ಸಾಕು ಬಳುಬಳಿ…
ಕವಿತೆ ಸಾಕು ಬಳುಬಳಿ… ಕೃಷ್ಣಮೂರ್ತಿ ಕುಲಕರ್ಣಿ ಸಾಲು ದೀಪ ಉರಿಯುವಾಗಒಂದಕಂಟಿದೆ ಸೊಡರುಮಕ್ಕು ಕವಿದು ಬಿಕ್ಕುವಾಗಅದ್ಯಾರು ನೋಡ್ವರು ಹೇಳುದೀಪಗಳು ಪ್ರಜ್ವಲತೆಯಲಿಸುತ್ತ ಬೆಳಗುವಾಗಹಬ್ಬದ ಸಡಗರ ಹಬ್ಬಿರುವಾಗಆರ್ಥ ಧ್ವನಿಯತ್ತಹರಡದು ಯಾರ ಚಿತ್ತಈ ತನಕ ಬೆಳಗಿದೆಬೇಕಿದೆ ಈಗ ವಿರಾಮಎಂದಾರುತಿದೆ ಬಸವಳಿದ ದೀಪಅದಕು ಮುನ್ನ ಬೆಳಗಿಸಿದೆಇನ್ನೊಂದು ರೂಪದೀಪದಿಂದ ದೀಪಹಚ್ಚಬೇಕು ಮಾನವಅದೆ ದೀಪ ಉಳಿಯಲೆಂಬಸೊಲ್ಲು ಬೇಡಾ ಕೇಳುವಬೆಳಕು ಮುಖ್ಯ ಬದುಕಿನಲ್ಲಿಅಂಧತೆಯ ತೊಡೆಯಲುನಾನು ನನದು ಎಂಬುದೆಲ್ಲಬತ್ತಿಯಾಗಿ ಉರಿಯಲುಶಕ್ತಿ ಕೊಡು ದೀಪಾವಳಿಸಾಕು ಇದೇ ಬಳುವಳಿ… **********************









