ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿದ್ದೆ ಸುಲಭದಿ ಒಲಿದರೆ ವರ
ಕಳೆವುದು ಬಾಳಿನ ದಿನದ ಭಾರ
ಕನಸ ಕಂಗಳಿಗೆ ಈತ ಸರದಾರ
ಮಂಜಿನಷ್ಟು ಈಗ ಮನ ಹಗುರ.

ಕುಳಿತಲ್ಲೇ ತೂಕಡಿಕೆಯ ತಡವರಿಕೆ
ಬೇಸರ ತೀರದ ಬವಣೆಯ ಹರಕೆ
ತಂಗಾಳಿಯ ಸವಿಯ ಬೀಸಣಿಕೆ
ಇರದು ಸಂಕೋಲೆಗಳ ಎಣಿಕೆ.

ಜಗವ ಮರೆತು ಶೂನ್ಯವಾಗಿ
ಕಂಡ ಕಲ್ಪನೆಯ ಮಗುವಾಗಿ
ಹಿತವಾಗಿ ಉಸಿರನೇರಿ ಸಾಗಿ
ರೋಗಿಯೂ ಆಗುವನು ಭೋಗಿ.

ಕಾಯಕ್ಕಿರಲಿ ವಿರಾಮದ ಜಾಗ
ನಿರಂತರತೆ ತರುವುದು ರೋಗ
ಅಲ್ಪಕಾಲದ ಈ ವೈಭೋಗ
ಸಿಗದಿದ್ದರೆ ಇರದು ಸುಯೋಗ.


About The Author

Leave a Reply

You cannot copy content of this page

Scroll to Top