೇನು ಬೀಳಬೇಕುನನ್ನೊಳಗೆ ತೀರದ ಸಂಕಟಮೆಲ್ಲಗೆ ಬೆರಳ ತುದಿಗೆಇಳಿಬಿಟ್ಟು ಕಣ್ಣ ಪಾಪೆಯೊಳಗೆಮುಚ್ಚಿಟ್ಟೆ. ನನಗೂ ಮಳೆಗೂ ಈಗತೀರದ ನಂಟು. *********************** A Drop..Even after the rain has stoppedAs if waiting for someoneDrops lined on a lone ropeAre dripping downWith a heavy heart… A lovely single dropOn a petal is gleaming andWhen went to pick itAnd protect in my handIt escaped smiling and hidIn the bosom of the flower. A last drop at the tip of a leafWas about to dropThen unable to bear that painI held it on my finger tipAnd hid it inside my eye. Now I and rain are bonded forever…

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಇಲ್ಲಿ ಎಲ್ಲವೂ ಬದಲಾಗುತ್ತದೆ ಅರ್ಪಣಾ ಮೂರ್ತಿ ದಿನಕ್ಕೊಂದು ಬಣ್ಣ ಬದಲಿಸುವಇದೇ ಇಳಿಸಂಜೆಗಳಲ್ಲಿನಾ ಬದಲಾಗದ ನೆನಪ ಹರವಿದ್ದೇನೆ, ಬರಡು ಬಯಲಿನಮನಸುಗಳ ನಡುವೆನಾಕೊನರಿದ ಕೊರಡಿನ ಹಸಿರನ್ನಷ್ಟೇ ಮನಕ್ಕಿಳಿಸಿಕೊಂಡಿದ್ದೇನೆ, ದಿಕ್ಕು ತಪ್ಪಿದ ನದಿಗಳುಅಲ್ಲೆಲ್ಲೋ ಸಂಗಮಿಸುವಾಗನಾನಿಲ್ಲಿ ಅಲೆದಾಡಿ ನದಿಯ ಕಾಯುವ ಕಡಲಾಗಿದ್ದೇನೆ., ಹೌದು ಇಲ್ಲಿ ಎಲ್ಲವೂ ಬದಲಾಗಿದೆ, ನಾನು?ಊಹೂ,ನಾನೀಗಲೂಬಾರದ ಅಮವಾಸ್ಯೆಯ ಚಂದಿರನ ಬೆಳಕಚುಕ್ಕಿಯಲಿ ಹುಡುಕುವಕಾತರದ ಕಣ್ಣಾಗಿದ್ದೇನೆ…. ************************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಗೋಲಿಗಳು ಹಿಂದಿಮೂಲ:- ಮರಹೂಮ್ ಇಮ್ತಿಯಾಜ. ಕನ್ನಡಕ್ಕೆ:-ಡಿ.ಎಮ್. ನದಾಫ್ ನನ್ನ ಬಾಲ್ಯದ ಮೊದಲಗಳಿಕೆ ಅದ ನಾನು ಕಡು ಶ್ರಮದಿ ಗಳಿಸಿದೆ,ಹಗಲೆನ್ನಲಿಲ್ಲ,ರಾತ್ರಿಯನಲಿಲ್ಲಹಸಿವೆನಲಿಲ್ಲ,ನೀರಕಾಣಲಿಲ್ಲ,ಬರೀ ಗಳಿಕೆಯೋ ಗಳಿಕೆ. ಹಲ ಹಲವು ಬಣ್ಣ-ಬಣ್ಣದವುಕೆಲ-ಕೆಲವು  ಒಡಕು ತಡುಕುವಿಧ-ವಿಧದ ಹೊಂಬಣ್ಣದವುಕೆಲವು ನನ್ನಂತೆ ಅಮೂಲ್ಯಹಲವಲ್ಲಿ ಗೋವ ಕಂಗಳ ನೈರ್ಮಲ್ಯ ಕಿಸೆಯ ಕೊನೆ ಮೂಲೆ ಹರಿದಿತ್ತುಆದರೂ ಅದು ಗೋಟಿಗಳಿಂದ ತುಂಬಿತ್ತು.ವೇಗವಾಗಿ ಓಡಿದಾಗಲೆಲ್ಲಇವುಗಳ ಕಿಂಕಿಣಿ ಕಿವಿ ತುಂಬುತಿತ್ತು. ನಾನು ನನಗಿಂತ ಅವುಗಳನ್ನೇಹೆಚ್ಚು ಸಂಭಾಳಿಸಿದ್ದೆ’ಹಿಟ್ಟಿನ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೆ,ಗೊತ್ತಾಗುತ್ತಿಲ್ಲ ಗೆಳೆಯ ನನ್ನ ಗೋಟಿಗಳು ಎಲ್ಲಿ ಕಳೆದು ಹೋದವು?ತುಂಬಿ ಹರಿಯುವ  ನದಿಯಂತೆ ನನ್ನ ಯೌವನದ ಸೆಳೆವಿನಲ್ಲಿ ಎಲ್ಲಿ ತೇಲಿ ಹೋದವು. *********************************

ಅನುವಾದ ಸಂಗಾತಿ Read Post »

ಇತರೆ

ಲಲಿತ ಪ್ರಬಂಧ

ನೆನಪಿಗೆ ಬರುತ್ತಿಲ್ಲ ಶೀಲಾ ಭಂಡಾರ್ಕರ್ ತಂಗಿ ಫೋನ್ ಮಾಡಿ..” ಅಕ್ಕಾ.. ಈ ಸಲ ದಸರಾ ರಜದಲ್ಲಿ ಊರಿಗೆ ಬಂದಾಗ ಸಾಲೆತ್ತೂರಿಗೆ ಹೋಗಿ ಬರೋಣ್ವಾ? ” ಅಂದಾಗ ನಾನು ಖುಷಿಯಿಂದ “ಹೇಯ್ ನಾನೂ ಅದನ್ನೇ ಯೋಚಿಸ್ತಿದ್ದೆ.. ಖಂಡಿತ ಹೋಗೋಣ” ಅಂದೆ. ಅದಕ್ಕವಳು “ಎಷ್ಟೋ ದಿನದಿಂದ ನನಗೆ ತುಂಬಾ ಆಸೆ ಆಗ್ತಿದೆ ನಾವು ಕಲಿತ ಸ್ಕೂಲು, ಅಪ್ಪನ ಬ್ಯಾಂಕು, ನಾವಿದ್ದ ಮನೆ, ಶೇಷಪ್ಪನ ಅಂಗಡಿ” … ಅನ್ನುವಾಗ ನಾನು ಪಟಕ್ಕನೆ., “ರತ್ನಾಕರ. ನಾನು ರತ್ನಾಕರನನ್ನು ನೋಡಬೇಕು” ಅನ್ನುವುದರೊಳಗೆ ನಮ್ಮವರು ಮನೆಯೊಳಗೆ ಕಾಲಿಟ್ಟಾಯಿತು. ಇನ್ನು ಮಾತಾಡುವುದು ಕಷ್ಟ ಇವರೆದುರಿಗೆ , ನಿಮ್ಮದು ಯಾವಾಗಲೂ ಇದ್ದದ್ದೆ ಪಿಟಕಾಯಣ ಅನ್ನುತ್ತಾರೆ ಅಂತ,  ಅವಳಿಗೆ ಅಂದೆ ” ನಾಳೆ ಮಾತಾಡ್ತೇನೆ ಆಯ್ತಾ”. “ಯಾರದು ರತ್ನಾಕರ?” ಇವರು ಕೇಳಿದರು. ನಾನು ಮನಸ್ಸಿನಲ್ಲೇ,. ರತ್ನಾಕರನ ಬಗ್ಗೆ ಅಂದಿದ್ದು ನನ್ನ ತಂಗಿಗೆ ಕೇಳಿಸಿತ್ತೋ ಇಲ್ಲವೋ ಆದರೆ ಇವರಿಗೆ ಹೇಗೆ ಕೇಳಿಸಿತಪ್ಪ..? ಅಂದುಕೊಂಡು.. ಹಿಹಿ ಇಲ್ಲಪ್ಪ ರತ್ನಕ್ಕ ಅಂತ ಅಂದಿದ್ದು  ಅಂದೆ. ಏನೋ ಸುಮ್ಮನಾದರು. ನಾನು ಮಾತ್ರ ಆವತ್ತು ಇಲ್ಲಿರಲಿಲ್ಲ.. ಮನಸ್ಸೆಲ್ಲ ಸಾಲೆತ್ತೂರೆಂಬ ಚಂದದ ಊರು .. ರತ್ನಾಕರ , ಅವನ ಮುಗ್ಧ ನಗು, ಅವನ ಒಡನಾಟ ಇದನ್ನೇ ಯೋಚಿಸುತ್ತಿತ್ತು. ರತ್ನಾಕರ ನನಗಿಂತ ಒಂದು ವರ್ಷ ಚಿಕ್ಕವನು.. ತುಂಬ ಒಳ್ಳೆಯ ಪಾಪದ ಹುಡುಗ. ಆ ಊರಲ್ಲಿದ್ದ ಒಂದೇ ಶಾಲೆಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ಒಟ್ಟಿಗೆ ಹೋಗುವುದು ಬರುವುದು. ಕುಂಟಲ ಹಣ್ಣು, ಕೇಪಳ ಹಣ್ಣು  ತಿನ್ನಲು ಕಲಿಸಿದ್ದೇ ರತ್ನಾಕರ. ಹಸಿ ಗೇರುಬೀಜಗಳನ್ನು ಒಟ್ಟು ಮಾಡಿ ಒಣಗಿದ ಎಲೆಗಳ ನಡುವೆ ಇಟ್ಟು ಬೆಂಕಿ ಹಾಕಿ ಸುಟ್ಟು ತಿನ್ನೋಣ ಎಂದು ನಮ್ಮನ್ನೆಲ್ಲ ಕರೆದುಕೊಂಡು ಹೋಗಿದ್ದ, ಏನೋ ಸಾಧಿಸುವವರಂತೆ ನಾವೆಲ್ಲ ಸೇರಿ ಸಾಹಸ ಮಾಡುವಾಗ ಗೇರುಬೀಜವೊಂದು ಸಿಡಿದು ಅದರ ಎಣ್ಣೆ ನನ್ನ ಕೈಗೆ ಹಾರಿ ಕಪ್ಪನೆಯ ಬೊಬ್ಬೆ ಬಂದಿದ್ದು.. ಅದರ ಕಲೆ ಇನ್ನೂ ಇದೆ. ಸಾಲೆತ್ತೂರಿನಲ್ಲಿ ನಾವಿದ್ದದ್ದು ಒಂದೇ ವರುಷವಾದರೂ ಈ ಇಡೀ ಜನ್ಮಕ್ಕಾಗುವಷ್ಟು ನೆನಪುಗಳು ಮೆರವಣಿಗೆ ಕಟ್ಟಿಕೊಂಡು ಧಾಪುಗಾಲು ಹಾಕುತ್ತ ಬರುತ್ತವೆ. ಸವಿ ಸವಿ ನೆನಪುಗಳು. ಅಲ್ಲಿ ನಲ್ಲಿ ನೀರಿನ ವ್ಯವಸ್ಥೆ ಇರಲಿಲ್ಲ, ಬಾವಿಯಿಂದಲೇ ಸೇದಿ ತರಬೇಕು. ಅದಕ್ಕಾಗಿ ಒಬ್ಬ ಆಳನ್ನು ಗೊತ್ತು ಮಾಡಿದ್ದರು ಅಪ್ಪ. ಆದರೆ ಅಮ್ಮನಿಗೆ ಅಡುಗೆಗೆ ಮತ್ತು ಕುಡಿಯಲು ತಾನೇ ಸೇದಿ ತರಬೇಕಿತ್ತು. ನಾನೂ ಅಮ್ಮನ ಹಿಂದೆ ಮುಂದೆ ಸುತ್ತುತ್ತಿದ್ದೆ ಬಾವಿಯ ಹತ್ತಿರ. ನನಗೆ ಬರಿಯ ಹನ್ನೊಂದು ವರ್ಷ ಆವಾಗ. ಹಾಗೊಂದು ದಿನ ಯಾರೋ ನೆಂಟರು ಬಂದಿದ್ದರು ಅಮ್ಮ ಅವರಿಗೆ ಕುಡಿಯಲು ನೀರು ಕೊಡುತ್ತ ನಮ್ಮ ಬಾವಿಯ ನೀರು ತುಂಬ ರುಚಿ., ಬಾವಿಯಿಂದ ಸೇದಿದ ಕೂಡಲೇ ಕುಡಿಯಬೇಕು ಅಮೃತವೇ ಅಂತೆಲ್ಲ ಹೊಗಳುವಾಗ.., ನಾನು ಯಾಕೆ ಈಗ ಹೋಗಿ ಬಾವಿಯಿಂದ ನೀರು ತರಬಾರದು..? ಅಮ್ಮ ಹೇಗೂ ಅವರ ಹತ್ತಿರ ಮಾತಾಡುತಿದ್ದಾರಲ್ಲ ಎಂದುಕೊಂಡು ಮೆತ್ತಗೆ ಕೊಡಪಾನ (ಬಿಂದಿಗೆ) ತೆಗೆದುಕೊಂಡು ಬಾವಿಯ ಹತ್ತಿರ ಹೋದೆ. ಅಮ್ಮ ಮಾಡಿದ ಹಾಗೆ ಹಗ್ಗದ ಕುಣಿಕೆಯನ್ನು ಕೊಡದ ಕತ್ತಿಗೆ ಸುತ್ತಿ ಎಳೆದೆ. ಅಮ್ಮನ ಜತೆ ಬಂದಾಗ ಒಂದೊಂದು ಸಲ ಇಷ್ಟು ಮಾಡಿ ನಿಧಾನಕ್ಕೆ ಬಾವಿಯೊಳಗೆ ಕೊಡವನ್ನು ಇಳಿಸುವ ಕೆಲಸ ಮಾಡುತ್ತಾ ಇದ್ದೆ. ಹಾಗಾಗಿ ಆ ಕೆಲಸ ಸುಲಭವಾಗಿ ನಡೆಯಿತು. ಕೊಡ ತುಂಬಿತು. ಇನ್ನೇನು ಎಳೆದರೆ ಆಯಿತು ಎಂದುಕೊಂಡು ಬಾವಿಕಟ್ಟೆಯಲ್ಲಿ ಕಾಲಿಡುವ ತ್ರಿಕೋಣಾಕಾರದ ಸಂಧಿಯಲ್ಲಿ ಕಾಲಿಟ್ಟು ಹಗ್ಗವನ್ನು ಎಳೆಯಲು ನೋಡಿದರೆ.. ಯ್ಯಪ್ಪಾ….!!! ಈಗೇನು ಮಾಡುವುದು…? ಹಗ್ಗ ಬಿಟ್ಟರೆ ಸೊಂಯ್ಯೆಂದು ಸೀದಾ ಬಾವಿಯೊಳಗೆ ಎಂಬುದು ಗೊತ್ತಿತ್ತು. ಏನು ಮಾಡುವುದಪ್ಪ ಈಗ…..??? ಅಲ್ಲಿಯೇ ಬಾವಿಯ ಪಕ್ಕದ ತಗ್ಗಿನಲ್ಲಿ ಮನೆ ರತ್ನಾಕರನದ್ದು… ಯೇ ರತ್ನಾಕರ ಅಂತ ಕೂಗಿದ್ದು ನನಗೇ ಕೇಳಿಸಲಿಲ್ಲ. ಪುನಹ ಜೋರಾಗಿ “ರತ್ನಾಕರ ……….” ಅಂದಾಗ “ಏನು?” ಅಂದಿದ್ದು ಕೇಳಿಸಿತು. “ಇಲ್ಲಿ ಬಾರಾ ಸ್ವಲ್ಪ” ಅಂದೆ. “ಎಲ್ಲಿಯಾ?” ಅಂದ. ಬಾವಿಯ ಹತ್ತಿರ ಅನ್ನುವುದರೊಳಗೆ.. ಒಂದೇ ಹಾರಿಗೆ ಬಂದ ರತ್ನಾಕರ ..ಪಾಪ! ಅವನಿಗೆ ನನ್ನನ್ನು ನೋಡಿ ನಗು. ಅವನ ನಗು ನೋಡಿ ನಂಗೆ ಕೋಪ ಬಂತು ..”ಬಾ ಹಗ್ಗ ಎಳಿ” ಅಂದೆ. “ನೀ ಯಾಕೆ ದೊಡ್ಡ ಜನದ ಹಾಗೆ ಬಂದದ್ದು? ” ಅಂದ. “ಯಾರಿಗೂ ಗೊತ್ತಿಲ್ಲ ನಾನು ಬಂದದ್ದು” ನಾನು ಹೇಳಿದೆ. ಸರಿ.. ಆದರೆ ನಂಗೆ ಕೂಡ ಒಬ್ಬನಿಗೆ ಹಗ್ಗ ಎಳೆಯುವುದಕ್ಕೆ ಆಗ್ಲಿಕ್ಕಿಲ್ಲ .. ಒಂದು ಕೆಲಸ ಮಾಡುವ.. ನೀನು ಹಗ್ಗ ಗಟ್ಟಿ ಹಿಡಕೊಂಡು ನಿಲ್ತಿಯಾ? ಅಂದ. ಹೂಂ… ಅಂದೆ. ಅವನು ಎಳೆದ, ನಾನು ಹಿಡಿದೆ… ಹಾಗಂತ ಅಂದುಕೊಂಡೆ..!! ಆದರೆ ಹಗ್ಗ ಸುಂಯ್…. ಎಂದು ಪುನಹ ಹಿಂದಕ್ಕೆ ಹೋಯಿತು. ಏನು ಮಾಡುವುದು ಎಂದು ಗೊತ್ತಾಗಲಿಲ್ಲ. ದೊಡ್ಡವರನ್ನು ಕರೆಯೋಣ ಎಂದರೆ ಅವರಿಂದ ಬಯ್ಯಿಸಿಕೊಳ್ಳುವುದು ಯಾರು? ರತ್ನಾಕರನಿಗೆ ಒಂದು ಪ್ಲಾನ್ ಹೊಳೆಯಿತು ಎಂದು ಕಾಣುತ್ತದೆ… ಹಹ್ಹಹ್ಹಾ ಅಂತ ನಗುತಿದ್ದ. ನಾವಿಬ್ಬರೂ ಹಗ್ಗ ಹಿಡಿದುಕೊಂಡೇ ನಿಂತಿದ್ದೆವಲ್ಲ..? “ಏನು?” ಅಂದೆ. “ನೋಡು ನಾನು ಹಗ್ಗ ಎಳೆದುಕೊಂಡೇ ಅಲ್ಲಿವರೆಗೆ ಹೋಗ್ತಾ ಇರುತ್ತೇನೆ. ಕೊಡ ಮೇಲೆ ಬಂದಾಗ ಅದನ್ನು ಎತ್ತಿ ಕಟ್ಟೆ ಮೇಲೆ ಇಡುವುದು ನಿನ್ನ ಕೆಲಸ. ಆಗಬಹುದಾ?” ಎಂದ. ಆಗಬಹುದು ಅಂದೆ. ಅವನು ಗತ್ತಿನಿಂದ ಕಳೆದ ವಾರವಷ್ಟೇ ಸಾಲೆತ್ತೂರಿನ ಮೈದಾನದಲ್ಲಿ ನಡೆದ ಬಯಲಾಟದಲ್ಲಿ ಬಂದ ಭೀಮ ಗದೆಯನ್ನು ಹಿಡಿದುಕೊಂಡ ಹಾಗೆ ಬಾವಿಯ ಹಗ್ಗವನ್ನು ಹೆಗಲ ಮೇಲೆ ಇಟ್ಟುಕೊಂಡು ಆ ಕಡೆ ತಿರುಗಿ ಬೀಮನ ಹಾಗೆಯೇ ನಡೆದುಕೊಂಡು ಹೋಗುತಿದ್ದ. ನಾನು ಖುಷಿಯಿಂದ ಅವನನ್ನೇ ನೋಡುತ್ತ ನಗುತ್ತ ನಿಂತುಬಿಟ್ಟೆ. ಅವನು ಅಲ್ಲಿಂದಲೇ “ಬಂತಾ?” ಅಂತ ಕೇಳಿದ ಜೋರಾಗಿ. ನಾನು ತಿರುಗಿ ನೋಡುವಾಗ ಬಿಂದಿಗೆ ರಾಟೆಯ ಹತ್ತಿರ ಇದೆ.. ಹೇಯ್ ಎಂದೆ.. ಅವನು ಗಾಬರಿಯಾಗಿ ತಿರುಗುವುದರೊಳಗೆ.. ಹಗ್ಗ ಸರಸರನೇ ಸೀದಾ ಬಾವಿಯ ಒಳಗೆ.. ಈಗ ಹಗ್ಗದ ಈ ತುದಿಯ ಗಂಟು ರಾಟೆಯ ಹತ್ತಿರ. ಕಷ್ಟ ಪಟ್ಟು ಆ ಗಂಟನ್ನು ಹಿಡಿದು ಎಳೆಯಲು ನೋಡಿದರೆ ಹಗ್ಗ ಸಲೀಸಾಗಿ ಬರ್ತಾ ಇದೆ… ಬಾವಿಯ ಒಳಗೆ ಇಣುಕಿದೆವು ಇಬ್ಬರೂ…. ಕೊಡವಿಲ್ಲ ..!! ದೇವರೇ ಏನಪ್ಪ ಮಾಡುವುದು ಈಗ…? ನಂಗೆ ಭಯ, ಇವನೇನಾದರೂ ಓಡಿ ಹೋದರೆ ನಾನೊಬ್ಬಳೇ ಬಯ್ಯಿಸಿಕೊಳ್ಳಬೇಕಲ್ಲ. ಅವನೂ ಸ್ವಲ್ಪ ಭಯ , ಸ್ವಲ್ಪ ಕೋಪದಲ್ಲಿ “ನಿಂಗೆ ಹೇಳಿದೆ ನಾನು ದೊಡ್ಡವರನ್ನು ಕರೆಯೋಣ ಅಂತ.” … ” ನೀನ್ಯಾವಾಗ ಅಂದೆ ಹಾಗಂತ?” ಸ್ವಲ್ಪ ಜೋರಾಗೇ ಕೇಳಿದೆ. ನಮ್ಮ ಮಾತುಕತೆ ಕೇಳಿಯೋ ಏನೋ ರತ್ನಾಕರನ ಅಮ್ಮ ಬಾವಿಯ ಹತ್ತಿರ ಬಂದರು. “ಸತ್ತೇ….” ಅಂತ ಒಂದೇ ಉಸಿರಿಗೆ ರತ್ನಾಕರ ಎಲ್ಲಿ ಹಾರಿ ಹೋದನೋ ಗೊತ್ತಾಗಲಿಲ್ಲ. ನಾನು ನಡುಗುತ್ತ ಹೆದರುತ್ತ ಅವರ ಹತ್ತಿರ ಹೇಳಿದೆ.. ಹೀಗೆ ಹೀಗೆ ಮಾಡಿದೆವು.. ಹೀಗೆ ಹೀಗೆ ಆಯಿತು ಅಂತ. ಅವರು “ನಿಂಗೆ ಉಂಟು ಇವತ್ತು ಅಮ್ಮನಿಂದ ಪೂಜೆ” ಅಂತ ನಗುತ್ತ ಹೇಳುವಾಗ.. ನನಗೆ ಅಳು ತಡೆಯದೆ ಜೋರಾಗಿ ಅಳಲು ಶುರು ಮಾಡಿದೆ. ಆಗ ಅವರು ಅವರ ಗಂಡ ಆಚಾರಿಯನ್ನು ಕರೆದು… “ಇಗಾ… ಆ ಗರುಡ ಪಾತಾಳ (ಪಾತಾಳ ಗರಡಿ) ತೆಗೆದುಕೊಂಡು ಬನ್ನಿ ಇಲ್ಲಿ ಸ್ವಲ್ಪ” ಅಂದರು. ಅವರು ಆದಷ್ಟು ನಿಧಾನವಾಗಿ  ಕೈಯಲ್ಲಿ ಏನೋ ಹಿಡಿದುಕೊಂಡು ಬರುತಿದ್ದರು. ನಂಗೆ “ಅವರು ಏನು ತರಲು ಹೇಳಿದ್ದಿರಬಹುದು…? ಈಗ ಕೊಡವನ್ನು ಹೇಗೆ ತೆಗೆಯುತ್ತಾರಪ್ಪ? ಆದಷ್ಟು ಬೇಗ ಮನೆಯಲ್ಲಿ ಗೊತ್ತಾಗುವ ಮೊದಲೇ ತೆಗೆಯಬಾರದಾ? ” ಅಂತೆಲ್ಲ ಅನಿಸಲಿಕ್ಕೆ ಶುರುವಾಯಿತು. ಆಚಾರಿಯವರು ಕೂಡ.. “ಏನು ಅಮ್ಮ…. ಸಧ್ಯ ನೀವೆ ಬಾವಿಯೊಳಗೆ ಬೀಳಲಿಲ್ಲವಲ್ಲ ” ಅಂತ ಕೇಳುತ್ತ.. 3-4 ಕೊಕ್ಕೆಗಳಿರುವ ಒಂದು ಸಾಧನವನ್ನು ನಿಧಾನವಾಗಿ ಬಾವಿಕಟ್ಟೆ ಮೇಲಿಟ್ಟು ಹಗ್ಗವನ್ನು ಅದಕ್ಕೆ ಗಟ್ಟಿಯಾಗಿ ಕಟ್ಟಿ ಬಾವಿಯೊಳಗೆ ಬಿಟ್ಟರು. ಠಣ್… ಎಂದು ಸದ್ದಾಯಿತು. ಸ್ವಲ್ಪ ಪ್ರಯತ್ನದ ನಂತರ ಆಚಾರಿಯವರು ಹಗ್ಗ ಮೇಲೆ ಎಳೆದಾಗ ಆ ಕೊಕ್ಕೆಗಳು ಕೊಡದ ಬಾಯಿಯ ಒಳಗೆ ಸಿಕ್ಕಿಕೊಂಡಿದ್ದವು.  ಕೊಡವನ್ನು ಮೇಲಕ್ಕೆ ಎಳೆದು ತೆಗೆದುಕೊಟ್ಟು ಇನ್ನೊಂದು ಸಲ ಬರ್ತೀರಾ ಅಮ್ಮ ನೀರು ಸೇದಲಿಕ್ಕೆ? ಅಂತ ರತ್ನಾಕರನ ಅಮ್ಮ ತಮಾಷೆ ಮಾಡಿದರು. “ಈಗ ನೀವೆ ಒಂದು ಸಲ ನೀರು ಎಳೆದು ಕೊಡಿ” ಎಂದೆ. ಅವರು ಮನೆಯವರೆಗೆ ತಂದು ಕೊಡುತ್ತೇನೆ ಅಂತ ಹೇಳಿದರೂ ಕೇಳದೆ ನಾನೇ ಕಷ್ಟಪಟ್ಟು ಸೊಂಟದ ಮೇಲೆ ಇಟ್ಟುಕೊಂಡು ಮನೆಗೆ ಹೋದೆ. ಅಮ್ಮನಿಗೆ ಆಶ್ಚರ್ಯ… ಜತೆಗೆ ಖುಷಿ. “ಓ… ನನ್ನ ಮಗಳು ಭಾರಿ ಜಾಣೆ ” ಎಂದರು. ನನಗಷ್ಟೆ ಸಾಕು. ಎಲ್ಲ ಮರೆತು ಹೋಯಿತು. ಹೀಗೆ ಇನ್ನೂ ತುಂಬಾ ನೆನಪುಗಳು ದಬದಬನೇ ಬಂದು ಬಿದ್ದಾಗ.. ಯಾವಾಗ ದಸರಾ ರಜ ಬರುತ್ತದೋ… ಯಾವಾಗ ಊರಿಗೆ ಹೋಗ್ತೇವೋ ಅನ್ನಿಸಲಿಕ್ಕೆ ಶುರುವಾಯ್ತು. ಮಕ್ಕಳ ಪರೀಕ್ಷೆಗಳು ಮುಗಿದು, ರಜ ಶುರುವಾದಕೂಡಲೇ ೪-೫ ದಿನದ ಮಟ್ಟಿಗೆ ಊರಿಗೆ ಹೊರಟೆವು. ಎರಡನೇ ದಿನವೇ ನಮ್ಮ ಪ್ಲಾನ್ ಪ್ರಕಾರ ಸಾಲೆತ್ತೂರಿಗೆ ಪ್ರಯಾಣ..  ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಡುತ್ತ ದಾರಿ ಸಾಗುತಿತ್ತು. ಮಂಚಿ, ಕುಕ್ಕಾಜೆ ದಾಟಿ ಸಾಲೆತ್ತೂರಿನ ಮೈದಾನವೂ ಬಂತು. ಅಲ್ಲಿಂದ ಕೆಳಗೆ ಇಳಿದರೆ ನಾವಿದ್ದ ರೋಡು. ಎಲ್ಲವೂ ಬದಲಾಗಿದೆ. ಒಂದರದ್ದೂ ಗುರುತು ಸಹ ಸಿಗುತ್ತಿಲ್ಲ. ಬ್ಯಾಂಕ್ ಕಟ್ಟಡವೂ ಬೇರೆಯಾಗಿದೆ. ನಾವಿದ್ದ ಮನೆಯ ಜಾಗದಲ್ಲಿ ಎರಡು ಮಹಡಿಗಳ ತಾರಸಿ ಮನೆ. ಶಾಲೆಯ ಹತ್ತಿರ ಹೋದರೆ ಚಿಕ್ಕದಾಗಿದ್ದ ನಮ್ಮ ಶಾಲೆ ಈಗ ತುಂಬ ದೊಡ್ಡದಾಗಿ ಚಂದದ ತೋಟ ಎಲ್ಲವೂ ಇತ್ತು.. ಆದರೆ ನಮ್ಮ ನೆನಪಿನ ಗುರುತುಗಳು ಒಂದೂ ಇಲ್ಲದೆ ಬಹಳ ಬೇಜಾರಾಯ್ತು. ಸರಿ … ರತ್ನಾಕರನೂ ಬದಲಾಗಿರಬಹುದು ಅನಿಸಿತು. ಹಾಗೆ ಪುನಹ ನಾವಿದ್ದ ಮನೆಯ ಹತ್ತಿರ ಬಂದು ರತ್ನಾಕರನ ಮನೆಯ ಹತ್ತಿರ ಕಾರು ನಿಲ್ಲಿಸಿದ ಕೂಡಲೇ ಅಲ್ಲಿಯೇ ಇದ್ದ ವಯಸ್ಸಾಗಿದ್ದ ಗಂಡಸು ಕಣ್ಣಿಗೆ ಕೈ ಅಡ್ಡ ಇಟ್ಟು ಯಾರು….. ? ಅನ್ನುವ ಹಾಗೆ ನಮ್ಮನ್ನು ನೋಡುತ್ತಾ ನಿಂತರು. ನಮ್ಮ ಗುರುತು ಹೇಳಿದ ಕೂಡಲೆ ಅವರಿಗಾದ ಸಂತಸ ಅವರ ಮುಖದಲ್ಲಿ ಕಂಡು .. ಇವರಾದರೂ ಹಾಗೇ ಇದ್ದಾರಲ್ಲ.. ಎಂದು ಮನಸ್ಸಿಗೆ ಹಾಯೆನಿಸಿತು. ಅವರು ರತ್ನಾಕರನ ಅಪ್ಪ. ಸಂಭ್ರಮದಿಂದ ಅವರ ಹೆಂಡತಿಯನ್ನು ಕರೆದರು.. ಅವರಿಗೂ ಸ್ವಲ್ಪ ವಯಸ್ಸಾಗಿತ್ತು. ನಮ್ಮನ್ನೆಲ್ಲ ನೋಡಿ ಅವರಿಗೆ ಖುಷಿಯೊ ಖುಷಿ. ಅಮ್ಮ ಹೋದರೆಂದು ಕೇಳಿ ತುಂಬಾ ದುಃಖ ಪಟ್ಟರು. ರತ್ನಾಕರನ ಬಗ್ಗೆ ವಿಚಾರಿಸಿದಾಗ ಅವನು ವಿಶ್ವಕರ್ಮ ಬ್ಯಾಂಕ್ ನಲ್ಲಿ ಕೆಲಸ ಮಾಡುತಿದ್ದಾನೆ ಎಂದು ಕೇಳಿ ನಮಗೂ ಖುಷಿ ಆಯ್ತು. ಅವನಿಗೆ ಒಳ್ಳೆಯ ಹೆಂಡತಿ ಮತ್ತು ಮುದ್ದಾದ 2 ಮಕ್ಕಳು. ಮನಸ್ಸಿಗೆ ನೆಮ್ಮದಿ ಅನಿಸಿತು. ಹಾಗೆ ಹೀಗೆ ಮಾತಾಡಿ, ಅವರು ಪ್ರೀತಿಯಿಂದ ಕೊಟ್ಟಿದನ್ನು ತಿಂದು ಹೊರಟೆವು. ಅರ್ಧ ದಾರಿಗೆ ಬಂದ ಮೇಲೆ ನೆನಪು….. ಛೆ!!!!!! ಅವನ ಫೋನ್ ನಂಬರ್ ಆದ್ರೂ ಕೇಳಬೇಕಿತ್ತಲ್ಲ… ಅಥವ ನಮ್ಮ ನಂಬರ್ ಆದ್ರೂ ಕೊಟ್ಟು ಬರಬೇಕಿತ್ತು. ನನ್ನ ತಲೆ ಎಲ್ಲಿ ಬಾಡಿಗೆಗೆ ಕೊಟ್ಟಿದ್ದೆನೋ ಇನ್ನೂ ನೆನಪಿಗೆ ಬರುತ್ತಿಲ್ಲ.

ಲಲಿತ ಪ್ರಬಂಧ Read Post »

ಇತರೆ

ಲೀಲಾ ಕಲಕೋಟಿ ಎರಡು ಬರಹಗಳು

ಲೀಲಾ ಕಲಕೋಟಿ ನ್ಯಾನೋ ಕಥೆ ಸಂಜೆಯಾಗಿ ತಾಸೆರಡಾಗಿತ್ತು. ಹಂಗೆ.. ಹೊರಗ ಹೊಂಟೆ.ಅವನು ನನ್ನ ನೋಡಕೋತ ನನ್ನ ಜೋಡಿ ಬೆನ್ನ ಹತ್ತಿದಾ .ಆದರೂ ಸುಮ್ಮನೆ ಹೊಂಟೆ.ಅವನೂ ಮತ್ತ ನನ್ನ……!ಸ್ವಲ್ಪ ನಿಂತೆ ಅವನೂ ನಿಂತು ನನ್ನ ನೋಡಿ ನಗಾಕ್ಹತ್ತಿದಾ.ಮನೀಕಡೆ ಹೊಂಟೆ ನನ್ನ ನೆಳ್ಳನೂ ನನ್ನ ಜೋಡಿ ಬರದಂಗ ಮಾಡಿದಾ . ಮನಿ ಮುಟ್ಟಿದೆ ಖರೆ ಲೈಟ್ ಹೋಗಿತ್ತು. ಅವನು ಕತ್ತಲೆ ಕರಗಿಸಿ ತನ್ನ ಬೆಳದಿಂಗಳ ಬಾಹು ಬಂಧನದಿ ಮೈಮನಕೆ ಮುದ ನೀಡಿದ. ಅವನನ್ನೇ ನೋಡುತ್ತ ಮೌನ ಮುರಿದು ನನಗರಿವಿಲ್ಲದಂತೆ ಕಟ್ಟಿಗೆ ಕುಂತು ಕಣ್ಣುಗಳಿಂದ ಮಾತಿಗಿಳಿದಿದ್ದೆ …..! ಸುಮ್ಮನೆ ಏಳು ಸುತ್ತಿನ ಸುರಳಿಯಬಿಚ್ಚುತ ಮೆಲ್ಲನೆಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ….?ಹಸಿರೆಲೆ ರಾಶಿಯಲಿಹುದುಗಿದಿ ಕಡೆದಬೆಣ್ಣೆಯಂತೆ….ಮುದ್ದಾಗಿ ಎದ್ದವಳೇಕುಂತೀಯಾಕ ಸುಮ್ಮನೆ?ಓ….! ನನ್ನ ಮಲ್ಲಿಗೆ…?ಬೀಗುತ ಬಿಮ್ಮನೆಘಮ್ಮಂತ ಸೂಸುತಕಂಪನು ಹರಡುತಸೊಂಪಾಗಿ,ಗುಂಪಾಗಿಕುಂತೀಯಾಕ ಸುಮ್ಮನೆ?ಓ…!ನನ್ನ ಮಲ್ಲಿಗೆ……?ಬೀಸುವ ತಂಗಾಳಿಗೆಕುಲಕುತ ಬಳಕುತಮುದನೀಡಿ ಮನಕೆಮಂದಗಮನಿಯಂತೆಕುಂತೀಯಾಕ ಸುಮ್ಮನೆ?ಓ….!ನನ್ನ ಮಲ್ಲಿಗೆ….? ****************************

ಲೀಲಾ ಕಲಕೋಟಿ ಎರಡು ಬರಹಗಳು Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ದೇವು ಮಾಕೊಂಡ ಎಚ್ಚರಗೊಂಡ ಕನಸಿಗೆ ಕಾತರಿಸಬೇಡ ಸಂಗಾತಿಮುಂಗುರುಳ ಸ್ವಪ್ನ ಕಾಣಬೇಡ ಸಂಗಾತಿ ಅವರ ಬದುಕು ಅವರೇ ಕಂಡುಕೊಂಡಿಲ್ಲಬೇರೆಯವರ ಮನದ ಭಾವನೆಗೆ ಕಾಯಬೇಡ ಸಂಗಾತಿ ಸುಖದ ಕಡಲು ಬಿಟ್ಟು ಬಯಲಾಗಿ ಬಂದು ಶೂನ್ಯವಾದೆಹಗಲ ಕುದುರೆಯನೇರಿ ಇರುಳು ತಿರುಗಬೇಡ ಸಂಗಾತಿ ಅತ್ತು ಗಾಯಗೊಂಡ ಕಣ್ಣಿಗೆ ಮುಲಾಮು ತರಬೇಕಿದೆಬಿರುಗಾಳಿಗೆ ಉಕ್ಕೇರುವ ನದಿಯ ದಾರಿ ಹುಡುಕಬೇಡ ಸಂಗಾತಿ ಜಗದ ಕೂಗಿಗೆ ಕಿವಿ ಏಕೆ ಕೊಡುತ್ತಿರುವೆ ‘ದೇವ’ಹಳೆ ಕಂದಕದ ನಿಟ್ಟುಸಿರ ಬವಣೆ ನೂಕಬೇಡ ಸಂಗಾತಿ **************************************

ಗಝಲ್ Read Post »

You cannot copy content of this page

Scroll to Top