ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ”

ಕಾವ್ಯ ಸಂಗಾತಿ ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಒಲುಮೆಯ ಕಾಣಿಕೆಯಂತೆಬಂದೆ ಅಪ್ಪ ನೀ ನನ್ನ ಬಾಳಿಗೆ!ನಿನ್ನ ಮಡಿಲಲಿ ನಾ ನೆಲೆಯಾಗಿ ನಿಂತೆ..ತುಂಬಿ ನನ್ನ ಸಂತಸದ ಜೋಳಿಗೆ!! ನಿನ್ನ ನೆನೆಯದೇ ಇನಿತೂಕಳೆಯದು ಈ ಬದುಕು!ನಿನ್ನ ಸವಿನೆನಪಿನ ಕ್ಷಣಗಳೆ..ಈ ಮಗಳಿಗೆ ಹಸಿರ ಬೆಳಕು!! ಮನದಂತರಾಳದ ಬೆಚ್ಚನೆಯ ಕಾವಲಲಿನಿನ್ನದೇ ಒಲವದು ಅಡಗಿದೆ!ಸಂತಸದಿ ಮಿಡಿದ ಕಂಬನಿಯಲೂ..ಅಳಿಯದ ನಿನ್ನ ಭಾವವಿದೆ!! ಪಡೆದ ಸಂತಸದ ಎಣಿಕೆಯಿರದುನಿನ್ನ ಪ್ರೀತಿಯ ಸಿಂಚನದಲಿ!ಹನಿಯೊಂದು ತಾ ಜಿಗಿಯಲುತವಕಿಸಿದಂತೆಮೋಡದಂಚಿನಲಿ!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” Read Post »

ನಿಮ್ಮೊಂದಿಗೆ

ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ”

ಕಾವ್ಯ ಸಂಗಾತಿ ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ” ನೀ ಹೇಳಿ ಹೋಗ ಬೇಕಿತ್ತು ಕಾರಣವುನನ್ನ ಬಿಟ್ಟು ದೂರ ಹೋಗುವ ಮೊದಲು!ನನ್ನನ್ನು ಒಂಟಿಯಂತೆ ಬೇರೆ ಮಾಡಿ ನೋಡಲುಸಂಶಯವು ನಿನ್ನಲ್ಲಿ ಹುಟ್ಟಿದೆ ನನ್ನ ಮರಣವು!! ನಿನ್ನ ಕಣ್ಣೆದುರೆ ಬಿರಿಯೆ ಕರುಳ ಕುಡಿ ಸತ್ಯವುಕಣ್ಣನೀರು ಸುರಿಸಿದೆ ಏಕೆ ನೀನು ಮೌನವು!ನಿನ್ನ ಜೊತೆ ಕೂಡಿ ಬಾಳುವ ಆಸೆ ನಾ ಕಂಡೆನುನೂರಾರು ಕನಸನು ಗಾಳಿಗೆ ತೂರಿ ಹೋದನು!! ಕರುಳ ಸಂಬಂಧ ಅನುಬಂಧ ಕಡಿದು ಎಸೆದೆಪ್ರೀತಿ ಕುರುಡು ನಂಬಿಕೆ ಮೋಸವನು ವೆಸಗಿದೆ!ಸುಡುವ ಬೆಂಕಿಯಂತೆ ಮಾತಲ್ಲೇ ನನ್ನ ಕೊಂದೆಕೊಟ್ಟ ಆಣೆ ಪ್ರಮಾಣ ಮರೆತು ದೂರ ಹೋದೆ!! ನನ್ನ ನೆರಳಲ್ಲಿ ನಿನ್ನ ನೆರಳು ಜೊತೆ ಕಂಡೆನುಕತ್ತಲು ಕವಿದ ಇರುಳಲ್ಲಿ ನಿನ್ನ ನೆನಪು ಸವಿದೇನು!ಬೆಳಕು ಚೆಲ್ಲುವ ಸಮಯದಲ್ಲಿ ಕೊರಳು ಕಡಿದನುಸೆರೆ ಸಿಕ್ಕ ಮೀನಿನಂತೆ ನನ್ನ ದೂರ ತಳ್ಳಿದನು!! ನನ್ನ ಜೀವನವೇಕೆ ಅಲೆಮಾರಿ ಬದುಕಾಯಿತುಕನಸಿನ ಗೋಪುರವು ನುಚ್ಚು ನುರಾಯಿತುಎಲ್ಲಿಗೆ ಸಾಗಿದೆ ಕರುಣೆ ಇಲ್ಲದ ಈ ಜಗವುನನ್ನ ನೆರಳ ದಾರಿ ದೀಪ ಮುಳುಗುತ್ತಿರುವುದು!! ಕೆ. ಎಂ. ಕಾವ್ಯ ಪ್ರಸಾದ್

ಕೆ. ಎಂ. ಕಾವ್ಯ ಪ್ರಸಾದ್ “ಹೇಳಿ ಹೋಗ ಬೇಕಿತ್ತು ಕಾರಣ” Read Post »

ನಿಮ್ಮೊಂದಿಗೆ

“ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!”ವನಜಾ ಮಹಾಲಿoಗಯ್ಯ

ಗಾದೆ ಸಂಗಾತಿ ವನಜಾ ಮಹಾಲಿoಗಯ್ಯ “ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!” “ಪುಕ್ಕಟೆ ಸಿಕ್ಕರೆ ಮೈಯೆಲ್ಲಾ ಬಾಯಿ” ಎಂಬಗಾದೆಯನ್ನು ಕೇಳಿದ್ದೀರಿ. ಕಷ್ಟಪಡದೆ ಏನು ಸಿಕ್ಕರೂ ನಮಗೆ ಬೇಕು. ಕೆಲಸಕ್ಕೆ ಹೋಗದೆ ಸಂಬಳ ಬರುತ್ತದೆ ಅಂತಾದರೆ ನಮ್ಮಷ್ಟು ಸುಖಿಗಳು ಈ ಜಗತ್ತಿನಲ್ಲಿ ಯಾರು ಇಲ್ಲ ಅಂದುಕೊಳ್ಳುತ್ತೇವೆ. ಆದರೆ, ಕೂತು ಉಣ್ಣುವವರನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ.ಅವರಿಗೆ ನಿಜಕ್ಕೂ ಅದರ ಸುಖವೇ ಅರಿವಿಗೆ ಬರುತ್ತಿರುವುದಿಲ್ಲ.ಏಕೆಂದರೆ ಆ ಊಟ ಗಳಿಸಲು ಅವರು ಕಷ್ಟಪಟ್ಟಿಲ್ಲ.ಸುಖವನ್ನು ಮನಸಾರೆ ಅನುಭವಿಸಬೇಕು ಅಂದರೆ ನಮಗೆ ಕಷ್ಟದ ಅನುಭವವೂ ಇರಬೇಕು. ಇಲ್ಲವಾದರಸುಖ ಅರ್ಥವಾಗುವುದಿಲ್ಲ. ಆಗಭ೯ ಶ್ರೀಮಂತನಿಗೆಮೃಷ್ಟಾನ್ನ ಭೋಜನ ಮಾಡಿಸುವುದರಿಂದ ಯಾವ ವಿಶೇಷ ಆಸಕ್ತಿಯೂ ಇಲ್ಲದೆ ಅದನ್ನು ಊಟ ಮಾಡುತ್ತಾನೆ. ಬಡವನಿಗೆ ಬಡಿಸಿದರೆ ಹತ್ತು ದಿನವಾದರೂ ನೆನಪಿಟ್ಟುಕೊಂಡು ಸುಖಿಸು ತ್ತಾನೆ.ಅದೃಷ್ಟ ದಿಂದ ಬರುವುದಕ್ಕೆ ಮಹತ್ವವಿಲ್ಲ.ಲಾಟರಿಯಿಂದ ಬಂದ ದುಡ್ಡು ಬಹಳ ದಿನ ಉಳಿಯುವುದಿಲ್ಲ. ಆದರೆ ಕಷ್ಟಪಟ್ಟು ಗಳಿಸುವುದಕ್ಕೆ ನಿಜಕ್ಕೂ ತುಂಬಾ ಮಹತ್ವವಿದೆ. ಜೀವನವಿಡೀ ಹಣ ಉಳಿಸಿ ಮನೆ ಕಟ್ಟಿದವನು ಅದನ್ನು ಅರಮನೆಯoತೆಅನುಭವಿಸುತ್ತಾನೆ ಮತ್ತು ಕಾಪಾಡಿಕೊಳ್ಳುತ್ತಾನೆ. ಯಾವ ಪ್ರಯತ್ನವನ್ನು ಮಾಡದೆ ಹಣ ಸಿಕ್ಕರೆ ಅದನ್ನು ಅನುಭವಿಸುವುದರಲ್ಲಿ ಏನು ಸುಖವಿದೆ ?ಎಮ್ಮೆ ಮುದಿಯಾಗಿದೆ. ಜೀರ್ಣ ಶಕ್ತಿ ಕುಂದಿದೆ, ಕಾಲಿನಲ್ಲಿ ಕಸುವಿಲ್ಲ, ಮೇವು ಹುಡುಕಲು ಚೈತನ್ಯವಿಲ್ಲ. ಕೊನೆದಿನಗಳನ್ನು ಎಣಿಸುತ್ತಾ ಕೊಟ್ಟಿಗೆಯಲ್ಲಿ ಬಿದ್ದುಕೊಂದಿದೆ. ಆಗ ಯಾರಾದರೂ ಎರಡು ಹಿಡಿ ಹುಲ್ಲು ಹಾಕಿದರೆ ಅದನ್ನು ಜೀರ್ಣಿ ಸಿಕೊಳ್ಳಲು ಶಕ್ತಿ ಇಲ್ಲದಿದ್ದರೂ ತಿನ್ನುತ್ತದೆ. ಏಕೆಂದರೆ ಅದು ಪ್ರಯತ್ನ ಪಡದೆ ಸಿಕ್ಕಿದ್ದು. ಬೇಕೋ ಬೇಡವೋ ಅದನ್ನು ತಿನ್ನಬೇಕು ಎಂದು ಅದರ ಮನಸ್ಸು ಹೇಳುತ್ತದೆ. ಆದರೆ ತಿಂದ ಮೇಲೆ ಜೀರ್ಣಸಿಕೊಳ್ಳಲಾಗದೆ ಒದ್ದಾಡುತ್ತದೆ.ಕೆಲವು ರಾಜಕಾರಣಿಗಳು, ಕೆಲವು ಅಧಿಕಾರಿಗಳು, ಕಳ್ಳರು ಹೀಗೆ, ತಿಂದಿದ್ದನ್ನು ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಎಷ್ಟೋ ನಿದರ್ಶನ ಗಳು ನಮ್ಮ ಕಣ್ಣಮುಂದಿವೆ. ಪುಕ್ಕಟೆ ಸಿಕ್ಕುತ್ತೆ ಅಂತ ಹೊಟ್ಟೆಬಿರಿಯೆ ತಿಂದವರು ಅವರುಗಳು. ಕಷ್ಟಪಟ್ಟು ಗಳಿಸಿದ್ದವರಿಗೆ ಜೀರ್ಣಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಜೊತೆಗೆ ಗಳಿಸಿದ್ದನ್ನು ಮನಸಾರೆ ಉಣ್ಣುವ ಸುಖವೂ ಸಿಗುತ್ತಿತ್ತು.ಕೊನೆಯಲ್ಲಿ ನಾನು ಹೇಳುವುದೊಂದೆ ಅದೃಷ್ಟ ಅನ್ನುವುದು ಒಂದು ಭ್ರಮೆ. ಭ್ರಮೆ ಎನ್ನುವುದೊಂದುಮಾಯೆ. ಅದರ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳುವ ಮುನ್ನ ಹುಷಾರು.ವನಜಾ ಮಹಾಲಿoಗಯ್ಯ

“ಅದೃಷ್ಟವಶಾತ್ ಹುಲ್ಲು ಸಿಕ್ಕರೆ ಮುದಿ  ಎಮ್ಮೆಯೂ ಮೇಯುತ್ತೆ!”ವನಜಾ ಮಹಾಲಿoಗಯ್ಯ Read Post »

ಕಾವ್ಯಯಾನ

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…”

ಕಾವ್ಯ ಸಂಗಾತಿ ಅಕ್ಷತಾ ಜಗದೀಶ “ಮೌನ ಮಾತಾದಾಗ…” ಅಟ್ಟದ ಮೇಲೆ ಕೂಡಿಟ್ಟಕನಸುಗಳು ಅದೆಷ್ಟೋ,ನನಸಾಗದೆ ನೆನಪುಗಳಾಗಿಕಿಡಕಿಯ ಕಂಬದಬಣ್ಣಗಳಾಗಿ ಉಳಿದಮಾತುಗಳು ಅದೆಷ್ಟೋ….. ಇಂದೇಕೋ ಮನೆ ಮಾತಾಡಿದೆ,ಮನಗಳು ಮೌನವಾದಾಗ…ಗಾಜಿನ ಹಂಚಿನಿಂದಬೆಳಕೊಂದು ಇಣುಕಿ ನೋಡಿದೆ,ಮನೆಯೊಳಗೆ ಮಂದಿಎಷ್ಟೂ ಇಹರೆಂದು…. ಅದೆಷ್ಟೋ ನಗುವಿನ ಸದ್ದುಕೇಳಿರುವ ಕಂಬಗಳುಮತ್ತೆ ಮತ್ತೆ ಎದುರು ನೋಡುತಲಿದೆ,ಅಳುವಿನಲ್ಲೊಂದು ನಗುವುಸಿಗಬಹುದೆಂದು… ಅಜ್ಜನ ಕವಳದ ಚಂಚಿಯೊಂದುಮತ್ತೆ ಹಂಬಲಿಸುತಲಿದೆಜಗುಲಿಯ ಹಾಳು ಹರಟೆಯ ಸದ್ದು…ಅಂಗಳದ ರಂಗವಲ್ಲಿಮತ್ತೆ ಎದುರು ನೋಡುತ್ತಿದೆ,ಪಟ್ಟಣ ನುಂಗಿದ ಕನಸುಗಳುನನಸಾಗಿ ಮತ್ತೆ ಚಿತ್ತಾರ ಮೂಡಿಸುವುದೆಂದು……………….. ಅಕ್ಷತಾ ಜಗದೀಶ.

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…” Read Post »

You cannot copy content of this page

Scroll to Top