ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ”

ಕಾವ್ಯಸಂಗತಿ ಜಯಶ್ರೀ .ಭ.ಭಂಡಾರಿ “ನೀನುಬಂದ ಮೇಲೆ” ಪತ್ರ ಬರೆಯುವ ಸಂಸ್ಕೃತಿಮಾಯವಾಯಿತುಬರೀ ಫೋನಿನಲ್ಲಿ ಮಾತುಕತೆಮುಗಿಯುವಂತಾಯ್ತು. ಎಳ್ಳು ಬೆಲ್ಲ, ಬನ್ನಿ ಕೊಡುವ ಸಂಪ್ರದಾಯಕಡಿಮೆಯಾಯಿತುಇವೆಲ್ಲಾ ಇಮೇಜುಗಳ ಮೂಲಕವಾಟ್ಸಾಪ್ನಲ್ಲಿ ಕಾಣುವಂತಾಯಿತು. ಮನೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆಕೊಡ್ತಿದ್ವಿಈಗ ಮೊಬೈಲ್ ನಲ್ಲಿ ಕಳಿಸಿ ಬನ್ನಿ ಅಂತಕರಿತಿವಿ. ಗ್ರಂಥಾಲಯಕ್ಕೆ ಹೋಗಿ ಪುಸ್ತಕ ಹುಡುಕಿಓದುತ್ತಿದ್ವಿಈಗ ಏನಿದ್ದರೂ ಗೂಗಲ್ ಸರ್ಚ್ ಮಾಡಿಪಡಕೊಂತೀವಿ. ದಿನಪತ್ರಿಕೆಗಳು ಮನೆಗೆ ತರಿಸುವದುಕಡಿಮೆಯಾಯಿತುಸಮಯ ಸಿಕ್ಕಾಗ , ತಾಳ್ಮೆ ಇದ್ದಾಗ ಮಾತ್ರಮೊಬೈಲ್ ನಲ್ಲಿ ಓದುವಂತಾಗಿದೆ. ಪಿಯಾನೋ ಪೆಟ್ಟಿಗೆ, ತಬಲಾ ತಂದು ವಾರ್ಷಿಕ ಸಮ್ಮೇಳನಪ್ರಾಕ್ಟೀಸ್ ಮಾಡಸ್ತಿದ್ವಿ.ಈಗ ಮಕ್ಕಳು ಮೊಬೈಲ. ನೋಡಿಭರ್ಜರಿ ಡ್ಯಾನ್ಸ್ ಮಾಡ್ತಾರೆ. ಒಂದು ಹೊತ್ತಿನ ಊಟ ಇರದಿದ್ದರೂಜೀವನ ನಡೆದೀತು..ಒಂದು ಕ್ಷಣ ಮೊಬೈಲು ಕೈಗೆ ಸಿಗದಿದ್ದರೆಜೀವವೇ ಹೋದೀತು.. ನೀನಿಲ್ದಾಗ ಅದೆಷ್ಟು ಚಂದ ಇದ್ವಿಕೂಡಿ ಬದುಕುತ್ತಿದ್ದಿ ಕೂಡಿ ಮಾತಾಡ್ತಿದ್ವಿನೀ ಬಂದ್ಮೇಲೆ ನಿನ್ ಕೈಯಾಗ ಸಿಕ್ಕುಒದ್ದಾಡ್ತಿದ್ದೀವಿ. ಜಯಶ್ರೀ .ಭ.ಭಂಡಾರಿ.

ಜಯಶ್ರೀ .ಭ.ಭಂಡಾರಿ ಕವಿತೆ”ನೀನುಬಂದ ಮೇಲೆ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನನ್ನೆದೆಯ ಖಾಲಿ ಪುಟದ ಮೇಲೆ ಬರೆದೆ ನೋವಿನ ಶಾಯರಿಹೃದಯದಾ ಗೋಡೆಯ ಮೇಲೆ ಕೊರೆದೆ ನೋವಿನ ಶಾಯರಿ ಪುಟಿದೇಳುವ ಭಾವಗಳ ಸಲುಹಲಾರದೆ ನೆಚ್ಚಿದೆ ಮಧುಶಾಲೆಮನದಂಗಳ ರಂಗವಲ್ಲಿ ತುಂಬಾ ಹಾಸಿದೆ ನೋವಿನ ಶಾಯರಿ ನೆನಪಿನಲೆ ಅಪ್ಪಳಿಸೋ ವೇಗಕೆ ತುಟಿಗಂಟಿತು ಮಧುಬಟ್ಟಲುತಲ್ಲಣಿಸೋ ದೇಹಧರೆ ಮೇಲೆಲ್ಲಾ ಹೊಸೆದೆ ನೋವಿನ ಶಾಯರಿ ಪ್ರೇಮದೋಲೆಯ ಅಕ್ಷರಗಳು ಕಾಣದಂತೆ ಕುಡಿದೆ ಮಧುಪಾಕಸಂತಸದ ಸರಸದಲೆಯ ಅಬ್ಬರಕೆ ಬೆಸೆದೆ ನೋವಿನ ಶಾಯರಿ ತನು ಒಲವ ಒಸುಗೆಯ ಕಸಿವಿಸಿಯಲಿರೆ ಸುರೆ ಒಳಗೆ ಸುರಿದೆಜೀವ ತರಂಗದ ಆಲಾಪಕೆ ಕಲ್ಲಂತೆ ಎಸೆದೆ ನೋವಿನ ಶಾಯರಿ ಆ ಸಮ್ಮಿಲನ ಸಲುಗೆಗಳ ನೆನೆನೆನೆದು ಮಧಿರೆಯ ಬೆನ್ನತ್ತಿರುವೆತೋಂ ತನನನ ರಾಗ ತಾಳಕೆ ಹೊದಿಸಿದೆ ನೋವಿನ ಶಾಯರಿ ಅನು ಹುಚ್ಚೆದ್ದಾಸೆಗಳ ತಣಿಸಲಾರದೆ ನಂಜು ಗುಟುಕಿಸಿದಳುಸವಿ ಸಲ್ಲಾಪದ ಅಂದದ ಚಿತ್ರಕೆ ಅಂಟಿಸಿದೆ ನೋವಿನ ಶಾಯರಿ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಗಜಲ್ Read Post »

ಕಾವ್ಯಯಾನ

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ”

ಕಾವ್ಯ ಸಂಗಾತಿ ಕೆ.ಬಿ.ವೀರಲಿಂಗನ ಗೌಡ್ರ “ಗುಂಪಿಗರ್ಥವಾಗಲಿಲ್ಲ” ಆಒಬ್ಬಂಟಿಯನ್ನುತಂಗಾಳಿ ತಬ್ಬಿಕೊಂಡಾಗನೆರಳು ನಾಚಿ ನೀರಾಯಿತು ಆಒಬ್ಬಂಟಿಯನ್ನುಪುಸ್ತಕ ನೆತ್ತಿನೇವರಿಸಿದಾಗಬೆಳಕು ಕತ್ತಲೆಗೆ ಮುತ್ತಿಕ್ಕಿತು ಆಒಬ್ಬಂಟಿಯನ್ನುಕ್ಯಾಂಟೀನ್ ಉಣಿಸಿದಾಗಇಂದಿರಮ್ಮನಾತ್ಮ ತಣಿಯಿತು ಆಒಬ್ಬಂಟಿಯನ್ನುಆಲಯ ನೋಡಿ ನಕ್ಕಾಗಬಯಲು ಎದೆಗಾಣಿಸಿಕೊಂಡಿತು ಆಒಬ್ಬಂಟಿಗುಂಪಿಗರ್ಥವಾಗಲಿಲ್ಲಗಾಳಿ ಬೆಳಕು ನೆರಳಿಗರ್ಥವಾದ. -ಕೆ.ಬಿ.ವೀರಲಿಂಗನಗೌಡ್ರ.

ಕೆ.ಬಿ.ವೀರಲಿಂಗನ ಗೌಡ್ರ ಅವರ ಕವಿತೆ “ಗುಂಪಿಗರ್ಥವಾಗಲಿಲ್ಲ” Read Post »

ಕಾವ್ಯಯಾನ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು”

ಕಾವ್ಯ ಸಂಗಾತಿ ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” ಚಿವುಟಿದಷ್ಟು ಚಿಗುರುವ ರೀತಿಯುನಿನ್ನದಾಗಲಿ ಮನವೆಕವಿಯುವ ಕತ್ತಲ ಹಾದಿಯಲಿದೀಪವಾಗು ಮನವೆ// ತಿವಿಯುವ ಮುಳ್ಳಿನ ಮೇಲೆ ಹೆಜ್ಜೆಯಹಾಕದಿರು ತನುವೆಅವಿತಿಹ ಧೈರ್ಯವ ಹೊರಗೆ ಎಳೆದುಬಾಳುತಿರು ಸುಮವೆ// ಛಲವದು ಇದ್ದರೆ ಚಿವುಟಿದ ಹಾಗೆಚಿಗುರುವೆ ನೀಗಿಡವೆಒಲವನು ಬದುಕಲಿ ಅನುಕ್ಷಣ ತೋರುತಸಾಗುತಿರು ಬಲವೆ// ಚುಚ್ಚುವ ಮಾತಿಗೆ ಇರಿಯುವ ನುಡಿಗೆಅಳುಕದಿರು ಎಂದೂಹಚ್ಚು ಎಲ್ಲರ ಮನದಲಿ ಸಮತೆಯ ಹಣತೆಯ ನೀ ಮುಂದೂ// ಗೋಳನು ಹೊಯ್ಸುತ ಖುಷಿಯ ಪಡುವರುಕುಹಕದ ಜನರಿಲ್ಲಿಗಾಳವ ಹಾಕುತ ಸಿಕ್ಕಿಸಿ ಹಾಕಲುಕಾಯುವ ಸ್ಥಿತಿಯಿಲ್ಲಿ// ಕಮರದೆ ಕುಂದದೆ ಬಾಡಿ ಹೋಗದೆಬೆಳೆಯೋ ಬದುಕಲ್ಲಿವಿಮಲ ಚರಿತಗೆ ಸಕಲವ ಒಪ್ಪಿಸಿಶರಣಾಗು ಬಾಳಲ್ಲಿ// ಶುಭಲಕ್ಷ್ಮಿ ಆರ್ ನಾಯಕ

ಶುಭಲಕ್ಷ್ಮಿ ಆರ್ ನಾಯಕ “ಚಿವುಟಿದಷ್ಟು ಚಿಗುರು” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ”

ಕಾವ್ಯಸಂಗಾತಿ ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” ಯುದ್ಧ ರಣರಂಗದಲ್ಲಿ …ಬೆಂಕಿಯುಂಡೆ ಹಾರಿತು ಅತ್ತಿತ್ತ,ಪುಣ್ಯ ರಮಝಾನ್ ಮಾಸದಲ್ಲೂಸೈತಾನನ ಬಿಚ್ಚಿ ಹೊರ ಬಿಟ್ಟರೇಕೆ?ರಕ್ತದಾಹಕೆ ಮಕ್ಕಳ ಬಲಿ ಕೊಟ್ಟರೇಕೆ? ರಕ್ತದಾಹಿ ದುಷ್ಟರವರುಜಗದೊಳು ಕಂಟಕ ದುರಾಂಕಾರಿಗಳುಮಾನವೀಯತೆಯ ನರರಹಿತರಾಕ್ಷಸಪುತ್ರ ಅಧಿಕಾರಶಾಹಿಗಳವರುಕೆಣಕಿ ನೋಡ ಬಾರದಿತ್ತು ಶತ್ರುಗಳನು,! ಕಂದಮ್ಮಗಳ ಸರಣಿ ಕೊಲೆಅದೊಂದು ಅಮಾನವೀಯ ಕೃತ್ಯಪಾಪಿಗಳು ಅನುಭವಿಸುತ್ತಿಹರುಪ್ರತಿಕಾರ ಪ್ರಾರಂಭ ಅವಕಾಶವೆಲ್ಲೊ?ರಕ್ತದಾಹಿಗೆ ರಕ್ತದಿಂದ ಪ್ರತ್ಯೂತ್ತರವಷ್ಟೇ,! ಯಾರ ಬೆವರಿನ ಬಂಗಲೆ,ಯಾರದ್ದೊ ಬಾಂಬಿಗೆ ಉರುಳಲುಕನಸು ಹಲವರ ನುಚ್ಚುನೂರಾಗಲುಯುದ್ದವೆಂಬ ಭಯಾನಕತೆ ಕಾವೇರಿದೆಸರ್ವನಾಶಕ್ಕೆ ಹೊಸ ಇತಿಹಾಸ ಬರೆಯಲಿದೆ,! ಸೋತು ಹೋದರೇನು?ಗೆದ್ದು ಪ್ರತಿಕಾರ ತೀರಿಸಿದರೇನು?,ಈ ಸಾವು ನೋವಿಗೆ ಬಲಿಗಳಾರೊ,ಬೆವರಿಳಿಸಿ ಕಟ್ಟಿಸಿದ ಬೆಚ್ಚನೆ ಆ ಮನೆಗಳು,ಯುದ್ಧದ ಕಾರ್ಮೊಡಕೆ ಸಿಲುಕಿ ಮಣ್ಣಾಗಲು.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು “ಮೂರ್ಖರ ಯುದ್ದ” Read Post »

You cannot copy content of this page

Scroll to Top