ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚರ್ಚಿನ ಮುಂದೆ ಮರ
ಗೊಂಚಲ ಹೂ ಪಾದರಿ
ಗಂಧಕ್ಕೆ ಮರುಳಾಗಿ
ಅಲ್ಲೇ ನಿಂತರು ಪಾದ್ರಿ

ರೈಲಿನ ಹಳಿಗಳು
ಎಂದೂ ಸೇರಲಾರವು
ಮುರಿದ ಮನಗಳು
ಮತ್ತೆ ಕೂಡಲಾರವು

ಗಿಣಿಯಂತೆಯೂ ಇದೆ
ಗೂಬೆಯಂತೆಯೂ ಇದೆ
ಹಕ್ಕಿ ಹಾರಲಾಗದು
‘ ಕಾಕಾಪೋ ‘ ಹೆಸರದು

ವಿಭಿನ್ನ ಹಕ್ಕಿಯಿದು
ಗುಂಡು ಗುಂಡಗಿಹುದು
‘ ಗೂಬೆಗಿಣಿ ‘ ಹೆಸರು
ಆಯುಷ್ಯ ವರ್ಷ ನೂರು

ನಿಂದನೆಯ ಭಯಕೆ
ಕೈ ಚೆಲ್ಲಿ ಕೂರದಿರು
ಸಾಧನೆಯತ್ತ ನಿಲ್ಲು
ಅಡಗುವುದು ಸೊಲ್ಲು

ಮರಣಿಸಿದ ವ್ಯಕ್ತಿ
ಮಹಾ ಹೃದಯವಂತ
ಅಂಗಾಂಗ ದಾನದಲಿ
ಆತನಿನ್ನೂ ಜೀವಂತ

ಇಣಚಿ ಬೀಜವನು
ಮಣ್ಣಲಿ ಬಚ್ಚಿಟ್ಟಿತು
ಮಳೆ ಸುರಿದು ಅಲ್ಲಿ
ಸಸಿಯೊಂದು ಹುಟ್ಟಿತು

ಜಾಗತಿಕ ಸಮರ
ಪರಿಣಾಮ ದುರ್ಭರ
ಚಿನ್ನ ಬೆಳ್ಳಿ ಎರಡೂ
ಜೇಬಿಗೆ ಬಲು ಭಾರ

ಕೊಳ್ಳಲೆಂದು ಹೋದಾಗ
ನನ್ನವರು ಹೇಳಿದ್ದು
“ಹೇಮ ಎಂದರೆ ಚಿನ್ನ
ಬೇಡ ದುಬಾರಿ ಸ್ವರ್ಣ”

ಅರವತ್ತರ ವಯ
ಅರಳು ಮರುಳಿದೆ
ಲೆಕ್ಕಿಸದೇ ಮರಳಿ
ನೀ ಅರಳಬೇಕಿದೆ


About The Author

Leave a Reply

You cannot copy content of this page

Scroll to Top