ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಸಿರಿಗರ ಹೊಡೆದವರ. . . . .

ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು

ಸಿರಿಗರ ಹೊಡೆದವರ. . . . . Read Post »

ಇತರೆ, ಜೀವನ

ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ

ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು ಹೇಳುವಂತೆ, “ಹಣತೆ ಹಚ್ಚುತ್ತೇನೆ ನಾನೂ, ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ಇರುವಷ್ಟು ಹೊತ್ತು ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂಬ ಆಸೆಯಿಂದ……..”

ನಮ್ಮದೇ ಇಷ್ಟವ ಆಗಾಗ.. ಕೇಳಿಕೊಳುವ ಇನ್ನಾದರೂ Read Post »

ಇತರೆ, ಜೀವನ

ಬದಲಾಗುತ್ತ ಹೋದ ಅವಳ ದೇವರು

ಬದಲಾಗುತ್ತ ಹೋದ  ಅವಳ ದೇವರು  ಎಂ. ಆರ್. ಅನಸೂಯ ಅವಳು ಏಳೆಂಟು ವರ್ಷದವಳಿದ್ದಾಗ  ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ ಕೇಳಿದರೆ ಸಾಕು ಕೇಳಿದ್ದನ್ನೆಲ್ಲಾ ಕೊಡುವಂಥಾ ಸರ್ವಶಕ್ತನೆಂಬ ನಂಬಿಕೆ. ತಾಯಿಯ ಕೈ ಹಿಡಿದು ನಡೆವ ಮಗುವಿನ ನಂಬಿಕೆ, ಮಳೆ ಬರುವುದೆಂದು ಬೀಜ ಬಿತ್ತನೆ ಮಾಡುವ ರೈತನ ನಂಬಿಕೆ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನುವಂಥ  ಭಕ್ತರ ನಂಬಿಕೆ. ಭಕ್ತಿಯೆಂದರೆ ಹೇಗಿರಬೇಕು ಎಂಬುದಕ್ಕೆ ಅಮ್ಮನ ಮಾತೇ ವೇದವಾಕ್ಯ.ದಾಸವಾಳ ಹಾಗೂ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಮೈತುಂಬ ಹೂ ಬಿಟ್ಟ ನಂದಿ ಬಟ್ಟಲ ಹೂಗಳನ್ನು ಬಿಡಿಸಿ ತಂದು ಮಾಲೆಯನ್ನು ಕಟ್ಟಿ ಪುಟ್ಟ ದೇವರ ಗೂಡನ್ನು ಒರೆಸಿ ಸಾರಿಸಿ ದೇವರ ಭಾವ ಚಿತ್ರಗಳಿಗೆ ನಂದಿ ಬಟ್ಟಲ ಹೂವಿನ ಹಾರ ಹಾಕಿ, ದೇವರ ವಿಗ್ರಹಗಳಿಗೆ ದಾಸವಾಳ ಹೂಗಳನ್ನು ಮುಡಿಸಿ, ಹಣತೆ ಹಚ್ಚಿ ಕೈ ಮುಗಿದು ನಿಂತು ಕಣ್ಮುಚ್ಚಿ ಚಿತ್ರ ವಿಚಿತ್ರ ಬೇಡಿಕೆ ಗಳನ್ನಿಡುವುದು ಏಕೆಂದರೆ ದೇವರು ಸರ್ವಶಕ್ತ ಹಾಗೂ ದಯಾಮಯಿ ! ಆ ಮುಗ್ಧ ಮನಕ್ಕೆ ಅದೊಂದು ತನ್ಮಯಗೊಳಿಸುವ ಆಪ್ಯಾಯಮಾನವಾದಂಥ ಪ್ರೀತಿಯ ಕೆಲಸ.  ಬೇಡಿಕೆಗಳು ಈಡೇರದಿದ್ದರೂ ದೇವರನ್ನೇನು ದೂರಲಿಲ್ಲ ಕಡಿಮೆಯಾಗದ ಭಕ್ತಿ ನಿಷ್ಠೆ. ಏಕೆಂದರೆ ತನ್ನ ಭಕ್ತಿಯಲ್ಲೇ ಏನೋ ಕೊರತೆಯೆಂಬ ಭಾವವಷ್ಟೆ. ಗಣೇಶೋತ್ಸವದ ಹಾಗು ರಾಮನವಮಿಯ ಹರಿಕಥೆಗಳನ್ನು ನಿದ್ದೆಮಾಡದೆ ಕೇಳಿದ ಕಥೆಗಳು ಇದಕ್ಕೆ ಪೂರಕ. ಪ್ರತಿ ನವರಾತ್ರಿಯಲ್ಲಿ ಅಮ್ಮನೂ ಅನೂಚಾನವಾಗಿ ಮಾಡಿದ ದೇವಿ ಮಹಾತ್ಮೆಪಾರಾಯಣವನ್ನು ಬಾಲ್ಯದಿಂದಲೆ ಮುಂದುವರೆಸಿದಳು ಕೌಮಾರ್ಯದ ತನಕ ಸೊಗಸಾದ ಬದುಕಿನಿಂದಾಗಿ ಎಲ್ಲ ಚಂದವೇ.ಒರಗಲು ಹೆತ್ತವರ ಹಾಗೂ ಒಡಹುಟ್ಟಿದವರ  ಹೆಗಲು.ಮುಂದಿನ ಹಂತಗಳಲ್ಲಿ ಅವಳ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಬದುಕು ಬಂದಂತೆ ಸ್ವೀಕರಿಸದೆ ಗತ್ಯಂತರವಿಲ್ಲ. ಬದುಕಲ್ಲಿ ಬಂದ ನೋವು,ಅವಮಾನ,ತಿರಸ್ಕಾರಗಳನ್ನೆದುರಿಸುತ್ತಲೇ ಗಟ್ಟಿಯಾದಳು.ಬದುಕಕಲಿಸಿದ ಪಾಠಗಳಿಗೆ ಋಣಿಯಾದಳು. ಒಂಟಿಯಾಗಿ ಅಸಹಾಯಕಳಾಗಿ ಸೋತಾಗ ಕಣ್ಣೀರು ಹಾಕುತ್ತ ದೇವರ ಮುಂದೆ ಕೂತು ಕ್ಷಣಿಕ ನೆಮ್ಮದಿಯ ಕಂಡವಳು. ಎಂತಹ ಸೋಲಿನಲ್ಲು ಕಂಗಾಲಾಗದ ಸ್ವಾಭಿಮಾನಿಯಾದ ಅವಳ ಅವಿರತ ಶ್ರಮಕ್ಕೆ ಹಾಗು ಬಿಡದ ಪ್ರಯತ್ನಗಳಿಗೆ ಅವಳ ದೇವರು ಜೊತೆಗಿದ್ದಾನೆಂಬ ಭರವಸೆಯ ಭಾವವೊಂದೇ ಸಾಕು ಅವಳಿಗೆ ಹತ್ತಾಳಿನ ಬಲ ಕೊಡುತ್ತಿತ್ತು.ತನ್ನ ಗುರಿ ಮುಟ್ಟುವ ತನಕ ಅವಳಿಗೆ ಅದೇ ಧ್ಯಾನ ಅದೇ ಪ್ರಪಂಚ. ಅವಳ ದೇವರು ಮಂದಿರದಲ್ಲಿರದೆ ಅವಳು ತೊಡಗಿದ ಕಾಯಕದಲ್ಲಿ ಕಾಣುತ್ತಿದ್ದ. ಜ್ಞಾನ ದೇಗುಲವಾದ ಶಾಲೆಯ  ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶವೊದಗಿದ್ದು ತನ್ನ ಸುಕೃತವೆಂದೇ ಭಾವಿಸಿದಳು. ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ದೇವರ ಮಕ್ಕಳೆಂದೇ ಭಾವಿಸಿ ಪ್ರಾಮಾಣಿಕತೆ  ಹಾಗೂ ಅರ್ಪಣಾ ಭಾವದಿಂದ ಕಲಿಸಿದಳು. ಅವಳೆಂದು ಗಂಟೆಗಟ್ಟಲೆ ಪೂಜೆ ಮಾಡಲೇ ಇಲ್ಲ.ಅವಳ ನಂಬಿಕೆಯ ದೇವರ ಮುಂದೆ  ಕೈಮುಗಿದು ಕ್ಷಣ ಕಾಲ ಕಣ್ಮುಚ್ಚಿದರೆ ಸಾಕಷ್ಟೆ. ಅಶಕ್ತರಿಗೆ ಕೈಲಾದ ಸಹಾಯ, ಹಸಿದ ಹೊಟ್ಟೆಗೆ ಅನ್ನವಿಡುತ್ತ ಅನ್ನಗಳಿಕೆಯ ದಾರಿ ತೋರುವುದು ಅವಳ ದೇವರಿಗೆ ಇಷ್ಟವೆಂಬ ಸ್ವಷ್ಟ ಅರಿವಿತ್ತು. ಪುಣ್ಯ ಕ್ಷೇತ್ರಗಳ ಯಾತ್ರೆಯೆಂದರೆ ಪ್ರವಾಸದ ಅನುಭವದೊಂದಿಗೆ  ದೈವ ದರ್ಶನವಷ್ಟೆ. ಕಾಶಿಯವಿಶ್ವನಾಥನ ದರ್ಶನ ಭಾಗ್ಯಕ್ಕಿಂತ ಅವಳು ಕಾಯುತ್ತಿರುವುದು ಜೀವ ಚೈತನ್ಯದಾಯಿನಿಯು ಜೀವನದಿಯಾದ ಗಂಗೆಯ ವಿಶಾಲ ಹರಿವನ್ನು ಕಣ್ತುಂಬಿ ಕೊಳ್ಳುವ  ಧನ್ಯತಾ ಭಾವದ ಅಮೃತ  ಘಳಿಗೆಗಾಗಿ. ಅವಳೇ ಕೈಯಾರೆ ಬೆಳೆಸಿದ ಹೂ ಗಿಡಗಳ ಹೂ ಬಿಡಿಸಿ ಮನೆಯಲ್ಲಿನ ದೇವರನ್ನು ಅಲಂಕರಿಸಿ ನೋಡಿ ತೃಪ್ತಿ ಪಡುವುದು ಇಂದಿಗೂ ಅವಳಿಗೆ ಇಷ್ಟವಾದ ಕೆಲಸವೇ. ಮನೆಯಲ್ಲಿ ಪೂಜಿಸುವಾಗ ಆಗುವ ತಲ್ಲೀನತೆಯನ್ನು ಅರೆಗಳಿಗೆಯಾದರೂ ಅನುಭವಿಸಿದ ಅವಳಿಗೆ ಇನ್ಯಾವ ಜಾತ್ರೆ, ಯಾತ್ರೆಗಳ ಜನ ಜಂಗುಳಿಯ ನಡುವೆ ಅಂಥಾ ಏಕಾಗ್ರತೆ ಲಭ್ಯವಾಗಲೇ ಇಲ್ಲ. ಜಿ.ಎಸ್.ಶಿವರುದ್ರಪ್ಪ ನವರ ಕವಿತೆಯಲ್ಲಿ ಕಾಣುವ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಸಾಲುಗಳನ್ನು ಅಂತರ್ಗತ ಮಾಡಿ ಕೊಂಡವಳು  ಜನ ಮಾನಸರ ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿರುವ ಮಂದಿರಗಳ ವಿರೋಧಿಯೇನಲ್ಲ. ಮಂದಿರದಲ್ಲಿನ ಆದಿ ಶಕ್ತಿಗೆ ಕೈ ಮುಗಿವಂತೆ ಚರ್ಚ್ ಗಳಲ್ಲಿನ ಏಸುಮಾತೆಗೂ ಕೈಮುಗಿದು ನಿಂತವಳು. ಇಡೀ ಪ್ರಪಂಚವನ್ನೆ ಆಳುವಂಥ ಅತಿಮಾನುಷ ಶಕ್ತಿಯೊಂದಿದೆ ಎಂಬುದು ಅವಳ  ಅಚಲ  ನಂಬಿಕೆ. ಪ್ರಕೃತಿಯೇ ದೇವರೆನ್ನುತ್ತ ತನ್ನ ಇತಿಮಿತಿಯಲ್ಲೇ ಬೀದಿ ಗಿಡಗಳಿಗೆ ನೀರೆರೆದು ಗೊಬ್ಬರ ಸುರಿದು ಬೆಳೆಸುತ್ತ ತೃಪ್ತಿ ಕಂಡವಳು.ತಾನು ಬೆಳೆಸಿದ ಗಿಡಗಳಲ್ಲಿ ತನ್ನೊಂದಿಗೆ ಪಕ್ಷಿ ಪ್ರಾಣಿಗಳ ಪಾಲಿದೆ ಎಂಬುದನ್ನವಳು ಅರಿತವಳು. ಹಸಿದ ಬೀದಿನಾಯಿಗೆ ಉಣಿಸಿಡುವ ಹಾಗೆಯೇ ಬೀದಿ ಬದಿಯ ಮರಗಳಿಗೆ ನೀರೆರೆಯುತ್ತಾಳೆ ಹರಿಜನರೆಂದು ಕರೆಯುತ್ತ ಹರಿದರ್ಶನಕ್ಕೆಡೆ ಮಾಡಿಕೊಡದ ಅಸ್ಮೃಶ್ಯತಾ ಆಚರಣೆಗೆ ವಿರೋಧವಿದೆ. ಅವಳ ದೇವರು ಜೀವಪರ ಕಾಳಜಿಯುಳ್ಳ ದೇವನೂರರ  ಗ್ರಾಮ ದೇವತೆ ” ಮನೆ ಮಂಚಮ್ಮ” ನಲ್ಲಿದ್ದಾನೆ. ಜೀವಪರವಾದ ಮಾನವೀಯ ಮನಸ್ಸುಗಳಿಗೆ ದೇವರೊಲಿಯುತ್ತಾನೆಂಬುದು ಅವಳ ಗ್ರಹಿಕೆ. ಆದ್ದರಿಂದಲೇ “ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು” ಎಂಬ ಅಕ್ಕನ ವಚನವನ್ನು ಅವಳೆಂದೂ ಮರೆಯಳು “ಬದಲಾವಣೆ ಜಗದ ನಿಯಮ” ವೆನ್ನುವಂತೆ ನಮ್ಮಲ್ಲಿನ ಚಿಂತನೆಗಳು ನಿಂತ ನೀರಾಗದೆ ಹರಿಯುವ ಹೊಳೆಯಾಗ   ಬೇಕು. ಹೂ ಅರಳಿ ದಂತೆ ವಿಕಾಸವಾಗ ಬೇಕು. ಬಾಲ್ಯದ ಅವಳ ದೇವರಂತೆ  ಮಂದಿರದ ಕೂತು ಪೂಜೆ ಪುರಸ್ಕಾರ ಇತ್ಯಾದಿಗಳಿಗೆ  ಒಲಿಯುವವನಲ್ಲ ಈಗ ಆವಳ ದೇವರು ಅಶಕ್ತರ, ದೀನ ದಲಿತರ ಸೇವೆಗೆ ಒಲಿಯುವ, ಪರಿಸರದ ವಿನಾಶವನ್ನು ತಡೆಗಟ್ಟುವುದನ್ನು ಮೆಚ್ಚುವ  ದೇವರು. ಹೀಗೆ ಅವಳ ದೇವರ ಸ್ವರೂಪವು ಕೂಡಾ ಬದಲಾಗಿದೆ  ******************************

ಬದಲಾಗುತ್ತ ಹೋದ ಅವಳ ದೇವರು Read Post »

ಇತರೆ, ಜೀವನ

ಯಶಸ್ಸು ಮತ್ತು ಸಾಧನೆ

ಲೇಖನ ಯಶಸ್ಸು ಮತ್ತು ಸಾಧನೆ ಮಾಲಾ ಕಮಲಾಪುರ್ ಪ್ರತಿಯೊಬ್ಬ ಮನುಷ್ಯನು ಯಶಸ್ಸನ್ನು ಬಯಸುತ್ತಾನೆ. ಅತ್ತ್ಯುತ್ತಮ ಗುಣ ಮಟ್ಟದ ಜೀವನ ವನ್ನು ಅನುಭವಿಸಲು ಹಂಬಲಿಸುತ್ತಾನೆ. ಆದರೆ ಅದನ್ನು ಸಾಧಿಸಿ ಅಂಥ ಜೀವನ ನಡೆಸುವವರು ಕೆಲವರು ಮಾತ್ರ ಬಲವಾದ ನಂಬಿಕೆ ವಿಶ್ವಾಸ ಇದ್ದವರು ಹಿಡಿದ ಕಾರ್ಯ ವನ್ನು ಸಾಧಿಸಿಯೇ ತೀರುತ್ತಾರೆ. ಇಂಥವರಿಗೆ ಕಾಲು ಎಳೆಯುವವರು ಸಾವಿರಾರು.ಎಲ್ಲಿ ಸಾಧನೆ ಮಟ್ಟ ಇರುತ್ತದೆಯೋ ಅಲ್ಲಿ ಟೀಕಿಸುವವರು ನಮ್ಮ ಹಿಂದೆಯೇ ಇರುವರು . ನಾವುಹಿಂದೆ ನೋಡದೆ ಮುಂದೆ ಸಾಗುತ್ತ ಹೋಗಬೇಕು ಹಿತೈಷಿಗಳ ಮಾರ್ಗ ದರ್ಶನಇದ್ದರೆ ಸಾಕು ನಾವು ಗುರಿ ಮುಟ್ಟುವುದರಲ್ಲಿ ಸಂಶಯವೇ ಇಲ್ಲಾ.ಅಬ್ರಹಾಂಲಿಂಕನ್ ಜೀವನದಲ್ಲಿ ಸಾಕಷ್ಟು ನೋವು ಸಂಕಟ ಜನರ ಅಸೂಹೆ ಇವೆಲ್ಲದರ ನಡುವೆ ದೃತಿ ಗೆಡದೆ ಸಂಪೂರ್ಣ ಆತ್ಮ ವಿಶ್ವಾಸ ದಿಂದ ತಮ್ಮ ಗುರಿ ತಲುಪಿದರು.ಮುಖ್ಯ ವಾಗಿ ನಮ್ಮಲ್ಲಿ ಪ್ರಾಮಾಣಿಕತೆ ಇದ್ದು ಸರಳ ಭಾವನೆ ಇದ್ದಾಗ ನಮಗೆ ದೇವರಲ್ಲಿ ಅಚಲವಾದ ಭಕ್ತಿ ವಿಶ್ವಾಸ ಇದ್ದರೆ ನಾವು ನಮ್ಮ ಗುರಿ ಮುಟ್ಟುತ್ತೇವೆ.ವಿನಯ ಮತ್ತು ಸೌಜನ್ಯ ಸ್ವಭಾವ ನಮ್ಮ ಮನಸಿನ ಕನ್ನಡಿ ನಾವು ಮತ್ತೊಬ್ಬರಾಗುವದು ಬೇಡ ನಾವು ನಾವಾದರೆ ಸಾಕು ನಮ್ಮ ಜೀವನ ದಲ್ಲಿ ಅದೆಷ್ಟೋ ಆನಂದ ಅನುಭವಿಸುತ್ತವೆ. ಇದನ್ನು ನೋಡಿ ಕೆಲವರು ಅಸೂಹೆ ಮಾಡಿ ಕುಹಕ ನಗು ತೋರಿಸಿದರು ನಾವು ನಿರ್ಲಕ್ಷಿಸಬೇಕು ಅದೊಂದೇ ದಾರಿ. ಮುಖ್ಯವಾಗಿ ನಾವು ಮಾಡುವ ಕೆಲಸ ಕಾರ್ಯ ಮತ್ತು ಯಾವುದೇ ವಿದ್ಯೆ ಯಲ್ಲಿ ವಿಚಾರದಲ್ಲಿ ನಿಖರ ಮತ್ತು ದಿಟ್ಟ ವಿಚಾರವೇ ನಮಗೆ ಇದ್ದರೆ ಸಾಕು. ನಮ್ಮಲ್ಲಿ ಆತ್ಮ ವಿಶ್ವಾಸವೇ ನಮ್ಮನ್ನು ಎತ್ತಿ ಹಿಡಿಯುತ್ತದೆ. ನಾವು ಯಾವುದೇ ಸನ್ಮಾರ್ಗದಲ್ಲಿ ಇದ್ದಾಗ ನಮ್ಮ ಮನಸು ಯಾರಿಗೂ ಬಗ್ಗುವುದಿಲ್ಲ ನಾವು ಯಾವುದೇ ಕಲೆ ಮತ್ತು ವಿದ್ಯೆ ಕಲಿಯಬೇಕಾದರೆ ವಯಸ್ಸು ಬೇಕಾಗಿಲ್ಲ ನಮ್ಮ ದೇಹಕ್ಕೆ ವಯಸ್ಸಾದರೂ ನಮ್ಮ ಮನಸ್ಸಿಗೆ ಆಗಿರುವುದಿಲ್ಲ. ನಮ್ಮಲ್ಲಿ ಸದ್ರಡ ಮನಸ್ಸು ವಿವೇಚನಾ ಶಕ್ತಿ, ಸಾಧಿಸುವ ಸಂಕಲ್ಪವೇ ನಮ್ಮ ಯಶಸ್ಸಿನ ಮೆಟ್ಟಲುಗಳು.ಇದಕ್ಕೆ ಉದಾಹರಣೆ ಯಾಗಿ ನೋಡಬೇಕೆಂದರೆ ಅಕ್ಷರ ಕಲಿಯದೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡಿದ ಸಾಲು ಮರದ ತಿಮ್ಮಕ್ಕ ಅದೆಷ್ಟು ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಬೆಳೆಸಿದವರು ಮುಪ್ಪು ವಯಸ್ಸಿನಲ್ಲೂ ಹುರುಪು ಅವರಿಗೆ.ಅವರ ಸೇವೆ ಇಡೀ ಜಗತ್ತು ಬೆರಗಾಗುವಂತೆ ನೋಡುತ್ತಿದೆ. ಹಿಂದೆ ನಮ್ಮೆಲ್ಲರ ಪೂರ್ವಜರು ಯಾವುದೇ ಪೈಪೋಟಿ ಮಾಡದೇ ಅಚಲ ನಿರ್ಧಾರ ಮತ್ತು ನಿಷ್ಕಲ್ಮಶ ಮನಸ್ಸು, ನಿಸ್ವಾರ್ಥ ಸೇವಾ ಮನೋಭಾವದಿಂದ, ಯಾರಿಗೂ ಮನಸ್ಸನ್ನು ನೋಯಿಸದೆ ಬದುಕಿನಲ್ಲಿ ತನ್ನದೇ ಛಾಪು ಮೂಡಿಸಿದವರು.ನಾವು ಸಮಯಕ್ಕೆ ಮತ್ತು ನಮಗೆ ದಾರಿತೋರಿಸುವ ಗುರುಗಳಿಗೆ ಬೆಲೆ ಕೊಟ್ಟಾಗ ನಮ್ಮ ಜೀವನ ಸ್ವಲ್ಪ ಮಟ್ಟಿಗಾದರೂ ಸಾರ್ಥಕವಾದಿತು.ನಾವು ಒಂದಿಷ್ಟು ಅವರ ಮಾರ್ಗ ದಲ್ಲಿ ಸಾಗೋಣ. ಇದ್ದುದರಲ್ಲಿ ನೈಜ ಸುಖ, ಶಾಂತಿ ಪಡೆಯೋಣ.ಸಾತ್ವಿಕ ವಿಚಾರ, ಸಂತೃಪ್ತಿ ಮತ್ತು ಸಕಾರಾತ್ಮ ವಿಚಾರ ಇವು ನಮ್ಮ ಯಶಸ್ಸಿಗೆ ಬೆಳಕು ತೋರಿಸುವ ದಾರಿ ದೀಪಗಳೆಂದರೆ ತಪ್ಪಾಗದು. ********************************

ಯಶಸ್ಸು ಮತ್ತು ಸಾಧನೆ Read Post »

ಇತರೆ, ಜೀವನ

ಆತ್ಮ ವಿಶ್ವಾಸವಿರಲಿ…

ಲೇಖನ ಆತ್ಮ ವಿಶ್ವಾಸವಿರಲಿ… ರಶ್ಮಿ ಹೆಗಡೆ ಕ್ರಿ.ಶ 1306 ರಲ್ಲಿ ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದ ರಾಬರ್ಟ್ ಬ್ರೂಸ್ ಎಂಬ ದೊರೆ ತನ್ನ ಧೈರ್ಯ  ಧೈರ್ಯ,ಶೌರ್ಯಕ್ಕೆ ಹೆಸರಾಗಿದ್ದ. ಒಮ್ಮೆ ಇಂಗ್ಲೆಂಡಿನ ದೊರೆ ತನ್ನ ಸುಸಜ್ಜಿತವಾದ ಸೈನ್ಯದೊಂದಿಗೆ ಸ್ಕಾಟ್ ಲ್ಯಾಂಡ್ ಮೇಲೆ ದಾಳಿ ನಡೆಸಿದ. ಬ್ರಿಟಿಷ್ ಸೈನ್ಯದೆದುರು ಬಹಳ ಚಿಕ್ಕದಾಗಿದ್ದರೂ,ಹೋರಾಟ ಮನೋಭಾವ ಹೊಂದಿದ್ದ ತನ್ನ ಸೈನ್ಯವನ್ನು ಬ್ರೂಸ್ ಆರು ಬಾರಿ ಮುನ್ನಡೆಸಿದ. ದುರದೃಷ್ಟವೆಂಬಂತೆ ಆರು ಬಾರಿಯೂ ಆತನ ತುಕಡಿ ಸೋಲುಂಡಿತ್ತು,ರಾಜ್ಯವನ್ನು ಉಳಿಸಿಕೊಳ್ಳುವ ಎಲ್ಲ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿತು.ಚದುರಿದ ಸೈನ್ಯದಲ್ಲಿ ಉಳಿದ ಕೆಲವೇ ಕೆಲವು ಸೈನಿಕರೂ ಜೀವದ ಆಸೆಗಾಗಿ ರಣರಂಗದಿಂದ ದೂರ ಸರಿದರು.ಸೋಲನ್ನೇ ಅರಿಯದ ಬ್ರೂಸ್ ಆತ್ಮಸ್ಥೈರ್ಯ ಕಳೆದುಕೊಂಡು ಕಂಗಾಲಾದ. ಜೀವ ಉಳಿಸಿಕೊಳ್ಳಲು ತಲೆಮರೆಸಿಕೊಂಡ. ಗುಡ್ಡ ಬೆಟ್ಟ, ಕಣಿವೆಗಳಲ್ಲಿ ಏಕಾಂಗಿಯಾಗಿ ಅಲೆಯತೊಡಗಿದ.ಹೀಗಿದ್ದಾಗ ಒಮ್ಮೆ ಜೋರಾಗಿ ಮಳೆ ಸುರಿಯಲಾರಂಭಿಸಲು ಬ್ರೂಸ್ ಒಂದು ಗುಹೆಯಲ್ಲಿ ಬಂದು ಆಶ್ರಯ ಪಡೆದ. ನಡೆದಿದ್ದನ್ನು ಮೆಲುಕುಹಾಕುತ್ತ ಕುಳಿತಿದ್ದ ಬ್ರೂಸ್ ನನ್ನು ನಾಜೂಕಾಗಿ ಬಲೆ ನೇಯುತ್ತಿರುವ ಪುಟ್ಟ ಜೇಡವೊಂದು ಆಕರ್ಷಿಸಿತು.ನೇಯುವಾಗ ಪ್ರತಿಬಾರಿಯೂ ವಿಫಲಗೊಂಡು ಬೀಳುತ್ತಿದ್ದ ಜೇಡ ಮತ್ತೆ ಮೇಲೇರುತ್ತಿತ್ತು.  ಪ್ರತಿಬಾರಿ ಬಿದ್ದಾಗಲೂ ಮೊದಲಿಗಿಂತ ಹೆಚ್ಚಿನ ಎಚ್ಚರಿಕೆವಹಿಸುತ್ತಿದ್ದ ಜೇಡ ಕೊನೆಗೂ ಬಲೆ ನೇಯುವುದರಲ್ಲಿ  ಯಶಸ್ವಿಯಾಯಿತು. ಸೋಲಿಗೆ ಹೆದರದೆ,ಆತ್ಮವಿಶ್ವಾಸ ತೊರೆಯದೆ,ಸತತವಾಗಿ ಪ್ರಯತ್ನಿಸಿ,ಸೋಲನ್ನೇ ಸೋಲಿಸಿದ ಜೇಡದ ಆತ್ಮಬಲ ಹಾಗೂ ಕಾರ್ಯವೈಖರಿ ಬ್ರೂಸ್  ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಬ್ರೂಸ್ ತನ್ನ ವೈಫಲ್ಯಕ್ಕೆ ತಾನೇ ಸವಾಲೊಡ್ಡಿದ. ಅಷ್ಟು ಚಿಕ್ಕ ಕೀಟವೇ ಸೋಲನೊಪ್ಪಿಕೊಳ್ಳದಿರುವಾಗ ತಾನೇಕೆ ತನ್ನ ಪತನವನ್ನು ಒಪ್ಪಿಕೊಳ್ಳಲಿ ಎಂದು ಯೋಚಿಸುತ್ತ,ಹೊಸ ಹುರುಪಿನೊಂದಿಗೆ ಹೊಸ ವ್ಯಕ್ತಿಯಾಗಿ ಗುಹೆಯನ್ನು ತೊರೆದ. ಮತ್ತೆ ಸೈನ್ಯವನ್ನು ಕಟ್ಟಲು ನಿರ್ಧರಿಸಿ ಜನರನ್ನು ಸೇರಿಸಿದ. ಮೊದಲಿಗಿಂತ ಹೆಚ್ಚು ಬಲಿಷ್ಠವಾದ ಸೈನ್ಯ ಕಟ್ಟಿದ. ಮತ್ತದೇ ಬ್ರಿಟಿಷ್ ದೊರೆಯೊಂದಿಗೆ ಹೋರಾಡಿ ತನ್ನ ರಾಜ್ಯವನ್ನು ಮರಳಿ ಪಡೆದ. ಬ್ರಿಟಿಷರಿಂದ ಸ್ಕಾಟ್ಲೆಂಡ್ ನ್ನು ಮುಕ್ತಗೊಳಿಸಿ ಹೊಸ ಇತಿಹಾಸವನ್ನೇ ರಚಿಸಿದ. ” ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ,ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದೂ”ಎಂಬ ಸಾಲುಗಳು ಇಂದಿಗೂ ಸತ್ಯ.ಯಶಸ್ಸಿನ ಮೂಲ ಮಂತ್ರವೆಂದರೆ ಅದು ‘ಆತ್ಮವಿಶ್ವಾಸ’. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ತೊಡಕುಗಳು ಅನೇಕ.  ಕಲ್ಲು ಮುಳ್ಳು,ಬಿಸಿಲು ಬವಣೆಗಳಿರದ ದಾರಿ ಯಾವುದಿದ್ದೀತು? ಅದೆಷ್ಟೋ ಬಾರಿ ಸಾಧನೆಯತ್ತ ಸಾಗುವ ಮೊದಲ ಹೆಜ್ಜೆಗಳು ತಡವರಿಸಿದಾಗ,ಭಯಪಟ್ಟು,ಮುನ್ನಡೆವ ಭರವಸೆ ಕಳೆದುಕೊಂಡು ಮುಂದೆ ಹೆಜ್ಜೆ ಇಡುವುದನ್ನೇ ನಿಲ್ಲಿಸಿ ಬಿಡುತ್ತೇವೆ. ಹಾಗಂತ ಮುನ್ನಡೆವ ಶಕ್ತಿ ಇಲ್ಲವೆಂದಲ್ಲ,ಆ ಶಕ್ತಿಯ ಪರಿಚಯ ನಮಗೇ ಇರುವುದಿಲ್ಲವಷ್ಟೇ! ಜೀವನದಲ್ಲಿ  ಗುರಿಯೊಂದಿದ್ದರೆ ಸಾಲದು, ಗುರಿಯತ್ತ ಪಯಣಿಸಲು ಬೇಕಾದ ಸಮಚಿತ್ತ,ತಾಳ್ಮೆ ಹಾಗೂ ಏಕಾಗ್ರತೆಯ ಜೊತೆಗೆ ಮುಖ್ಯವಾಗಿ ಇರಬೇಕಾದ್ದು ‘ಆತ್ಮವಿಶ್ವಾಸ’.   “ಧೈರ್ಯಮ್ ಸರ್ವತ್ರ ಸಾಧನಂ” ಎಂದು ಆತ್ಮವಿಶ್ವಾಸದಿಂದ ಎದ್ದು ನಿಂತು ಧೈರ್ಯದಿಂದ ಪ್ರಯಾಣ ಮುಂದುವರೆಸುವ ಗುಣ ನಮ್ಮೆಲ್ಲರಲ್ಲಿದ್ದರೆ ಯಾವ ಸಾಧನೆಯೂ ಎಟುಕದ ನಕ್ಷತ್ರವಾಗಲಾರದು. ಯಶಸ್ಸಿನ ಹೆಬ್ಬಯಕೆಯ ಜೊತೆ ಆತ್ಮವಿಶ್ವಾಸವೂ ಜೊತೆಗಿದ್ದಾಗ, ಸ್ವಸಾಮರ್ಥ್ಯದ ಮೇಲಿನ ನಂಬಿಕೆಯು ವಿಫಲತೆಯ ತೀವ್ರ ಭಯವನ್ನು ಮೆಟ್ಟಿನಿಂತಾಗ ಖಂಡಿತವಾಗಿ ಯಶಸ್ಸು ನಮ್ಮದಾಗುತ್ತದೆ **************************************

ಆತ್ಮ ವಿಶ್ವಾಸವಿರಲಿ… Read Post »

ಇತರೆ, ಜೀವನ

ಕಾನೂನು, ಮಹಿಳೆ ಮತ್ತು ಅರಿವು

ಅಂಜಲಿ ರಾಮಣ್ಣ ಬರೆಯುತ್ತಾರೆ
ಇದು ನನಗೆ ಕಲಿಸಿದ್ದು ಎರಡು ಪಾಠ. ಒಂದು ಹೆಂಗಸು ಮನಸ್ಸು ಮಾಡಿದರೆ, ಬುದ್ಧಿಯ ಮೂಲಕ ಗಳಿಸಿಕೊಂಡ ಆತ್ಮವಿಶ್ವಾಸ ಇದ್ದರೆ ಯಾರದ್ದೇ ಆಗಿರಲಿ, ಯಾವುದೇ ರೀತಿಯ ಮುಜುಗರವನ್ನು ಹೋಗಲಾಡಿಸಬಲ್ಲಳು

ಕಾನೂನು, ಮಹಿಳೆ ಮತ್ತು ಅರಿವು Read Post »

ಇತರೆ, ಜೀವನ

ನೀರು ಕುಡಿಯಿರಿ

ಲೇಖನ ನೀರು ಕುಡಿಯಿರಿ ಆಶಾ ಸಿದ್ದಲಿಂಗಯ್ಯ ಜನರು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ನೀರನ್ನು ಕುಡಿಯುವುದೇ ಮರೆತಿದ್ದಾರೆ ಆದರೆ ನೀರು ಆರೋಗ್ಯಕ್ಕೆ ಅತ್ಯವಶ್ಯಕ.. ನಮ್ಮ ಉಳಿವಿಗಾಗಿ ನೀರು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಯಾರಿಕೆಯನ್ನು ನೀಗಿಸುವುದಕ್ಕೆ ಮಾತ್ರವಲ್ಲ, ದೇಹ ಸರಿಯಾಗಿ ಕೆಲಸ ಮಾಡಲು ಹಾಗೂ ರೋಗ ಮುಕ್ತವಾಗಿಡಲು ನೀರು ಅಗತ್ಯ. ದೇಹದ ತೂಕ ಇಳಿಸಲು ಸಹ ನೀರು ಕುಡಿಯುವುದು ಸಹಾಯಕಾರಿ. ಬಿಸಿನೀರು ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಾಯ ಆಗುತ್ತಾ? ನಮ್ಮ ದೇಹದ ಸುಮಾರು 70% ರಷ್ಟು ನೀರಿನಿಂದ ಕೂಡಿದೆ ಹಾಗೂ ದೇಹದ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಸೇವಿಸುವುದು ಅತ್ಯಗತ್ಯ. ತಣ್ಣನೆ ಮತ್ತು ಬಿಸಿನೀರು ಎರಡೂ ತಮ್ಮದೇ ಆದ ಬಾಧಕಗಳನ್ನು ಹೊಂದಿವೆ. ತೀವ್ರವಾದ ವರ್ಕೌಟ್‌ ನಂತರ ತಣ್ಣಗಾಗಲು ಒಂದು ಲೋಟ ತಣ್ಣೀರು ನಿಮಗೆ ಸಹಾಯ ಮಾಡುತ್ತದೆ, ಆದರೆ ಬಿಸಿನೀರು ದೇಹದಿಂದ ಟಾಕ್ಸಿನ್‌ ಹೊರಹಾಕಲು ಸಹಾಯ ಮಾಡುವುದರೊಂದಿಗೆ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಕುಡಿಯುವ ನೀರು ವಿಶೇಷವಾಗಿ ಬಿಸಿನೀರು ತೂಕ ಕರಗಿಸಲು ಸಹಾಯ ಮಾಡುತ್ತದೆ. ಅದು ನಿಜವೇ? ಹೆಚ್ಚು ನೀರು ಕುಡಿಯುವುದರಿಂದ ಒಬ್ಬ ವ್ಯಕ್ತಿಯು ತೂಕ ಕಳೆದು ಕೊಳ್ಳುತ್ತಾನೆ. ಇದಕ್ಕೆ  ಕಾರಣವೆಂದರೆ ನೀರು ಹೊಟ್ಟೆ ತುಂಬಿರುವ ಫೀಲ್‌ ನೀಡುತ್ತದೆ, ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಕರಿಸುತ್ತದೆ. ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ, ಎಂದು ಸಂಶೋಧನೆಯೊಂದು ಹೇಳಿದೆ. 2003ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಬಿಸಿನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಯನ್ನು ಹೆಚ್ಚಿಸಬಹುದು. ಊಟಕ್ಕೆ ಮುಂಚಿತವಾಗಿ 500 ಮಿಲಿ ನೀರನ್ನು ಕುಡಿಯುವುದು ಮೆಟಾಬಾಲಿಸಮ್‌  30% ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ದಿನವಿಡೀ ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಗೆ ಮೂರು ವಿಧಗಳಲ್ಲಿ ಸಹಾಯವಾಗುತ್ತದೆ. ಬಿಸಿನೀರು ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆ ಬದಲಾಗುತ್ತದೆ. ನೀರಿನ ಬೆಚ್ಚಗಿನ ತಾಪಮಾನವನ್ನು ಸರಿದೂಗಿಸಲು, ನಮ್ಮ ದೇಹವು ಆಂತರಿಕ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ಸಕ್ರಿಯಗೊಳಿಸುತ್ತದೆ. ದೇಹದಲ್ಲಿನ ಕೊಬ್ಬನ್ನು ಒಡೆಯುತ್ತದೆ ಮತ್ತು ಅವುಗಳನ್ನು ಅಣುಗಳಾಗಿ ಪರಿವರ್ತಿಸುತ್ತದೆ, ಇದರಿಂದಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಫ್ಯಾಟ್‌ ಬರ್ನ್‌ ಸುಲಭಗೊಳಿಸುತ್ತದೆ. ಹಸಿವನ್ನು ನೀಗಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ನಿಮ್ಮ ಊಟಕ್ಕೆ 30 ನಿಮಿಷಗಳ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿದರೆ ನಿಮ್ಮ ಕ್ಯಾಲೊರಿ ಬರ್ನ್ ಆಗುವುದರಲ್ಲಿ ಅನುಮಾನವೇ ಇಲ್ಲ. ಜೀರ್ಣಕ್ರಿಯೆಯ ಪ್ರಕ್ರಿಯೆಯ ಸುಗಮವಾಗಿಸಲು ನೀರು ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಮಗೆ  ಜೀರ್ಣಿಸಿಕೊಳ್ಳಲು ಕಷ್ಟಪಡುವ ಆಹಾರ ಕಣಗಳನ್ನು ಸಹ ಕರಗಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಬಿಸಿನೀರು ನರಮಂಡಲವನ್ನು ಶಾಂತಗೊಳಿಸುತ್ತದೆ. ನಮ್ಮ ನರಮಂಡಲವು ಶಾಂತವಾಗಿದ್ದಾಗ, ನಾವು ಕಡಿಮೆ ನೋವುಗಳನ್ನು ಅನುಭವಿಸುವುದಲ್ಲದೆ, ದಿನವಿಡೀ ಶಾಂತವಾಗಿರಲು ನಮಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಿಸಿನೀರು ನಿಮ್ಮ ಕರುಳನ್ನು ಸಂಕುಚಿತಗೊಳಿಸುತ್ತದೆ, ಇದು ಕರುಳಿನಲ್ಲಿನ ಅಡಚಣೆಯನ್ನು ಕಡಿಮೆ ಮಾಡಿ ಮಲ ವಿಸರ್ಜನೆ ಸುಲಭಗೊಳಿಸುತ್ತದೆ. ಕುಡಿಯುವ ನೀರು ವ್ಯಕ್ತಿಯ ದೇಹದ ಉಷ್ಣತೆಯನ್ನು ಹೆಚ್ಚಿಸಿ ಬೆವರುವಂತೆ ಮಾಡುತ್ತದೆ. ಬೆವರುವಿಕೆಯ ರಂಧ್ರಗಳಿಂದ ಟಾಕ್ಸಿನ್‌ ಹೊರಹಾಕುತ್ತದೆ ************************************************************************

ನೀರು ಕುಡಿಯಿರಿ Read Post »

ಇತರೆ, ಜೀವನ

ಮಾತು ಮನವನ್ನು ಅರಳಿಸಬೇಕು

ಲೇಖನ ಮಾತು ಮನವನ್ನು ಅರಳಿಸಬೇಕು ಮಾಲಾ ಕಮಲಾಪುರ್ ಭಾಷೆ ಮನುಷ್ಯನಿಗೆ  ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ  ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ  ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು  ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು ಪ್ರಾಮಾಣಿಕ  ಮಾತುಗಳಿಂದ  ಅಲಂಕಾರ ದಿಂದ  ಶೋಭಿಸುತ್ತಾನೆ. ಮನುಷ್ಯನ  ಅಂತಸ್ತಾಗಲಿ, ಕುಲವಾಗಲಿ ಯಾವದು ಆತನ ಯಶಸ್ಸಿಗೆ ಕಾರಣವಾಗುವುದಿಲ್ಲ. ಮಧುರ ಮಾತೇ ಆತನ ಗೆಲುವಿಗೆ ಕಾರಣವಾಗುತ್ತದೆ.ಮಾತು ಮನವನ್ನು ಅರಳಿಸವೇಕು, ಹೃದಯತಣಿಸಿ ಜೀವಕ್ಕೆ ಕಳೆಯನ್ನು ತುಂಬ ಬೇಕು. ಶರಣರಾಗಲಿ, ದಾಸರಾಗಲಿ ತಮ್ಮ ನಡೆ ನುಡಿ ಸಾಮರಸ್ಯದ  ಬೆಸುಗೆಯನ್ನೇ ಬೆಸೆದಿದ್ದಾರೆ. ಅದಕ್ಕೆ ಬಸವಣ್ಣ ನವರು ನುಡಿದಡೇ  ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಕ್ಯದ  ದೀಪ್ತಿಯಂತಿರಬೇಕು, ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು ಸಾರಿದ್ದಾರೆ.ನಾವು ಮಾತನಾಡುವಾಗ ಸಮಯ ಸಂಧರ್ಭ ಅವಲೋಕಿಸಿ ಮಾತನಾಡಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಪ್ರಚಲಿತ ಗಾದೆ ಮಾತು ಇದೆ ಮಾತಿಗೆ ಕ್ಷಮೆ ಕೇಳಬಹದು ಆದರೆ ಅದರಿಂದಾಗುವ ನೋವು ಶಮನವಾಗುವುದಿಲ್ಲ. ಪುರಾಣ ಕಾಲದಲ್ಲಿಯೂ ಋಷಿ ಮುನಿಗಳ ಮಾತು ಕೋಪ ತಾಪ ದಿಂದ ಹೊರ ಬಂದಾಗ ಶಾಪವಾಗುತ್ತಿತ್ತು. ಅವರು ಅರಳಿದ ಹೃದಯದಿಂದ ಮಾತು ವರವಾಗುತಿತ್ತು. ಬಲ್ಲವರು ಕಡಿಮೆ ಮಾತುಗಳಲ್ಲಿ ಮೌಲ್ಲ್ಯಾ ಧಾರಿತ ವಿಷಯಗಳನ್ನು ಬಿಚ್ಚಿಡುತ್ತಾರೆ. ಮಾತು ಹಿತವಾದಷ್ಟು ಒಳಿತು. ಅದಕ್ಕೆ ನಮ್ಮ ಹಿರಿಯರು ಮಾತು ಬೆಳ್ಳಿ ಮೌನ ಬಂಗಾರ ಎಂದಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ನಾಲಿಗೆ ಒಳ್ಳೇದು ಆದರೆ ನಾಡೆಲ್ಲ ಒಳ್ಳೇದು. ಅದಕ್ಕೆ ನಮ್ಮ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಹೇಳಿದರು. ಮೃದುವಾದ ಮಾತು ಕಠೋರ ವ್ಯಕ್ತಿ ಗಳ ಹೃದಯವನ್ನು ಕರಗಿಸುತ್ತದೆ ಪ್ರಾಮಾಣಿಕ ಮಾತು ಮನುಷ್ಯನ ಕೀರ್ತಿಯನ್ನು ಹೆಚ್ಚಿಸುತ್ತದೆ. ************************

ಮಾತು ಮನವನ್ನು ಅರಳಿಸಬೇಕು Read Post »

ಇತರೆ, ಜೀವನ

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ ಚಂದಕಚರ್ಲ ರಮೇಶ ಬಾಬು ಒಂದು ವರ್ಷ ಸರಿದು ಹೋಗುವಾಗ ಅದು ಕೊನೆಗೆ ಕೊಟ್ಟ ಬವಣೆಯನ್ನು ಕಂಡು ವರ್ಷವನ್ನೇ ದೂರಲಾಗುವುದಿಲ್ಲ. ಎಂದಿನ ಹೊಸ ವರ್ಷದಂತೆ ೨೦೨೦ ರನ್ನು ಸಹ ನಾವೆಲ್ಲ ಸಂಭ್ರಮದಿಂದಲೇ ಸ್ವಾಗತಿಸಿದೆವು. ನಮ್ಮ ಕನಸುಗಳನ್ನು ನನಸಾಗಿಸಲು ಈ ವರ್ಷ ತನ್ನ ಪಾತ್ರ ಪೋಷಿಸುತ್ತದೆ ಎಂಬ ಭರವಸೆಯ ಆಶೆ ಹೊತ್ತೆವು. ಮೊದಲೆರಡು ತಿಂಗಳೂ ಯಾವುದಕ್ಕೂ ಕೊರತೆಯೆನಿಸಲಿಲ್ಲ. ಹಬ್ಬಗಳೂ, ಹರಿದಿನಗಳೂ, ಮದುವೆಗಳೂ ಎಲ್ಲ ಎಲ್ಲರೂ ಅಂದುಕೊಂಡಂತೆ ನಡೆದವು. ಅಷ್ಟರಲ್ಲೇ ಚೀನಾಕ್ಕೆ ಕೊರೋನಾದ ಸೋಂಕು ಕಾಲಿಟ್ಟಿತ್ತು. ಅಲ್ಲಿ ಸಾವುಗಳು ಸಂಭವಿಸಲಾರಂಭಿಸಿದ್ದವು. ಅವರು ತಮ್ಮನ್ನು ಇದರ ಬಗ್ಗೆ ಆಗಲೇ ಎಚ್ಚರಿಸಿಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ದೂರಿದ್ದು ಈ ಸೂಕ್ಷ್ಮಾಣು ಇತರೆ ದೇಶಗಳಲ್ಲೂ ತನ್ನ ಕರಾಳ ಹಸ್ತಗಳನ್ನು ಚಾಚಿದಾಗಲೇ. ನಮ್ಮ ದೇಶಕ್ಕೂ ಮಾರ್ಚ್ ತಿಂಗಳಲ್ಲಿ ಕಾಲಿಟ್ಟ ಈ ಕರೋನಾ ( ನಂತರ ಇದಕ್ಕೊಂದು ಕೋವಿಡ್-೧೯ ಅಂತ ನಾಮಕರಣ ಮಾಡಲಾಯಿತು ಅನ್ನಿ) ತನ್ನ ಪ್ರತಾಪ ತೋರಿಸಲಾರಂಭಿಸಿತ್ತು.  ಆ ಹೊತ್ತಿಗಾಗಲೇ ಇಟಲೀ, ಸ್ಪೆಯಿನ್, ಬ್ರಿಟನ್. ಫ್ರಾನ್ಸ್ ದೇಶಗಳಲ್ಲಿ ಸಾವಿರಾರು ಜನಗಳು ಸಾಯಲಾರಂಭಿಸಿದ್ದರು. ಅಮೆರಿಕಾ ಸಹ ಹಿಂದುಳಿದಿದ್ದಿಲ್ಲ. ಚೈನಾದ ಜೊತೆ ಉಳಿದ ದೇಶಗಳು ಇದರ ಬಗ್ಗೆ ಅಧ್ಯಯನ, ಚಿಕಿತ್ಸೆಗೆ ಬೇಕಾದ ಪ್ರಯೋಗ ಆರಂಭಿಸಿದವು. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಂತೆ ಕೈಗಳನ್ನು ಬಾರಿಬಾರಿಗೂ ಶುಚಿಮಾಡಿಕೊಳ್ಳುವುದು, ಮುಖಕ್ಕೆ ಗವಸು ಹಾಕಿಕೊಳ್ಳುವುದು, ಸಾಮಾಜಿಕ ದೂರದ ಪಾಲನೆ ಮಾಡುವುದು ನಮ್ಮ ದೇಶದಲ್ಲೂ ಆರಂಭಮಾಡುತ್ತ ಮಾರ್ಚ್ ೨೪ ರಿಂದ ಮೂರು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಯಿತು. ಅದನ್ನು ಲೆಕ್ಕಿಸದೇ ಹೊರಬಂದವರನ್ನು ಥಳಿಸಿ ಒಳಗೆ ಅಟ್ಟಲಾಯಿತು. ಕಚೇರಿಗಳಿಗೆ ಹೋಗುವ ಗಂಡಂದಿರು, ಶಾಲೆಗಳಿಗೆ ಹೋಗುವ ಮಕ್ಕಳು ಮನೆಯಲ್ಲೇ ಇರುತ್ತಿದ್ದು, ಅವರಿಗೆ ಹೊತ್ತು ಹೊತ್ತಿಗೂ ತಿಂಡಿ, ಊಟ ಒದಗಿಸುವುದಕ್ಕೆ ಮನೆ ಹೆಂಗಸರು ಹೆಣಗಾಡಿದರು. ಈ ಲಾಕ್ ಡೌನ್ ಸಮಯದಲ್ಲಿ ತಮಗೆ ಬೇಕಾದ ಎಣ್ಣೆ ಸಿಗದೇ ಮದ್ಯಪ್ರೇಮಿಗಳು ತಲೆಕೆಟ್ಟು ಆಡಿದ್ದು ನೆನೆಯಬಹುದಾಗಿದೆ. ಮೂರುವಾರ ಹೇಗೋ ಹಲ್ಲು ಕಚ್ಚಿ ತಡೆದುಕೊಂಡರಾಯಿತು ಎನ್ನುತ್ತ ಜನರು ಸಹ ಹುರುಪಿನಲ್ಲಿ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಮುಗಿಯುವುದಕ್ಕಾಗಿ ಕಾದರು. ಹೊಸ ದಿರಿಸುಗಳಂತೆ ಮುಖಕ್ಕೆ ಕವಚಿಕೊಳ್ಳುವ ಮುಸುಕಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚುಟುಕುಗಳು ಓಡಾಡಿದವು, ಹೊಸ ಕವಿತೆಗಳು ಹಾರಾಡಿದವು. ಪರಿಸರ ಮಾಲಿನ್ಯ ಕಮ್ಮಿಯಾಗಿ ವಾತಾವರಣ ತಿಳಿಯಾಯಿತು. ಎಂದೂ ಕೇಳದ ಕೋಗಿಲೆಯ ಇಂಚರ ಸತತವಾಗ ಕೇಳಿತು. ಕೆಲವರಿಗೆ ಅಲ್ಲಿಯವರೆಗೆ ಕಾಣದ ಹಿಮಾಲಯಗಳು  ಕಂಡವು. ತಾಂತ್ರಿಕತೆ ಮೈಗೂಡಿಸಿಕೊಂಡ ಜನರ ಈ ಉಸಿರುಗಟ್ಟುವ ಸನ್ನಿವೇಶದಲ್ಲೂ ತಮ್ಮದೇ ಆದ ಹೊಸ ಆಯಾಮಗಳನ್ನು ಹುಡಿಕಿದರು. ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ಸಮಾವೇಶಗಳು ಶುರುವಾದವು. ಸಮಾಚಾರ ತಂತ್ರದ ಸಂಸ್ಥೆಗಳು ಉದ್ಯೋಗಿಗಳಿಂದ ಮನೆಯಿಂದಲೇ ಕೆಲಸ ಮಾಡಿಸುತ್ತ ಅವರ ಕೆಲಸ ಕೆಡದಂತೆ ನೋಡಿಕೊಂಡರು. ಪಾಪ, ದಿನಗೂಲಿ ಕೆಲಸಗಾರರು, ಅಸಂಘಟಿತ ಕಾರ್ಮಿಕರು ತಮ್ಮ ತುತ್ತಿಗೆ ಒದ್ದಾಡಿದರು. ತಮ್ಮ ಮನೆಗಳಿಗೆ ಬೇಕಾದ ಸಂಚಾರದ ವ್ಯವಸ್ಥ ಕಾಣದೇ ಕಾಲ್ನಡಿಗೆಯಲ್ಲೇ ಮನೆಗಳಿಗೆ ತೆರಳುತ್ತಾ ಬವಣೆ ಅನುಭವಿಸಿದರು. ಅವರಿಗೆ ನೆರವಾಗುವ ಕೆಲ ಉದಾರಿ ಮನಗಳು ಹೊರಬಂದವು. ಕೆಲವರು ಮನೆಗಳಿಗೆ ಹೊರಟಿರುವ  ಈ ತರದ ಬಡಪಾಯಿಗಳಿಗೆ ಅನ್ನ, ವಸ್ತ್ರ, ವಸತಿ ನೋಡಿಕೊಂಡರ. ಕೆಲ ಸಂಸ್ಥೆಗಳು ತಮ್ಮ ಊರಿನಲ್ಲಿಯ ಬಡವರಿಗೆ ದಿನಸಿಯನ್ನು ಪೂರೈಸಿದರು. ಕರೋನಾ ಈ ತರದ ದಾನಶೀಲ ಗುಣವನ್ನು ಪ್ರಚೋದಿಸಿತ್ತು. ಝೂಮ್, ವೆಬ್ ನಾರ್, ಗೂಗಲ್ ನವರ ಆನ್ ಲೈನ್ ವೇದಿಕೆಗಳನ್ನು ಕಲಾಕಾರರು ಸಮರ್ಥವಾಗಿ ತಮ್ಮದಾಗಿಸಿಕೊಂಡು ತಮ್ಮ ಕಲಾ ಪ್ರದರ್ಶನಕ್ಕೊಂದು ಹೊಸ ವಿಧಾನ ಕಂಡುಕಂಡರು. ಕವಿಗೋಷ್ಠಿಗೆ ಅಥವಾ ಸಾಹಿತ್ಯ ಕಾರ್ಯಕ್ರಮಕ್ಕಾಗಿ ಆಯೋಜಕರು ಸಭಾಂಗಣಕ್ಕಾಗಿ ಒದ್ದಾಡುವುದು,ಕಲಾ ಕಾರರನ್ನು ಕರೆಸುವುದು, ಏನೋ ಅಡೆತಡೆಯಾಗಿ ತಡವಾಗಿ ಬರುವುದು ಅಥವಾ ಅನಾರೋಗ್ಯದಿಂದ ಬರದೇ ಇರುವುದು ಇವೆಲ್ಲವೂ ಇಲ್ಲದಾದವು. ಮನೆಯಲ್ಲಿ ತಮ್ಮ ಆರಾಮ ಕುರ್ಚಿಯಿಂದಲೇ ತಮ್ಮ ಸಾಹಿತ್ಯ ಕೃತಿಯನ್ನು ಓದಲು ಅನುಕೂಲವಾಯಿತು. ಯಕ್ಷಗಾನದ ಒಂದು ಪ್ರದರ್ಶನ ಸಹ ಪ್ರೇಕ್ಷಕರೇ ಇಲ್ಲದೇ ಪ್ರಯೋಗ ಮಾಡಿ ಮೆಚ್ಚುಗೆ ಗಳಿಸಲಾಯಿತು. ನಿರ್ಬಂಧಗಳು ಸಡಿಲವಾದ ಮೇಲು ಈ ಆನ್ ಲೈನ ವೇದಿಕೆಗಳಿಗೇ ಜನ ತಮ್ಮ ಒಲವನ್ನು ತೋರುತ್ತಿದ್ದಾರೆ. ಒಟಿಟಿ ವೇದಿಕೆಗಳು ತುಂಬಾ ಬೇಡಿಕೆಗೊಳಗಾದವು. ಅದರಲ್ಲಿ ಸಿಗುವ ಸಿನಿಮಾಗಳು ಜನಪ್ರಿಯವಾದವು. ಇನ್ನು ಕೆಲವೇ ದಿನಗಳಲ್ಲಿ ನಿರ್ಬಂಧ ಸಡಿಲಗೊಂಡು ಸಿನಿಮಾ ಟಾಕೀಸುಗಳು ತೆರೆದರೂ ಅವುಗಳಿಗೆ ಮುಗಿ ಬೀಳುವ ಜನತೆ ಕಮ್ಮಿಯೇ ಇರಬಹುದು. ಮನೆಯಲ್ಲಿಯೇ ಸಿನಿಮಾ ನೋಡಲು ಸಿಗುವಾಗ ಇನ್ನು ಟಾಕೀಸುಗಳಿಗೆ ಹೋಗುವರಾರು? ಅಲ್ಲವೇ ? ಈಗಿನ್ನೂ ಅರ್ಧದಷ್ಟು ಸಾಮರ್ಥ್ಯದಲ್ಲೇ ನಡೆಯುತ್ತಲಿವೆ. ಇವುಗಳ ಆರ್ಥಿಕ ಆಗುಬರುವಿಕೆಯ ಬಗ್ಗೆ ಪ್ರತ್ಯೇಕ ಅಧ್ಯಯನ ಮಾಡಬೇಕಾದೀತು. ಜೂಲೈ ತಿಂಗಳ ಹೊತ್ತಿಗೆ ಸರಕಾರ ಕೆಲವಾರು ವರ್ಗಗಳಿಗೆ ನಿಬಂಧನೆಗಳನ್ನು ಸಡಲಿಸಿತು. ಮತ್ತೆ ಜನ ಜೀವನ ರಸ್ತೆಗಳಿಗೆ ಬರಲು ಶುರುವಾಯಿತು. ಆದರೆ ಕರೋನಾ ಸೋಂಕಿದ ರೋಗಿಗಳ ಸಂಖ್ಯೆ ಕಮ್ಮಿಯಾಗಲಿಲ್ಲ. ಜನ ಸಂದಿಗ್ಧತೆಗೆ ಬಿದ್ದರು. ಹೊರಬರಲು ಹೆದರುವ ವರ್ಗವು ಒಂದಾದರೆ, ಯಾವುದಕ್ಕೂ ಲೆಕ್ಕಿಸದಿರುವ ಮತ್ತೊಂದು ವರ್ಗ ಹೀಗೆ. ಜೂಲೈ ತಿಂಗಳು ಮುಗಿಯುವಾಗ ಹತ್ತು ಲಕ್ಷ ಸೋಂಕುದಾರರಾದರು. ಆಗಸ್ಟ್ ತಿಂಗಳಾದರೂ ಕಮ್ಮಿಯಾಗಲಿಲ್ಲ. ಆದರೆ ನಿಬಂಧನೆಗಳು ಮಾತ್ರ ಸಡಿಲಗೊಳ್ಳುತ್ತಾ ಹೋದವು. ರಸ್ತೆಗಳ ಮೇಲೆ ಜನಸಂಚಾರ ಶುರುವಾಯಿತು. ಗಣಪತಿಯ ಹಬ್ಬಕ್ಕೆ ನಿಬಂಧನೆಗಳು ಸ್ವಲ್ಪ ಮಟ್ಟಿಗೆ ಸಡಿಲಗೊಂಡಿದ್ದರೂ ಜನರೇ ಹೆದರಿ ಜಾಸ್ತಿ ನೆರೆಯದಾದರು. ದಸರೆಗೂ, ದೀಪಾವಳಿಗೂ ಇದೇ ತರದ ಪರಿಸ್ಥಿತಿ. ನಮ್ಮ ದೇಶದಲ್ಲಿ ರಿಕವರಿ ಚೆನ್ನಾಗಿದೆ, ಮೃತರ ಸಂಖ್ಯೆ ತುಂಬಾ ಕಮ್ಮಿ ಅಂತ ಯಾವು ಯಾವುದೋ ಸಬೂಬುಗಳನ್ನು ಹೇಳಿಕೊಳ್ಳುತ್ತ ಸಮಾಧಾನ ಪಟ್ಟುಕೊಳ್ಳೋದು ಆಯಿತು. ಆದರೆ ನಂತರದ ದಿನಗಳಲ್ಲಿ ಮದುವೆ, ಗೃಹ ಪ್ರವೇಶಗಳು ಭರದಿಂದ ಮತ್ತೆ ಆಗ ತೊಡಗಿದವು. ಎಲ್ಲೆಲ್ಲೂ ಜನ ಕಾಣತೊಡಗಿದರು. ಛಾಂದಸರು ಮಾತ್ರ “ ಯಾರೂ ಕರೋನಾದ ನಿಬಂಧನೆಗಳನ್ನು ಪಾಲಿಸುತ್ತಲೇ ಇಲ್ಲ. ಏನು ಜನವಪ್ಪಾ!” ಎನ್ನುತ್ತ ಮೂಗು ಮುರಿಯುತ್ತ ಮನೆಗಳಲ್ಲೇ ಕಳೆಯತೊಡಗಿದರು. ಮನೆಯಲ್ಲಿಯ ದೊಡ್ಡವರಿಗೆ ತಮ್ಮ ನಿರ್ಬಂಧ ಹೇರತೊಡಗಿ ಹಿರಿಯರು ಚಡಪಡಿಸಲಾರಂಭಿಸಿದರು. ಅಮೆರಿಕದಲ್ಲಿಯ ಜನ ಮಾಸ್ಕ್ ಎನ್ನುವುದು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುವಂತಾಗುತ್ತದೆ ಎಂದು ಘೋಷಿಸಿ ಹಾಕದೇ ಎಲ್ಲ ಕಡೆಗೆ ತಿರುಗುತ್ತಾ ಅಲ್ಲಿದ್ದ ನಮ್ಮ ಭಾರತೀಯರಿಗೆ ತಳಮಳ ತಂದಿರುವುದು ಬೆಳಕಿಗೆ ಬಂದಿದೆ. ಅಲ್ಲಿ ಕರೋನಾದ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ. ಶಾಲೆಗಳು ಮಾತ್ರ ಇನ್ನೂ ಪ್ರಾರಂಭವಾಗಿಲ್ಲ. ಹಾಗಂತ ಮಕ್ಕಳಿಗೇನೂ ರಿಯಾಯ್ತಿಯಾಗಿಲ್ಲ. ಅವರಿಗೂ ಆನ್ ಲೈನಿನ ಮೇಲೆ ಪಾಠಗಳು ಮೂರು ತಿಂಗಳ ಹಿಂದಿನಿಂದಲೇ ಶುರುವಾಗಿವೆ. ಮಕ್ಕಳ ಶಾಲೆಯ ಶುಲ್ಕವೂ ಕಟ್ಟ ಬೇಕಾಗಿದ್ದು ಪಾಲಕರು ಎರಡೂ ಬಗೆಯ ನೋವನ್ನು ಅನುಭವಿಸುತ್ತಿದ್ದಾರೆ. ಕೆಲ ಖಾಸಗೀ ವಿದ್ಯಾ ಸಂಸ್ಥೆಗಳು ಬಂದಾಗಿ ಅಲ್ಲಿಯ ಶಿಕ್ಷಕರು ಬೀದಿಗೆ ಬಿದ್ದಿದ್ದಾರೆ. ಜೀವನ ನಡೆಸಲ ಯಾವ್ಯಾವುದೋ ಕೆಲಸಗಳನ್ನು ಮಾಡಿ ಬದುಕುತ್ತಿರುವುದು ಸಹ ಸಾಮಾಜಿಕ ಜಾಲತಾಣಗಳ, ಕಥೆಗಳ ವಸ್ತುವಾಗಿದೆ. ಆನ್ ಲೈನ ಪಾಠಗಳು, ಮೀಟಿಂಗ್ ಗಳು ನಡೆಯುವಾಗ ಮಧ್ಯದಲ್ಲಾಗುವ ಕೆಲ ಹಾಸ್ಯ ಪ್ರಸಂಗಗಳು ಮನಸ್ಸಿಗೆ ಮುದ ನೀಡಿವೆ. ಕೆಲ ನಿಯತ ಕಾಲಿಕ ಪತ್ರಿಕೆಗಳು ಅನ್ ಲೈನ್ ನ ಆಸರೆ ಪಡೆದು ಮುದ್ರಣವನ್ನು ಕೆಲ ಕಾಲ ನಿಲ್ಲಿಸಿದ್ದು, ಈಗಷ್ಟೇ ಮತ್ತೆ ಶುರುಮಾಡಿವೆ. ಈ ವರ್ಷದ ಕೊನೆಯ ಹೊತ್ತಿಗೆ ಇನ್ನೇನು ಎಲ್ಲಾ ಸೇವೆಗಳೂ ಪುನರಾರಂಭವಾಗುವುವು ಎನ್ನುವ ಹೊತ್ತಿಗೆ ಇಂಗ್ಲೆಂಡಿನಲ್ಲಿ ಮತ್ತೊಂದು ಇದರ ಸಂಬಂಧೀ ಸೋಂಕಿನ ಸೂಕ್ಷ್ಮಾಣು ಕಾಣಿಸಿಕೊಂಡು ತನ್ನ ಪ್ರತಾಪ ತೋರಲಾರಂಭಿಸಿದೆ. ಇದರ ಹಾವಳಿ ಏನು, ಹೇಗೆ ಅಂತ ಇನ್ನೂ ಗೊತ್ತಾಗುತ್ತಾ ಇಲ್ಲ. ಆದರೇ ಇತರೆ ದೇಶಗಳು ಅಪ್ರಮತ್ತವಾಗಿರುವು ಹೌದು. ಆದರ ಒಂದು ಸಮಾಧಾನದ ಅಂಶವೆಂದರೆ ಕೆಲ ದೇಶಗಳಲ್ಲಿ ಲಸಿಕೆಯನ್ನು ಕೊಡಲು ಶುರುಮಾಡಿದ್ದು. ನಮ್ಮ ಭಾರತದಲ್ಲಿ ಇದರ ಒಣ ಪ್ರಯತ್ನವನ್ನು ಮಾಡಿ ನೋಡುತ್ತಿದ್ದಾರೆ. ಲಸಿಕೆ ಎಲ್ಲರಿಗೂ ಸಿಗುವ ಹಾಗೆ ಮಾಡುತ್ತೇವೆಂದು ಸರ್ಕಾರ ಆಶ್ವಾಸನ ನೀಡಿದೆ. ಕಾಯಬೇಕು ಮಾತ್ರ. ಕರೋನಾ ಪ್ರಭಾವದಿಂದ ಹಲವಾರು ದೇಶಗಳ ಆರ್ಥಿಕ ಸ್ಥಿತಿಯನ್ನು ಹದಗೆಟ್ಟಿವೆ. ಹೊಸ ಉದ್ಯೋಗಗಳು ನಿರ್ಮಾಣವಾಗುವ ಅವಕಾಶ ಕಾಣದಾಗಿದೆ. ಇತರೆ ಕ್ಷೇತ್ರಗಳಲ್ಲಿ ನಡೆಯ ಬೇಕಾದ ಸಂಶೋಧನಾ ಕಾರ್ಯಕ್ರಮಗಳು ನಿಂತಿವೆ. ಎಲ್ಲರ ಲಕ್ಷ್ಯ ಬರೀ ಕರೋನಾಗೆ ಲಸಿಕೆ ಕಂಡ ಹಿಂಡಿಯುವುದರಲ್ಲೇ ಆಗಿದೆ. ನಿಧಿಗಳು ಸಹ ಅದಕ್ಕೇ ನೀಡಲಾಗುತ್ತಿದೆ. ವಿಶ್ವದಾದ್ಯಂತವಾಗಿ ೮ ಕೋಟಿ ಜನರು ಇದರಿಂದ ಪೀಡಿತರಾಗಿದ್ದಾರೆ. ಸುಮಾರು ೧೮ ಲಕ್ಷ ಜನರು ಸತ್ತಿದ್ದಾರೆ. ನೂರು ವರ್ಷದ ಹಿಂದೆ ಸ್ಪೆಯಿನ್ ಫ್ಲೂ ನಂತರ ಈ ತರದ ಜನರನ್ನು ಬಲಿ ತೆಗೆದುಕೊಂಡ ಮಹಾಮಾರಿ ಕರೋನಾವೇ ಆಗಿದೆ. ಜನರು ಅತಿ ಜರೂರು ಸಮಯಗಳಲ್ಲೂ ತಮ್ಮವರ ಹತ್ತಿರಕ್ಕೆ ಹೋಗಲಾರದೇ ಒದ್ದಾಡಿದ್ದಾರೆ. ಕೆಲವರ ಕೈ ಕಟ್ಟಿ ಹೋಗಿದೆ. ಬಡತನ ಹೆಚ್ಚಿದೆ. ಆದರೆ ಕರೋನಾ ಹೊಡೆತದಿಂದ ಕೆಲವಾರು ಸಾಮಾಜಿಕೆ ಸುಧಾರಣೆಗಳಾಗಿವೆ.  ಜನರಿಗೆ ತಾವೊಬ್ಬರೇ ಸುಖವಾಗಿರಬೇಕು ಎನ್ನಿಸದೇ ಇಡೀ ಸಮುದಾಯವೇ ರೋಗ ರಹಿತವಿರಬೇಕೆಂಬ ಭಾವನೆ ಬೆಳೆದಿದೆ. ಒಂದೈದಾರು ತಿಂಗಳು ವಾತಾವರಣ ತಿಳಿಯಾಗಿದ್ದು, ಪಶು ಪಕ್ಷಿಗಳು ಸುಖ ಕಂಡಿವೆ. ತಮ್ಮ ವೈಯಕ್ತಿಕ ಶುಭ್ರತೆಯ ಬಗ್ಗೆ ಜನರಿಗೆ ತಿಳಿದುಬಂದಿದೆ. ಇದರ ಬಗ್ಗೆ ಅತೀ ಮಡಿ ಮಾಡುವ ಜನರು ಬೆನ್ನು ತಟ್ಟಿಕೊಂಡಿದ್ದಾರೆ.  ಅಲ್ಲಲ್ಲಿ ಕೆಲ ಲೋಪದೋಷಗಳು ಕಂಡರೂ ಸರಕಾರದ ಬಗ್ಗೆ ಭರವಸೆ ಹುಟ್ಟಿದೆ. ಇವು ಯಾವುದಕ್ಕೂ ಕಾರಣವಲ್ಲದ ೨೦೨೦ರ ವರ್ಷ ಬರೀ ಸಾಕ್ಷಿಯಾಗಿ ನಿಂತು ಕಾಲಗಮನದಲ್ಲಿ ತನ್ನ ಪಾತ್ರವನ್ನು ಮುಗಿಸಿ ಹೊರಡಲಿದೆ. ಕೆಲಕಡೆ ೨೦೨೦ರ ಮೊದಲಲ್ಲಿ ಯಾರು ಹ್ಯಾಪೀ ನ್ಯೂ ಇಯರ್ ಹೇಳಿದ್ದು ಅಂತ ದೊಣ್ಣೆ ಹಿಡಿದು ನಿಂತ ಚುಟುಕನ್ನು ಕಂಡು ಈ ವರ್ಷ ನಗೆ ತಂದುಕೊಂಡಿದೆ. ತಾನು ಮಾಡಿದ್ದೇನು ಇದರಲ್ಲಿ ಅಂತ ಪ್ರಶ್ನಿಸಿಕೊಂಡಿದೆ. ಮನುಷ್ಯನ ದುರಾಸೆ, ಸ್ವಾರ್ಥ, ವಾತಾವರಣದ ಬಗ್ಗೆ ಯಾವ ಮಾತ್ರವೂ ಕಾಣದ ಕಾಳಜಿ ಇದಕ್ಕೆ ಕಾರಣಗಳು ಎಂದು ಅರಿಯದ ಮನುಷ್ಯ ಜಾತಿಯ ಬಗ್ಗೆ ಮರುಕ ಪಟ್ಟು ಹೊರಡಲಿದೆ. ಅದಕ್ಕೊಂದು ಸಮಾಧಾನ. ತನ್ನ ಅವಧಿ ಮುಗಿಯುವ ವೇಳೆಗೆ ಲಸಿಕೆ ಲಭ್ಯ ಅಂತ ಗೊತ್ತಾಗಿದ್ದು ಹರ್ಷದಾಯಕವೇ ಆದರೂ ಇನ್ನೇನು ಒಂದು ಸಂತೋಷದ ನಗೆಯಿಂದ ಮುಕ್ತಾಯವಾಗ ಬೇಕಿದ್ದ ತನ್ನ ಅವಧಿಗೆ ಕರೋನಾದ ಹೊಸ ಅವತಾರ ನಿರಾಶೆ ತಂದಿದೆ. ದುರಂತವೂ ಸುಖಾಂತವೂ ತಾನಂತೂ ತೆರೆ ಮರೆಯಾಗುವುದು ಖಂಡಿತಾ ಅಂತ ಗೊತ್ತಿದ್ದ ೨೦೨೦ ಜಗಕ್ಕೆ ಬಂದು ಅಪ್ಪಳಿಸಿದ ಈ ವಿಪತ್ತಿಗೆ ತನ್ನ ಪ್ರಮೇಯ ಏನೂ ಇಲ್ಲ ಎಂಬುದು ಎಲ್ಲರೂ ಅರಿಯಲಿ ಎಂದು ಆಶಿಸುತ್ತಾ ಮತ್ತು ೨೦೨೧ ಕರೋನ ಒಂದೇ ಅಲ್ಲ ಎಲ್ಲ ರೋಗ ರಹಿತ ಹೊಸ ವರ್ಷವಾಗಲಿ ಎಂದು ಹಾರೈಸುತ್ತಿದೆ. *********************                                                                                    

ತೆರೆ ಮರೆಯಾಗಲಿರುವ ನತದೃಷ್ಟ ೨೦೨೦ Read Post »

ಇತರೆ, ಜೀವನ

ಆಶ್ಚರ್ಯ,ಆಘಾತಗಳ ವರ್ಷ

ಆಶ್ಚರ್ಯ,ಆಘಾತಗಳ ವರ್ಷ ನೂತನ ದೋಶೆಟ್ಟಿ 2020ರ ವರ್ಷಕ್ಕೆ ಒಂದು ಪದದಲ್ಲಿ  ಶೀರ್ಷಿಕೆ ಕೊಡಿ ಎಂದರೆ ನಾನು ‘ದಿಗಿಲು’ ಎಂದು ಕೊಡುತ್ತೇನೆ. ಇದು ಭಯ, ಆಶ್ಚರ್ಯ, ಆಘಾತ ಮೊದಲಾದವುಗಳು ಒಟ್ಟು ಸೇರಿ ಉಂಟು ಮಾಡಬಹುದಾದ ಹೇಳಲು ಆಗದ ಒಂದು ಸ್ಥಿತಿ. ಇಂಥ ಸ್ಥಿತಿ ಆಗಾಗ ಎಲ್ಲರ ಜೀವನದಲ್ಲೂ ಬರುತ್ತಲೇ ಇರುತ್ತದೆ. ಆದರೆ ಒಟ್ಟಾರೆ ಮನುಕುಲವೇ ಇಂಥ ಸಮೂಹ ಸ್ಥಿತಿಗೆ ಒಳಗಾಗಿದ್ದು ಆಧುನಿಕ ಕಾಲದಲ್ಲಿ ಇದು ಮೊದಲ ಬಾರಿ ಎಂದು ಹೇಳಬಹುದು. ವಿಶ್ವ ಮಹಾಯುದ್ಧ ಗಳು  ನಡೆದ ಕಾಲದಲ್ಲಿ ಮಾಧ್ಯಮಗಳು, ಅದರಲ್ಲೂ ಸಾಮಾಜಿಕ ಮಾಧ್ಯಮಗಳು ಇರದ ಕಾರಣ ಇವುಗಳ ಘೋರ ಪರಿಣಾಮ ಇಡಿಯ ವಿಶ್ವದ ಮೇಲೆ ಈಗಿನಂತೆ ಆಗಿರಲಿಲ್ಲ. ಆದರೆ ಈಗ  ಕ್ಷಣಾರ್ಧದಲ್ಲಿ ವಿಶ್ವವನ್ನು ಸುತ್ತಿಬರುವ  ಸುದ್ದಿಗಳು ಈ ವರ್ಷದ ದಿಗಿಲನ್ನು ಹೆಚ್ಚಿಸಿವೆ ಎಂದರೂ ತಪ್ಪಿಲ್ಲ. ಇವೆಲ್ಲದರ ಹೊರತಾಗಿ ಬದುಕು ನಿಲ್ಲದೇ ನಡೆದು ದೊಂದು ದೊಡ್ಡ ಸೋಜಿಗ. ಹೃದಯವನ್ನು ಕಲಕುವ ಜನರ ಗುಳೆ, ಬಾಗಿಲಲ್ಲಿ ಬಂದು ನಿಂತು ಅಕ್ಕಿ, ಹಿಟ್ಟು ಏನಾದರೂ ಕೊಡಿ ಎಂದು ಕೇಳುವ ಚಿಕ್ಕ ವಯಸ್ಸಿನ ಹೆಂಗಸರು, ಚಿಕ್ಕ ಮಕ್ಕಳ ಮನಕಲಕುವ ಕಂಗೆಟ್ಟ ಮುಖಗಳು, ರಣಗುಡುವ ಏಕಾಂತ ಬೀದಿಗಳು, ಸತ್ತ ನೆರೆಹೊರೆಗಳು ಏಪ್ರಿಲ್, ಮೇ ತಿಂಗಳುಗಳನ್ನು ಈ ಮೊದಲು ಹೇಳಿದ ದಿಗಿಲಿಗೆ ಅಕಸ್ಮಾತ್ ಆಗಿ ನೂಕಿ ಕಂಗೆಡಿಸಿದ್ದವು. ಇನ್ನು ಕೈಯಲ್ಲಿ ಕಾಸಿದ್ದರೂ ಹೊರಗೆ ಹೋಗುವಂತಿಲ್ಲ. ಕೊಳ್ಳುವ ಶಕ್ತಿ ಇರುವವರ ಕತೆಯೇ ಹೀಗಾದರೆ ರಟ್ಟೆಯ ಬಲವನ್ನೇ ನಂಬಿ ಬದುಕುತ್ತಿದ್ದ ಅಸಂಖ್ಯಾತರ ಬದುಕು ಏನಾಗಿರಬೇಡ!!  ಇಂಥ ಕಾಲದಲ್ಲಿ ಕೈ ಹಿಡಿದು ನಡೆಸಿದ್ದು ಗಾಂಧೀಜಿಯವರ ಸರಳ ಜೀವನದ ಕಲ್ಪನೆ. ಕೊಳ್ಳುವ, ತಿನ್ನುವ ಎಲ್ಲ ಹಪಹಪಿಗಳಿಗೂ ಸಾರ್ವತ್ರಿಕವಾಗಿ ಕಡಿವಾಣ ಹಾಕಿ ಅಲ್ಪ ತೃಪ್ತಿಯನ್ನು ವಿಶ್ವಕ್ಕೇ ಕಲಿಸಿದ ಕಾಲ ಇದು. ಭಾರತದ ಮಟ್ಹಿಗೆ ಹೇಳುವುದಾದರೆ ಮೊದಲೆರಡು ಮೂರು ತಿಂಗಳುಗಳಿಗೆ ಬೇಕಾಗುವಷ್ಟು ಸಾಮಾನುಗಳನ್ನು ಮನೆಯಲ್ಲಿ ತಂದು ಪೇರಿಸಿಕೊಂಡ ಕೊಳ್ಳುಬಾಕರು,  ತಿಂದು ತೇಗಿದರೂ ನಂತರ ಸರಳತೆಯ ಕಡೆ ಅನಿವಾರ್ಯವಾಗಿ ಹೊರಳಬೇಕಾದ್ದು ಈ ವರ್ಷ ಕಲಿಸಿದ ದೊಡ್ಡ ಪಾಠ. ಗಾಂಧೀಜಿಯವರು ಹಾಲು, ಹಣ್ಣು, ಶೇಂಗಾಬೀಜ ಮೊದಲಾದ ಅತ್ಯಲ್ಪ ಆಹಾರವನ್ನು ಸೇವಿಸಿಯೂ ನೂರಾರು ಕಿ.ಮೀ ದೂರ ಕಾಲ್ನಡಿಗೆ ಮಾಡಬಲ್ಲ, ಹತ್ತಾರು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವ ಸಾಮರ್ಥ್ಯವನ್ನು ದೇಹಕ್ಕೆ ಕಲಿಸಿದ್ದರು. ದೇಹ ನಮ್ಮ ಅವಶ್ಯಕತೆಗೆ ಒಗ್ಗಿಕೊಳ್ಳುವಂತೆ ಬಾಗಿಸುವ ಸಾಮರ್ಥ್ಯ ಎಲ್ಲರಿಗೂ ಇರುತ್ತದೆ. ಆದರೆ ತೀರದ  ಆಸೆಗಳು, ಜಿಹ್ವಾ ಚಾಪಲ್ಯ ಅದನ್ನು ತಡೆ ಹಿಡಿಯುತ್ತವೆ. ಇದನ್ನು ನಾನೂ ಏಕೆ ಪ್ರಯತ್ನಿಸಬಾರದು ಎಂದು ನನಗೆ ಸಲಹೆ ನೀಡಿದ್ದು ನನ್ನ ಮಗ.  ಮನೆಯಿಂದ ದೂರ ಇರಬೇಕಾದ ಅನಿವಾರ್ಯತೆ, ಹೊರಗೆ ಕೊಂಡು ತಿನ್ನಲು ಹೊಟೆಲ್ಲುಗಳಿಲ್ಲ. ಏನಾದರೂ ಸಿದ್ಧ ಪಡಿಸಿಕೊಳ್ಳೋಣವೆಂದರೆ ಹೊರಗೆ ಹೋಗಿ ಕೊಳ್ಳಬೇಕಾದ ಅನಿವಾರ್ಯತೆ. ಇವೆಲ್ಲವುಗಳಿಗೆ ಪರಿಹಾರವಾಗಿ ಬಂದಿದ್ದು ದ್ರವಾಹಾರದ ಪ್ರಯೋಗ.  ಮೂಲತಃ ಮಲೆನಾಡಿಗರಾದ ನಮ್ಮ ಬೆಳಗು ಆರಂಭವಾಗುವುದು ಕಷಾಯದಿಂದ. ಸುಮಾರು 15 ಪದಾರ್ಥಗಳನ್ನು ಹಾಕಿ ನಾನು ಮನೆಯಲ್ಲೇ ಮಾಡುವ ಈ ಕಷಾಯಕ್ಕೆ ಬೆಲ್ಲ ಹಾಕಿ ಕುಡಿದರೆ ಇದು ಸಾರ್ವಕಾಲಿಕ ಔಷಧ ನಮಗೆ. ಆನಂತರ ಸುಮಾರು 9 ಗಂಟೆಗೆ ವಿವಿಧ ಧಾನ್ಯಗಳು, ಮೊಳಕೆ ಕಾಳುಗಳ ಪುಡಿಯ ಮಿಶ್ರಣವನ್ನು ಹಾಲಿನಲ್ಲಿ ಕಲೆಸಿ ಕುಡಿದರೆ ಅದು ತಿಂಡಿಗೆ ಪರ್ಯಾಯ. ಮಧ್ಯಾಹ್ನದ ಊಟದ ಹೊತ್ತಿಗೆ ಹಣ್ಣು, ಸೌತೆಕಾಯಿ, ಗಜ್ಜರಿ, ಒಣಹಣ್ಣುಗಳು  ಇವುಗಳಲ್ಲಿ ಯಾವುದನ್ನಾದರೂ ತಿಂದು ಮತ್ತೆ ಒಂದು ಲೋಟ ಪುಡಿ ಮಿಶ್ರಣ ಮಾಡಿದ ಹಾಲು ಕುಡಿದರೆ ಊಟ ಮುಗಿದಂತೆ. ರಾತ್ರಿ ಊಟಕ್ಕೆ ಮತ್ತೆ ಮಧ್ಯಾಹ್ನದ ಊಟದಂತೆಯೇ. ಕೆಲವೊಮ್ಮೆ ರಾಗಿಯ ಮಾಲ್ಟ್ ಅನ್ನು ಊಟ ಅಥವಾ ತಿಂಡಿಗೆ ಪರ್ಯಾಯವಾಗಿ ಬಳಸುವುದು. ಮೊದಲ ನಾಲ್ಕೈದು ದಿನಗಳು ಸ್ವಲ್ಪ ಸುಸ್ತು ಎನ್ನಿಸಿದ್ದು ನಿಜ. ಆದರೆ ಯೋಗ, ವ್ಯಾಯಾಮ ಮಾಡುವಾಗ ಏನೂ ತೊಂದರೆಯಾಗುತ್ತಿರಲಿಲ್ಲ. ಲವಲವಿಕೆಗೂ, ಉತ್ಸಾಹಕ್ಕೂ ಕುಂದು ಬರಲಿಲ್ಲ. ಶ್ರವಣ ಬೆಳಗೊಳದ 650 ಮೆಟ್ಟಿಲುಗಳನ್ನು 25 ನಿಮಿಷಗಳಲ್ಲಿ  ಏದುಸಿರಿಲ್ಲದೇ ಹತ್ತಿದಾಗ ನನ್ನ ಆಹಾರ, ಜೀವನ ಶೈಲಿಯ ಬಗ್ಗೆ ನನಗೆ ಪೂರ್ಣ ನಂಬಿಕೆ ಬಂದಿತು. ಈಗ ನಾನು ಅದನ್ನೇ ಮುಂದುವರೆಸಿದ್ದೇನೆ. ಎಂದಾದರೊಂದು ದಿನ ಬಾಯಿ ಚಪಲದಿಂದಾಗಿ ಇತರ ತಿಂಡಿಗಳನ್ನು ತಿಂದರೂ ಮತ್ತೆ ಇದಕ್ಕೇ ಮರಳುತ್ತೇನೆ. ಈ ಮಿತ ಆಹಾರ  ನನಗೆ ಹೆಚ್ಚು ಆರಾಮದಾಯಕ ಎನ್ನಿಸುತ್ತದೆ. ಬಹುಶಃ ಈ ದಿಗಿಲಿನ ವರ್ಷ  ಬರೆದಿದ್ದರೆ ನಾನು ಇಂಥ ಪ್ರಯೋಗ ಮಾಡುತ್ತಿದ್ದೆನೋ ಇಲ್ಲವೋ. ಹೀಗೊಂದು ಸಂತ್ರಪ್ತಿ ತಂದ ವರ್ಷವೂ ಇದು ಎನ್ನುವುದು ನನಗೂ ಸೋಜಿಗವೇ. **********************************

ಆಶ್ಚರ್ಯ,ಆಘಾತಗಳ ವರ್ಷ Read Post »

You cannot copy content of this page

Scroll to Top