ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಶರೀಫರ ನೆನೆಯುತ್ತಾ…

ಶಿಶುನಾಳ ಶರೀಫ ಶಿವಯೋಗಿಗಳ ಜಯಂತ್ಯೋತ್ಸವ 200ನೇ ವರ್ಷಾಚರಣೆ ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಎಂಬ ಮಾತು ಇದೆ. ಒಂದರ್ಥದಲ್ಲಿ ಅದು ನಿಜವೂ ಹೌದು. ಆದರೆ ಉದಾತ್ತ ಸಂಗತಿಗಳನ್ನು, ಅಂಥದನ್ನು ಆಚರಣೆ ಮೂಲಕ ತನಗೆ ಹೇಳಿ ಕೊಟ್ಟ ಮಹಾ ಮಾನವರನ್ನು ಮರೆತು ಬಿಡುವ ಕೃತಘ್ನತೆ ತೋರುವುದು ಲೋಕದ ರೂಢಿ. ಸರಿಯಾಗಿ ೨೦೦ ವರ್ಷದ ಹಿಂದೆ ಕನ್ನಡ ನಾಡಿನಲ್ಲಿ ಹುಟ್ಟಿ ೭೦ ವರ್ಷ ಕಾಲ ಏಳು ಬೀಳಿನ ಜೀವನ ನಡೆಸಿದ ಅತ್ಯುನ್ನತ ಆಧ್ಯಾತ್ಮ ಸಾಧಕರು ಶಿಶುನಾಳದ ಶರೀಫ ಶಿವಯೋಗಿಗಳು. ೨೦೧೯ ಅವರ ಜನನದ ದ್ವಿಶತಮಾನೋತ್ಸವ ವರ್ಷ.. ಯಾರೊಬ್ಬರಿಗೂ ಆ ನೆನಪಿಲ್ಲ. ಅಕ್ಕ ಅನುಪಮಾ (ಡಾ.ಎಚ್.ಎಸ್.ಅನುಪಮಾ) ಒಮ್ಮೆ ಈ ಕುರಿತು ಗಮನ ಸೆಳೆದರು.. ಅಷ್ಟೇ ಅಲ್ಲ, ತಮ್ಮ ಗಾಂಧಿ ೧೫೦ ಕಾರ್ಯಕ್ರಮದಲ್ಲಿ ಗಾಯಕರನ್ನು ಕರೆಸಿ ಶರೀಫರ ತತ್ವ ಪದಗಳನ್ನು ಹಾಡಿಸುವ ಮೂಲಕ ಅವರನ್ನು ನೆನೆಯುವ ಪ್ರಯತ್ನ ಮಾಡಿದರು. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ನನ್ನನ್ನು ಅಪರಾಧಿ ಭಾವವೊಂದು ಸತಾಯಿಸತೊಡಗಿತು.. ಶರೀಫರ ನಾಡಲ್ಲೇ ಇದ್ದು ಏನೂ ಮಾಡಲಾರದವರಾದ ನಾವು ಉಪಕಾರಗೇಡಿ ಅಲ್ಲವೇ.. ಎಂಬ ಭಾವದಿಂದ ಹೊರಬರಲಾಗದೆ ಕೊನೆಗೆ ಸಮಾನ ಮನಸ್ಕರಲ್ಲಿ ಹಂಚಿಕೊಂಡಾಗ ಹುಟ್ಟಿದ್ದು ಶರೀಫ್ ಬಳಗ . ಅದು ದೀಪಾವಳಿ ಪ್ರತಿಪದೆಯ ದಿನವಾಗಿತ್ತು. ಆದಷ್ಟು ಬೇಗ ಕಾರ್ಯಕ್ರಮ ಮಾಡುವುದೆಂದು ತೀರ್ಮಾನವಾಯ್ತು. ಒಂದೊಂದಾಗಿ ಕೆಲಸ ಆರಂಭಿಸಿದೆವು. ನಮಗಿದು ಮೊದಲ ಹೆಜ್ಜೆಯಾದ್ದರಿಂದ ಮನಸ್ಸು ಗೊಂದಲಗಳ ಗೂಡು.. ಎಲ್ಲವನ್ನೂ ಸರಿಸುತ್ತ ಸಾಗಿದಾಗ ಅಂತಿಮವಾಗಿ ರೂಪುಗೊಂಡ ಕಾರ್ಯಕ್ರಮ ಇದೇ ಶನಿವಾರ ದಿನಾಂಕ ೨೩/೧೧/೨೦೧೯ ರಂದು ಬನಹಟ್ಟಿಯಲ್ಲಿ ಜರುಗುವುದು. ಈ ಪ್ರಯತ್ನವನ್ನು ಇನ್ನೂ ಬೇರೆ ಕಡೆಗಳಿಗೆ ಕೊಂಡೊಯ್ಯುವ ಹಂಬಲವೂ ಇದೆ.. ಅದೆಲ್ಲ ಕೂಡಿ ಬರಲು ಆಸಕ್ತರು ಮನಸ್ಸು ಮಾಡಬೇಕು.. ಜತೆಗೂಡಬೇಕು.. ಶರೀಫರ ಆಯ್ದ ೧೦ ಜನಪ್ರಿಯ ಗೀತೆಗಳನ್ನು ಗಾಯಕರು ಪ್ರಸ್ತುತ ಪಡಿಸುವರು. ಅದಕ್ಕೂ ಮುನ್ನ ಶರೀಫರ ಕುರಿತು ಸಂಕ್ಷೇಪವಾಗಿ ಮಾತು. ಪ್ರತಿಯೊಂದು ಗೀತೆಯನ್ನು ಆ ಗೀತೆಯ ಅರ್ಥ ವಿವರಣೆ ಹಿಂಬಾಲಿಸುವುದು. ನಮ್ಮದೇ ವಿಶಿಷ್ಟವಾದೊಂದು ರೀತಿಯಲ್ಲಿ ಸಂತರನ್ನು ನೆನೆಯುವ ಒಂದು ಪ್ರಯತ್ನ ಸಾಕಾರಗೊಳ್ಳುತಿರುವುದು ಹೀಗೆ.. ನೀವೂ ಬನ್ನಿ… ನಿಮ್ಮ ಬಳಗವನ್ನು ಕರೆ ತನ್ನಿ.. ಶರಣು ಶರಣಾರ್ಥಿ ಚಂದ್ರ ಪ್ರಭ ದಿನಾಂಕ:23-11-2019,ಶನಿವಾರ ಸಮಯ:ಸಂಜೆ5.30 ಹಿರೇಮಠದ ಆವರಣ,ಬನಹಟ್ಟಿ ಸರ್ವರಿಗೂ ಸ್ವಾಗತ

ಶರೀಫರ ನೆನೆಯುತ್ತಾ… Read Post »

ಕಾವ್ಯಯಾನ

ಕಾವ್ಯಯಾನ

ಗಜಲ್ ಡಾ.ಗೋವಿಂದ ಹೆಗಡೆ ಮದಿರೆಬಟ್ಟಲು ಖಾಲಿಯಾಗಿದ್ದಕ್ಕೆ ಅವಳು ಅಳುತ್ತಿದ್ದಾಳೆಎಲ್ಲಿ ಹೇಗೆ ಯಾವಾಗ ಸೋರಿಹೋಯಿತೆಂದು ಹುಡುಕುತ್ತಿದ್ದಾಳೆ ಜನ್ಮ ಜನ್ಮಾಂತರಕ್ಕೂ ತುಂಬಿರುವುದೆಂದು ಎಣಿಕೆಯಿತ್ತುಇಷ್ಟು ಬೇಗ ಎಲ್ಲ ಖಾಲಿ ಆಗಿದ್ದನ್ನು ನಂಬದಂತಿದ್ದಾಳೆ ಕನಸುಗಣ್ಣುಗಳಲ್ಲಿ ಎಷ್ಟೊಂದು ಸುರೆಯ ಸಂಗ್ರಹವಿತ್ತುಪತ್ತೆಯೇ ಇರದೆ ಸೂರೆಯಾಗಿದ್ದಕ್ಕೆ ತಳಮಳಿಸುತ್ತಿದ್ದಾಳೆ ಮಧುಬಟ್ಟಲಲ್ಲೇ ಐಬಿತ್ತೋ ಅಥವಾ ಮಧುವಿನಲೋಬಟ್ಟಲನೆತ್ತಿ ಹಿಂದೆ-ಮುಂದೆ ತಿರುತಿರುಗಿಸಿ ನೋಡುತ್ತಿದ್ದಾಳೆ ಮರಳೇ ಹಾಗೆ ಕಣಕಣವಾಗಿ ಸುರಿದು ಖಾಲಿಯಾಗುತ್ತದೆಗಡಿಯಾರ ತಿರುಗಿಸಬಹುದು, ಕಾಲವನಲ್ಲ ಮರುಳಿಯಾಗಿದ್ದಾಳೆ ಎದೆಯೊಡೆದ ಹುಚ್ಚಿ ಅವಳನ್ನು ಹೇಗೆ ಸಂತೈಸಲಿ ಸಾಕಿಹೇಗೋ ಒಂದು ಮುಕ್ಕೆರೆದು ಬಿಡು,ಚೇತರಿಸುತ್ತಾಳೆ..

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಭ್ರಮ

ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು  ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನಮಾಜಿ ಅದ್ಯಕ್ಷರಾದ ಶ್ರೀ ಹೆಚ್. ಚಂದ್ರಪ್ಪನವರು ಅದ್ಯಕ್ಷತೆ ವಹಸಿದ್ದು,ಕಿರುತೆರೆಕಲಾವಿದೆ ಶ್ರೀಮತಿ ನಂದಿನಿ ಪಟವರ್ಷನ್ ಉದ್ಘಾಟನೆ ಮಾಡಿದರು.ಸಾಹಿತಿಗಳಾದಶ್ರೀನಾಗೇನಹಳ್ಳಿತಿಮ್ಮಯ್ಯ,ಶ್ರೀಭಗವಾನ್,ಎಂ.ಕೆ.ವಿಜಯಕುಮಾರ್,ಶ್ರೀಓಂಕಾರಪ್ಪನವರು ಉಪಸ್ಥಿತರಿದ್ದು ಕೃತಿಗಳ ಬಗ್ಗೆ  ಮಾತನಾಡಿದರು.

ಪುಸ್ತಕ ಸಂಭ್ರಮ Read Post »

You cannot copy content of this page

Scroll to Top