ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ತಾತಪ್ಪ.ಕೆ.ಉತ್ತಂಗಿ ಕವಿತೆ “ಬಟ್ಟಕಂಗಳ ನಿರೋಷೆ”

ಕಾವ್ಯ ಸಂಗಾತಿ ತಾತಪ್ಪ.ಕೆ.ಉತ್ತಂಗಿ “ಬಟ್ಟಕಂಗಳ ನಿರೋಷೆ” ಅವಳು ಅವನಿಯೊಳಗಿನಅಪರೂಪದ ಅನುರೂಪೆ,ನುಡಿಗಂಪಿನ ಇಳೆತಂಪಿನಎಳೆಗಣ್ಣಿನ ಕೆಂಬಣ್ಣದ ಆಲಾಪೆ. ತನ್ನೋಟದಲಿ ನುಂಗುವಳುಅನಂತಲೋಕದ ಇಳೆಯನು,ವಾವ್ ವಾರೇ ನೋಟದ ಹುಡುಗಿನಾಚುವಳು ಕಣ್ಣಂಚಿನಲ್ಲಿ,ಲಾಸ್ಯಬಿಂಬದ ಬೆಡಗಿಕಣ್ಣು ಚುಮುಕಿಸುವ ಹುಡುಗಿಬಳಕುವಳು ತುಟಿಯಂಚಿನಲಿ. ಅವಳ ಕಣ್ಣಂಗಳದ  ಕಾಂತಿಯಹೊಳಪು,ಸಾವಿರದ ಸಹಸ್ರ ನೆನಪುಗಳ ಬುತ್ತಿ .ಗಾಢ ಪ್ರೇಮದ,ಕಡುದುಃಖಯಾನದ ಅನುರುಕ್ತಿ,ಸುಮಧುರ ಸಮ್ಮೋಹನದಸಾತ್ವಿಕ ಸರಸದ ಕಾಂತಿಯುಕ್ತಿ. ಕಣ್ಣೋಟದ ಬೆಸುಗೆಯಲಿನಂಬಿಗೆ ಧೈರ್ಯದ ವಿಶ್ವಾಸ,ಅವಳೆದುರಿನ  ಕಪಟತನದ  ಮನಕ್ಕೆನಿಂತು ಕುಂತು ಆಯಾಸದಿ ಭೋರ್ಗರೆಯುವಉಸಿರೋಟದ ಶ್ವಾಸ.ದ್ವಂದ್ವ ವಿಚಲಿತ ವಿರಹದವಿರಸದ  ನಯನನೋಟದಿಂದಮುಷ್ಕರದ ಅವಿಶ್ವಾಸ . ಚಂದ್ರಮುಖಿ ನೀಲಸಖಿಯಕಂಗಳಲಿ, ಒಮ್ಮೊಮ್ಮೆಸದ್ದಿಲ್ಲದೆ ಸುಡುವ ಅಗ್ನಿಜ್ವಾಲೆ,ಮತ್ತೊಮ್ಮೆ ಮಗದೊಮ್ಮೆಸಾಮರಸ್ಯದ ಸಂಪ್ರೀತಿಯಶಾಂತತನ್ಮಯದ ಪ್ರೇಮಲೀಲೆ. ಕಣ್ಣಲ್ಲೇ, ಕ್ರಾಂತಿಯಿಂದ  ಕಣ್ ಬಾಣದಿಂದ ಕೊಲ್ಲುವವಳುಕಂಗಳಲ್ಲೇ ಕಳಿತು ಮಿಳಿತು  ಕಾಡದೇ ಕುಂತವಳುನಯನಗಳಲ್ಲೇ ನಾಚಿನೀರಾಗಿ ನಿಂತವಳುಅಕ್ಷಿಗಳಲ್ಲೇ ಸಾಕ್ಷಿಯಾಗಿಸೋಲು ಗೆಲುವಿನದರ್ಶನಿಯಾದವಳುನೇತ್ರದಲ್ಲೇ ತಣಿದು ಮಣಿದು ಮಧುರಯಾತ್ರೆ ಹೊಂಟವಳು. ಬಟ್ಟಕಂಗಳ ಚೆಲುವೆಯಪ್ರೇಮಕಂಗಳ ಭಾಷೆ,ಹುಬ್ಬಕೆಳಗಿನ ಕಪ್ಪಂಗಳದಪಸರಿಕೆಯ ಪಕ್ವ ಪರಿಭಾಷೆ.ಭಾವಗಳು ಎದೆಯುಕ್ಕಿದಾಗ ಮಾತಿಲ್ಲದ ,ಸದ್ದಿಲ್ಲದ,ಮೌನದ  ಕಣ್ಸನ್ನೆಯ ಪರೀಷೆ.ಕತ್ತಲಲ್ಲಿಯೂ ಮಿನುಗಿಹೃದಯದಲಿ ಗುನುಗುವಹೊಳೆವ ಅಕ್ಷಿಗಳ ನಿರೋಷೆ. ತಾತಪ್ಪ.ಕೆ.ಉತ್ತಂಗಿ

ತಾತಪ್ಪ.ಕೆ.ಉತ್ತಂಗಿ ಕವಿತೆ “ಬಟ್ಟಕಂಗಳ ನಿರೋಷೆ” Read Post »

ಕಾವ್ಯಯಾನ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?”

ಕಾವ್ಯ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ” ಹೊಸತೇನಿದೆ?” ಹೊಸತೇನಿದೆಏನಿದೆ ಹೊಸತು ಈಮುಂಜಾವಿನಲ್ಲಿಅದೇ ಹಳೆಯಬಗೆಹರಿಯದ ನೂರುಕಂಟಕ ಆತಂಕಗಳುರಾತ್ರಿ ಕಚ್ಚಿದ ಕಹಿ ಸುದ್ದಿನಿನ್ನೆಯನೇ ಮತ್ತೆ ಮತ್ತೆಬಿಚ್ಚಿಡುವ ಆ ನಾಳೆಯಲ್ಲಿ…?ಹೊಸತೇನಿದೆ ಹೊಸತೇನಿದೆಮುಂದುವರೆದ ಈ ನಿನ್ನೆಯಲ್ಲಿ?ಯುದ್ಧ ಸಾವು ನೋವುಬಡತನ ಹಸಿವಿಗೆತತ್ತರಿಸಿದವರ ನಡುವೆಕುಡಿದು ತೂರಾಡುವವರ ಸಂಭ್ರಮ ಹೊಸತೇನಿದೆ ?ಬುದ್ಧ ಬಸವರ ಬೇಸಾಯವೇಮರೆತು ನಿತ್ಯ ಕೊಲೆ ಸುಲಿಗೆಯಲಿಸತ್ಯ ಹುಡುಕುವ ನಾಟಕಮತದಾನ ಮಾಡಲು ಜನರುಹೊರಗೆ ಟಿವಿ ಪತ್ರಿಕೆನೆಲದ ಭವಿಷ್ಯ ಬರೆಯುತ್ತಿವೆ ಹೊಸತೇನಿದೆ?ಶಾಂತಿ ಸಮತೆ ಸಮಾಧಿಯಾಗಿದಮನಗಳು ಹಿಂಸೆಯೇ ಧರ್ಮವಾಗಿರುವಾಗಕರುಳ ಪ್ರೀತಿಯ ಕೊಯ್ದುಎಳೆ ಹಸುಗಳ ಮಾರಣ ಹೋಮಇನ್ನೂ ನಿಂತಿಲ್ಲ ಹೊಸತೇನಿದೆ ?ಅದೇ ಜಾತಿ ಮತ ಧರ್ಮಗಳದ್ವೇಷ ಬೀಜ ಬಿತ್ತನೆನಿರುದ್ಯೋಗಿಗಳು ರೀಲ್ಮಾಡುತ್ತಿದ್ದಾರೆಭಜಿ ಮಾರುತ್ತಿದ್ದಾರೆ ಸೂರ್ಯನ ದಿನಚರಿಯೇಇರುಳ ಉಸ್ತುವಾರಿಯಲ್ಲಿರುವಾಗ..ಮುಂಜಾನೆಯ ಮುಂಗೋಳಿಗಳುಹೊರಡಿಸುತ್ತವೆ ಫರ್ಮಾನುಅವರ ಹೇಳಿಕೆಯಂತೆ ಬದುಕ ಬೇಕು ಹೊಸತೇನಿದೆ?ಮುಂದುವರೆದ ಆ ನಿನ್ನೆಯಲ್ಲಿ…?ವಿಶ್ವ ನಾಯಕನಾಗುವ ಬಯಕೆಸತ್ತ ಹೆಣಗಳ ಗೋರಿಯ ಮೇಲೆಸಾಮ್ರಾಟನ ಸಮೃದ್ಧಿ ಅಟ್ಟಹಾಸ ಹೊಸತೇನಿದೆ?ಕರಾಳ ಮುಖ ಸವರಿಕದ್ದು ಮುಚ್ಚಿಡುವಕನ್ನಡಿಗಳು ಇರುವತನಕನಂಜಿನ ಕೀವು ನೆತ್ತಿಗೇರಿಕಣ್ಣು ಮಂಜಾಗಿರುವ ತನಕ..ವಿಶ್ವಾಸ ಮೂಡಿಸದಸಾಹಿತ್ಯವಿರುವ ತನಕಸುತ್ತುತ್ತಲೇ ಇರುವಗಂಡು ಜೋಗುತಿಯರ ಮೆರವಣಿಗೆಚಕ್ರವ್ಯೂಹ ಬೇಧಿಸದ ತನಕ..ಏನಿದೆ ಹೊಸತು? ಹೊಸತೇನಿದೆ?ನಾಳೆಯಾಗದ ಈ ನಿನ್ನೆಯಲ್ಲಿ ?ಮಂದಿರ ಮಸೀದಿ ಚರ್ಚಬಸದಿ ವಿಹಾರಗಳು ಬೆಪ್ಪನೆ ಮಲಗಿವೆಕಾವಿ ಬುರ್ಖಾಗಳ ಕಾದಾಟಹಲಾಲ್ ಬಾಡೂಟಹತ್ತಿ ಉರಿಯುತ್ತಿದೆ ದೇಶ ಹೊಸತೇನಿದೆ ?ಮತ್ತೆ ಹೊರಗೆ ಸಜ್ಜಾಗಿವೆಮೊಹಲ್ಲಾಗಳ ಮುಂದೆಭುಸುಗುಟ್ಟುತ್ತಿರುವಬುಲ್ದೊಜರ್ ಭೀತಿಯಮತ್ತೊಂದು ಕ್ರೂರ ದಿನದಲ್ಲಿ .. ಹೊಸತೇನಿದೆ?ಕೇರಿಯಲೆಂದೂ ಕಾಲಿಡದಗ್ರಹಣ ಸೂರ್ಯನ ನಡಿಗೆಯಲ್ಲಿ..ಭಾನುವಾರಗಳೇ ಇರದತಾಯಂದಿರರ ಕ್ಯಾಲೆಂಡಿರಿನಲ್ಲಿ … ಹೊಸತೇನಿದೆ?ಮುಂದುವರೆದನಿನ್ನೆಯ ಆ ಹಳೆಯ ಕಥೆಯಲ್ಲಿ ?ಮನೆ ಚಾವಡಿಯಲ್ಲಿ ಮಾತುಒಳಗೆ ಒಲೆಗೆ ತೂತುನಡುಮನೆಯಲ್ಲಿಮನು ಸಂತಾನಸೈತಾನನ ಹಿರಿತನದಲಿಮಂತ್ರ ಪೂಜೆ ಘೋಷಣೆ ಹೊಸತೇನಿದೆ ?ಈ ಬೆಳಗಲ್ಲಿ ಮತ್ತೆಅದೇ ಹಳೆಯ ಪುಸ್ತಕದಹೊಸ ಭರವಸೆ ಹಳಸಲುಕನಸು ಕುಣಿಯುತಿವೆಮತ್ತೊಂದು ಅಧ್ಯಾಯದಲಿ.ಮಂಕಾಗಿವೆ ವಚನ ಹೊಸತೇನಿದೆ ಇಂದು ಮತ್ತೆ?ಇರುಳ ಮರುಳಿಲ್ಲದ ಹೊಸಬೆಳಕು ಬೇಕೀಗ ನಮ್ಮ ನಡುವೆಕರಾಳ ಕತ್ತಲ ಜೊತೆಒಳಒಪ್ಪಂದವಲ್ಲದರ್ಪಿಗೆ ಬೆದರಿ ಮುದುರಿಕುಳಿತುಕೊಳ್ಳುವುದಲ್ಲ. ಹೊಸತೇನಿದೆ?ಹತ್ತಿಕ್ಕುವ ತುಳಿಯುವದಮನಗಳ ಯುಗಯುಗಾಂತವಾಗಬೇಕೀಗವೇಷ ಮರೆಸಿದ ವರ್ಷಾಂತವಲ್ಲರಾತ್ರಿ ಕಂಠ ಪೂರ್ತಿ ಕುಡಿದುತೂರಾಡುವದಲ್ಲ ಹೊಸ ಸೂರ್ಯನ ಸಂಕ್ರಮಣಕ್ಕೆಸಿದ್ಧಾವಾಗ ಬೇಕುಸಮತೆ ಮಮತೆಗಳ ಹಣತೆಹಚ್ಚ ಬೇಕುತ್ಯಾಗ ಬಲಿದಾನಗಳ ತೈಲ ಸುರಿದುಬೆಳಗ ಬೇಕು ಭಾರತ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಅವರ ಕವಿತೆ ” ಹೊಸತೇನಿದೆ?” Read Post »

ಕಾವ್ಯಯಾನ

ಪ್ರಶಾಂತ್‌ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!”

ಕಾವ್ಯ ಸಂಗಾತಿ ಪ್ರಶಾಂತ್‌ ಬೆಳತೂರು “ಪ್ರೇಮ ಪ್ರಕರಣದ ತಪ್ಪಿತಸ್ಥರು..!” ಪ್ರೇಮದಲ್ಲಿನಾನು ತಪ್ಪು ಮಾಡಿದ್ದು ನಿಜಆದರೆನೀನು ನನ್ನನ್ನು ತಿದ್ದಬಹುದಿತ್ತು..!ಹಾಗೂಆ ಎಲ್ಲಾ ಅಧಿಕಾರವೂನಿನ್ನ ಬಳಿಯೇ ಇದ್ದವು..! ನೀನೋ ತಿದ್ದುವ ಭರದಲ್ಲಿಸ್ವತಃ ತಪ್ಪು ಮಾಡಿಬಿಟ್ಟೆಈಗ ನೀನು ಕೂಡ ನನ್ನಷ್ಟೇತಪ್ಪಿತಸ್ಥಳು..! ಪ್ರೇಮದ ಕೋರ್ಟಿನಲ್ಲಿಆತ್ಮಸಾಕ್ಷಿಯನ್ನು ಮುಂದಿರಿಸಿಕೊಂಡುಖಾಲಿ ಮಾತುಗಳ ವಕೀಲಿಕೆಯನ್ನುನಿನ್ನ ವಿರುದ್ಧ ನಡೆಸಲಾರೆಆಗಾಗಿನನ್ನ ತಪ್ಪುಗಳನ್ನು ಒಪ್ಪಿಕೊಂಡುಪ್ರಾಯಶ್ಚಿತ್ತವೆಂಬಂತೆಪ್ರೇಮದ ಸೆರಮನೆಯೊಳಗೆನಗುತ್ತಲೇಜೀವಾವಧಿ ಶಿಕ್ಷೆಗೆ ಒಳಗಾಗಿದ್ದೇನೆ..! ನೀನೋಮತ್ತೊಬ್ಬರ ಜಾಮೀನಿನಡಿಯಲ್ಲಿಹಳೆಯ ಪ್ರೇಮ ಪ್ರಕರಣವೊಂದರಆರೋಪಗಳೆಲ್ಲಾವನ್ನುತಳ್ಳಿ ಹಾಕುತ್ತಾನಿರಪರಾಧಿಯ ಸೋಗಿನಲ್ಲಿಬಿಡುಗಡೆಗೊಂಡಶಹರವೊಂದರ ಹಳೆಯ ಖೈದಿಯಂತೆಎಲ್ಲೆಲ್ಲೋ ಓಡಾಡುತ್ತಿರುವೆ..! ವಾಸ್ತವವೇನೆಂದರೆಪ್ರೇಮದ ಅಸಲಿಯತ್ತಿನಲ್ಲಿದಾವೆ ಹೂಡಲುಮೇಲ್ಮನವಿಯನ್ನು ಸಲ್ಲಿಸಲುಯಾವ ಕೋರ್ಟುಗಳೂ ಇಲ್ಲಒಮ್ಮೆ ತಪ್ಪು ಮಾಡಿದರೆ ಮುಗಿಯಿತುಸಾಯಬೇಕು ಅಥವಾಸಾಯುವ ತನಕ ಅದೇ ನೆನಪುಗಳನ್ನುಎದೆಯಲ್ಲಿಟ್ಟುಕೊಂಡು ನರಳಬೇಕು..! ಏಕೆಂದರೆಈ ಹಾಳು ಪ್ರೇಮ ಗ್ರಂಥಗಳಲ್ಲಿಯಾವ ಪ್ರಕರಣಗಳಿಗೂಆತ್ಮಸಾಕ್ಷಿಗಳ ಹೊರತಾಗಿಯಾವ ಕಾಯ್ದೆಗಳಾಗಲೀಕಲಮ್ಮುಗಳನ್ನಾಗಲೀಯಾರೊಬ್ಬರೂ ಕೂಡ ಇಲ್ಲಿಯವರೆಗೆ ಬರೆಯಲಾಗಿಲ್ಲವೆಂಬುದೆಇಲ್ಲಿನ ಒಂದು ಸೋಜಿಗ..! ಪ್ರಶಾಂತ್ ಬೆಳತೂರು

ಪ್ರಶಾಂತ್‌ ಬೆಳತೂರು ಕವಿತೆ,”ಪ್ರೇಮ ಪ್ರಕರಣದ ತಪ್ಪಿತಸ್ಥರು..!” Read Post »

ಇತರೆ, ಲಹರಿ

“ಮರಗಳ ಜೀವಕೆ ಮರುಗುತಿದೆ ಜೀವ”ಜಯಶ್ರೀ. ಜೆ. ಅಬ್ಬಿಗೇರಿ.

ಲಹರಿ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ. “ಮರಗಳ ಜೀವಕೆ ಮರುಗುತಿದೆ ಜೀವ”       ಹಸಿರು ಸೀರೆ ಹೊದ್ದು ನಿಂತ ದಟ್ಟಡವಿಯನ್ನು ಕಂಡಾಗ ಪಿಳಿಪಿಳಿ ಕಣ್ನು ಬಿಡುತ್ತ ವಿಸ್ಮಯ ಕಂಡಂತೆ ನೋಡುತ್ತ ನಿಂತು ಬಿಡುತ್ತೇನೆ ಹಾಗಂತ ಮಲೆನಾಡಿನಲ್ಲಿ ಹುಟ್ಟಿ ಬೆಳೆದವಳಲ್ಲ ನಾನು. ಪಕ್ಕಾ ಬಯಲು ಸೀಮೆ ನನ್ನದು. ಕಣ್ಣು ಹಾಯಿಸಿದುದ್ದಕ್ಕೂ ಬಯಲೇ ಬಯಲು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಗಿಡ ಗಂಟೆ ಪೊದೆಗಳ ಸಮೂಹ ಕ್ವಚ್ಛಿತ್ತಾಗಿ ಕಾಣಸಿಗುತ್ತದೆ. ನನ್ನಪ್ಪನ ಮನೆಯ ಹಿತ್ತಲಲ್ಲಿ ಆಳವಾಗಿ ಬೇರು ಚಾಚಿ ಆಕಾಶದೆತ್ತರಕ್ಕೆ ಬೆಳೆದ ತೆಂಗಿನ ಮರವೊಂದಿತ್ತು. ಅದನ್ನು ಬಾಚಿ ತಬ್ಬಿಕೊಳ್ಳಲು ಹವಣಿಸುತ್ತಿದ್ದ ಅಚ್ಚ ಮಲ್ಲಿಗೆ ಹೂವಿನ ಕಂಟಿ, ಅವ್ವ ಪೂಜೆಗೆಂದೇ ಬೆಳೆಸಿದ ಬಟ್ಟಲು ಹೂಗಳು ಕೆಂಪು ದಾಸವಾಳ ಹೂಗಳಿಗೆ ಮನಸೋತು ಮೊಗ್ಗು ಹೇಗೆ ಹಿಗ್ಗಿ ಹಿಗ್ಗಿ ಹೂವಾಗುತ್ತೆ ಎಂಬುದನ್ನು ಕಾಣಲು ಕಾತರಿಸಿ ಗಿಡ ಏಳುವ ಮೊದಲೇ ಎದ್ದು ನಿದ್ದೆಗಣ್ಣಿನಲ್ಲಿ ಕಣ್ಣು ತಿಕ್ಕುತ್ತ ಅದೆಷ್ಟೋ ದಿನಗಳು ನಿಂತರೂ ತುಟಿ ಬಿರಿದ ಮೊಗ್ಗು ತನ್ನ ಗುಟ್ಟು ಬಿಟ್ಟು ಕೊಡಲೇ ಇಲ್ಲ. ನಮ್ಮ ವಂಶದ ಬಹಳಷ್ಟು ಕುಡಿಗಳು ಈ ತೆಂಗಿನ ಮರದ ಕೆಳಗೆ ಆಡಿ ಬೆಳೆದವರು ಹೀಗಾಗಿ ನಮಗೆಲ್ಲ ಇದು ಅಚ್ಚು ಮೆಚ್ಚು. ನಮ್ಮ ಸೋದರತ್ತೆ ಇದನ್ನು ಬಹು ವರ್ಷಗಳ ಹಿಂದೆ ನೆಟ್ಟಿದ್ದರಂತೆ ಎಂದು ನಮ್ಮ ಅಪ್ಪ ಮೇಲಿಂದ ಮೇಲೆ ಬಲು ಹೆಮ್ಮೆಯಿಂದ ಹೇಳುತ್ತಿರುತ್ತಾರೆ. ತೀರಾ ಇತ್ತೀಚಿನವರೆಗೂ ನಮಗೆಲ್ಲ ಕಾಯಿ ಎಳೆನೀರು ಕೊಟ್ಟು ಪ್ರೀತಿಸುತ್ತಿತ್ತು. ಮೊನ್ನೆ ಮಳೆಗಾಲದಲ್ಲಿ ನಮ್ಮ ತೆಂಗಿನ ಮರವನ್ನೇ ಗುರಿಯಾಗಿಸಿಕೊಂಡು ಸಿಡಿಲೊಂದು ಹೊಡೆದು ಅದರ ಕತ್ತು ಹಿಸುಕಿದಾಗ ಮನೆಯ ಮಂದಿಯ ಕಣ್ಣುಗಳೆಲ್ಲ ತೇವವಾದವು. ಮನೆಯ ಅತ್ಯಂತ ಪ್ರೀತಿಯ ಸದಸ್ಯನನ್ನು ಕಳೆದುಕೊಂಡವರಂತೆದುಃಖಿಸಿದೆವು.  ಆಗಷ್ಟೇ ಅಭಿವೃದ್ಧಿಯಾಗುತ್ತಿರುವ ಊರಿಗೆ ದೂರವಾಗಿರುವ ಏರಿಯಾದಲ್ಲೊಂದು ನಿವೇಶನವನ್ನು ಕೊಂಡು ಮನೆ ಕಟ್ಟಿಸಿ ಗೃಹ ಶಾಂತಿಗೆ ಸ್ನೇಹಿತ ಬಂಧು ಬಳಗದವರನ್ನು ಕರೆದಾಗ ಮನಿ ಬಾಳ ಚಂದ ಕಟ್ಟಿಸಿರಿ ಆದರ ಇದು ಊರಿಗೆ ಬಾಳ ದೂರಾಗೈತಿ ಇದ ಊರಾಗ ಆಗಿದ್ರ ಇನ್ನು ಚುಲೋ ಆಗತ್ತಿತ್ತು. ಅನ್ನೋದು ಎಲ್ಲರ ಸಾಮಾನ್ಯ ದೂರಾಗಿತ್ತು. ಮಾಲಿನ್ಯ, ಟ್ರಾಫಿಕ್‌ನಿಂದ ದೂರವಾಗಿ ಪ್ರಶಾಂತವಾಗಿರುವ ಸ್ಥಳವನ್ನು ಆರಿಸಿಕೊಂಡು ಸ್ವಂತ ಮನೆಯ ಭಾಗ್ಯ ಪಡೆದಿದ್ದೆ. ಸುತ್ತ ಇರುವ ಹಸಿರು ಗಿಡಗಳಿಂದ ಆಹ್ಲಾದಕರ ಪರಿಸರ ಪ್ರತಿ ದಿನ ಪ್ರತಿಕ್ಷಣ ನನ್ನ ಮನಸ್ಸನ್ನು ಉಲ್ಲಸಿತವಾಗಿರುವಂತೆ ಮಾಡಿತ್ತು. ಎದುರಿಗಿರುವ ಪರಿಚಯದ ಶಾಂತಕ್ಕನ ಮನೆಯ ಕಾಂಪೌoಡ್ ಗೋಡೆಗೆ ತಗುಲಿದಂತಿರುವ ಗುಲಾಬಿ ಬಣ್ಣದ ಕಾಗದ ಹೂಗಳು ಕಣ್ಮನ ತಣಿಸುತ್ತಿದ್ದವು. ಚಳಿಗಾಲದ ಮುಂಜಾವುಗಳಲ್ಲಿ ಬೀದಿಯೆಲ್ಲ ಮಂಜಿನ ತೆರೆ ಹೊದ್ದುಕೊಂಡಾಗ ಶಾಂತಕ್ಕನ ಮನೆಯ ಕಾಗದ ಹೂಗಳು ಅಸ್ಪಷ್ಟವಾಗಿ ಕಣ್ಣಿಗೆ ಬಿದ್ದು ಹೊಸ ಆನಂದವನ್ನು ತರುತ್ತಿದ್ದವು. ಬಲಗಡೆ ನನ್ನ ಪತಿದೇವರ ಸಹೋದ್ಯೋಗಿಯ ನಿವಾಸದ ಮುಂದೆ ವಿಧ ವಿಧ ಹೂಗಳು ತರಾವರಿ ಗುಲಾಬಿ ಹೂಗಳು ಸದಾ ನಗುತ್ತ ನಿಂತಿರುವ ರೀತಿಗೆ ಎಂಥವರು ಮನಸೋತು ತಮಗೂ ಬೇಕೆಂದು ಹೂವಿನ ಕಂಟಿಗಳನ್ನು ಬಲು ಆಸೆಯಿಂದ ಕೇಳಿ ಪಡೆಯುತ್ತಿದ್ದರು. ಮಲ್ಲಿಗೆ ಮಲ್ಲಮ್ಮನೆಂದೇ ಹೆಸರಾಗಿದ್ದ ಮಲ್ಲಮ್ಮನ ಮನೆ ಎಡಕ್ಕಿದೆ. ಗಗನದೆತ್ತರಕ್ಕೆ ಬೆಳೆದು ನಿಂತ ಬೇವಿನ ಮರದ ಪಕ್ಕಕ್ಕಿರುವ ಮಲ್ಲಿಗೆ ಗಿಡ.ಇಡೀ ಏರಿಯಾದಲ್ಲೆಲ್ಲ ತನ್ನ ಪರಿಮಳದ  ಘಮ ಹಿಡಿಸಿರುತ್ತೆ.  ರಜೆಯ ದಿನಗಳಲ್ಲಂತೂ ಹಬೆಯಾಡುವ ಕಾಫಿಯನ್ನು ಆಸ್ವಾದಿಸುತ್ತ ಮಲ್ಲಿಗೆ ಸುವಸನೆಯನ್ನು ಆಘ್ರಾಣಿಸುತ್ತ ದಿನಪತ್ರಿಕೆಯ ಮೇಲೆ ಕಣ್ಣಾಡಿಸುವದು ನನಗೆ ತುಂಬಾ ಇಷ್ಟ. ರಾತ್ರಿ ಮಗಳನ್ನು ಕಾಂಪೌoಡ್ ಕಟ್ಟೆಯ ಮೇಲೆ ಕೂರಿಸಿ ಬೆಳದಿಂಗಳ ಬೆಳಕಲ್ಲಿ ತುತ್ತು ತಿನ್ನಿಸಿ ಲಾಲಿ ಹಾಡಿದ್ದೂ ಈ ಪರಿಮಳಕ್ಕೋಸ್ಕರವೆ! ಮನೆ ಕಟ್ಟುವ ಮೊದಲೇ ಸೋದರತ್ತೆಯಂತೆ ತೆಂಗಿನ ಮರದ ಸಸಿ ನೆಟ್ಟು ಫಲಕ್ಕಾಗಿ ಕಾಯುತ್ತಿದ್ದೆ. ವಸಂತ ಕಾಲದಲ್ಲಿ ಮಲ್ಲಕ್ಕನ ಬೇವಿನ ಗಿಡದಲ್ಲಿ ಶುಭೋದಯಕ್ಕೂ ಮುನ್ನವೇ ಕೋಗಿಲೆಯ ಇಂಚರ ಕೇಳಿ ಮಗಳು ಕಣ್ಣುಜ್ಜುತ್ತ ಕೋಗಿಲೆಯ ಕಾಣಲು ಅವರ ಮನೆಯ ಕಾಂಪೌoಡಿಗೆ ಜಿಗಿಯುತ್ತಿದ್ದಳು.  ಹಲವು ಬಾರಿ ಗಿಳಿಗಳ ಹಿಂಡು ಬೇವಿನ ಮರದ ಮೇಲೆ ತಮ್ಮ ಬಿಡಾರ ಹೂಡಿದಾಗ ಓಣಿಯ ಮಕ್ಕಳ ಹಿಂಡು ಅಲ್ಲಿಂದ ಕಾಲು ಕೀಳುತ್ತಿರಲಿಲ್ಲ. ಗೀಜಗ ತನ್ನ ಗೂಡನ್ನು ಬೇವಿನ ಮರದಲ್ಲಿ ಕಟ್ಟಿ ನಮ್ಮಂಥ ದೊಡ್ಡವರ ಕಣ್ಣುಗಳನ್ನು ದೊಡ್ಡದಾಗಿ ತೆರೆಯುವಂತೆ ಮಾಡಿತ್ತು. ಎಷ್ಟೋ ತರಹದ ಹಕ್ಕಿಗಳಿಗೆ ಆಶ್ರಯ ನೀಡಿ ನಮ್ಮ ಕಿವಿಗಳನ್ನು ಪಕ್ಷಿಗಳ ಕಲರವದಿಂದ ತುಂಬಿಸಿತ್ತು. ಗಾಳಿ ಕಾಲದಲ್ಲಿ ಎಲೆಗಳೆಲ್ಲ ಉದುರಿ ಕಸ ಬುಟ್ಟಿ ಬುಟ್ಟಿಯಗಿ ಬರುತ್ತೆ ಕಸ ಉಡುಗಿ ಉಡುಗಿ ನನ್ನ ರಟ್ಟಿ ಸೋತಾವೆನ್ನುವದು ಮಲ್ಲಕ್ಕನ ಮೇಲ್ಮಾತಿನ ಬೇಜಾರು. ಹೊಸ ಚಿಗುರು ಬಂದು ಶೋಭಾಯಮಾನವಾಗಿ ಕಂಡಾಗ ಮುಗುಳ್ನಗುತ್ತ ಉಗಾದಿ ಹಬ್ಬಕ್ಕ ನಮ್ಮ ಬೇವಿನ ಮರದ ಎಲಿ ಹಾಕ್ಕೊಂಡು ಜಳಕ ಮಾಡ್ರಿ. ಬೇವು ಬೆಲ್ಲಕ್ಕ ಇದ  ಹೂವು ಬಳಸ್ರಿ ಅಂತ ಸುತ್ತ ಮುತ್ತಲಿನ ಮನೆಯವರಿಗೆಲ್ಲ ತಾನೇ ಖುಷಿಯಿಂದ ಹಂಚಿ ಬರುತ್ತಿದ್ದಳು.  ಮೊನ್ನೆ ನನ್ನ ಮಗಳು ಅವ್ವಾ ಅವ್ವಾ ಎಂದು ಅರಚುತ್ತಾ ನೋಡ ಬಾ ಇಲ್ಲೆ ಬೇವಿನ ಮರ ಕಡದು ಹಾಕಾಕತ್ತರ. ಹೇಳ ಬಾ ಅವರಿಗೆ ಕಡಿಬ್ಯಾಡ ಅಂತ ಅಡುಗೆ ಮನೆಯಲ್ಲಿದ್ದ ನನ್ನ ಕೈ ಹಿಡಿದು ದರ ದರ ಎಳೆಯುತ್ತ ಮಲ್ಲಕ್ಕನ ಕಾಂಪೌಡಿಗೆ ತಂದು ನಿಲ್ಲಿಸಿದ್ದಳು. ವಿಚಾರಿಸಿದಾಗ, ಬೇವಿನಗಿಡ ಈ ದಿಕ್ಕಿನ್ಯಾಗ ಇರಬಾರದಂತ. ಇದು ಇಲ್ಲಿದ್ದದ್ದಕ್ಕ ನಮಗ ಸಮಸ್ಯೆ ಹೆಚ್ಚಾಗತಾವು ಅಂತ ವಾಸ್ತು ತಜ್ಞರು ಹೇಳಿದ್ರು ಅದಕ್ಕ ನಿರ್ವಾ ಇಲ್ಲದ ಕಡಸಾಕ ಹತ್ತೆವ್ರಿ ಅಂದಳು.  ಮರಕ್ಕೆ ಕೊಡಲಿ ಪೆಟ್ಟು ಹಾಕಿದಾಗಲೊಮ್ಮೆ ನನಗೇ ಹಾಕಿದಷ್ಟು ನೋವಾಗುತಿತ್ತು. ನಮಗೆಲ್ಲ ಶುದ್ಧ ಉಸಿರು ನೀಡಿದ ಮರ ವಾಸ್ತು ಹೆಸರಿನಲ್ಲಿ ನಿಸ್ಸಹಾಯಕವಾಗಿ ತನ್ನ ಉಸಿರು ಕಳೆದುಕೊಳ್ಳುತ್ತಿರುವದನ್ನು ಕಂಡು ಓಣಿಯ ಮಕ್ಕಳು ದೊಡ್ಡವರೆಲ್ಲ ಮನದಲ್ಲೇ ವಾಸ್ತು ತಜ್ಞರನ್ನು ಶಪಿಸುತ್ತಿದ್ದರು. ಮನೆಗೆ ತೆರಳುವಾಗ ಮಗಳು, ಅವ್ವಾ ಇನ್ನ ಮ್ಯಾಲೆ ಕೋಗಿಲೆ ಗಿಳಿ ಬರೂದಿಲ್ಲ ಅಲ್ಲ ಎಂದು ಬೇಜಾರಿನಿಂದ ಕೇಳಿದಳು. ನಮ್ಮ ತೆಂಗಿನ ಮರ ದೊಡ್ಡದಾಗತ್ತಲ್ಲಾ ಈ ಸಲ ಅಲ್ಲೆ ಕೋಗಿಲೆ ಗಿಳಿಗಳು  ಇರ‍್ತಾವು ನೋಡ್ತಾ ಇರು ಎಂದೆ. ನಿಜಾನಾ ಅವ್ವಾ ಎಂದು  ಕೊಂಚ ಸಾವರಿಸಿಕೊಂಡು ಮುಖ ಅರಳಿಸಿದಳು. ಬರೋ ಯುಗಾದಿಗೋಸ್ಕರ ಮಗಳು ಸಾವಿರ ಕಣ್ಣುಗಳಲ್ಲಿ ಎದುರು ನೋಡುತ್ತಿದ್ದಾಳೆ. ಅವಳೊಂದಿಗೆ ನಾನೂ ಕೂಡ. ಸಸಿಗಳನ್ನು ನೆಡಿ ಮರಗಳನ್ನು ಕಾಪಾಡಿ ಅರಣ್ಯಗಳನ್ನು ರಕ್ಷಿಸಿ ಕಾಡಿದ್ದರೆ ನಾಡು ಅಂತೆಲ್ಲ ಘೋಷಣೆಗಳ ಅಬ್ಬರ ಎಲ್ಲೆಲ್ಲೂ ಕೇಳುತ್ತಲೇ ಇರುತ್ತೆ. ಸಬೆ ಸಮಾರಂಭಗಳಲ್ಲಿ ಉಪನ್ಯಾಸ ಮಾಲಿಕೆಗಳು ಕೇಳುಗರ ಕಿವಿಯ ಬಾಗಿಲಲ್ಲಿ  ನಿಂತು ಸರದಿಯ ಪ್ರಕಾರ ಒಂದಾದ ಮೇಲೊಂದು ಬರುತ್ತಿರುತ್ತವೆ. ಹೀಗಿದ್ದಾಗಲೂ ರಸ್ತೆಯಂಚಿನಲ್ಲಿರುವ ಮರಗಳು ಕರೆಂಟ್ ವಾಯರಿಗೆ ಅಡ್ಡಿ ಪಡಿಸುತ್ತವೆಂದು ತಮ್ಮ ಕೊಂಬೆಗಳನ್ನು ಕಳೆದುಕೊಂಡರೆ ಇನ್ನೂ ಕೆಲವು ರಸ್ತೆ ಅಗಲೀಕರಣದ ಹೆಸರಿನಲ್ಲಿ ಕಟ್ಟಡ ಅಡುಗೆ ಸೌದೆ ಫ್ಯಾಕ್ಟರಿಗೊಸ್ಕರ  ಮನುಷ್ಯನ ದುರಾಸೆಗೋಸ್ಕರ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವ ಮರಗಳನ್ನು ಕಂಡು ಮರ ಮರ ಮರಗುತ್ತದೆ ಜೀವ. ಹಂಚಿಕೊಳ್ಳದಿರೋಕೆ ನನ್ನ ಕೈಲಿ ಆಗಲಿಲ್ಲ. ಮರಗುವ ಜೀವಕೆ ಸಂತೈಸಲು ಸಸಿಗಳನು ಸಾಲು ಸಾಲಾಗಿ ನೆಟ್ಟು ನೀರೆರೆಯುತ್ತಿದ್ದೇನೆ. ಮತ್ತೆ ನೀವು—-? ಜಯಶ್ರೀ. ಜೆ. ಅಬ್ಬಿಗೇರಿ.

“ಮರಗಳ ಜೀವಕೆ ಮರುಗುತಿದೆ ಜೀವ”ಜಯಶ್ರೀ. ಜೆ. ಅಬ್ಬಿಗೇರಿ. Read Post »

ನಿಮ್ಮೊಂದಿಗೆ

ಭಾರತಿ ಅಶೋಕ್‌ ಕವಿತೆ “ಪಕ್ಷ ಬದಲಿಸಿದ್ದಾನೆ ಕರ್ತ”

ಕಾವ್ಯ ಸಂಗಾತಿ ಭಾರತಿ ಅಶೋಕ್‌ “ಪಕ್ಷ ಬದಲಿಸಿದ್ದಾನೆ ಕರ್ತ” “ತಮ್ಮ ಪಾಪದ ಅರಿವಿಲ್ಲಕ್ಷಮಿಸಿಬಿಡು ಪ್ರಭುವೆ”ಎನ್ನುವುದಿಲ್ಲ  ನಾನುನಿನ್ನ ಪ್ರಭು ಪಕ್ಷ ಬದಲಿಸಿದ್ದಾನೆ ಏಸು ಪ್ರಭುವೇ ನಿನ್ನ ಮಾತನ್ನು ಅವನುತಪ್ಪಾಗಿ ಅರ್ಥೈಸಿಕೊಂಡಂತಿದೆಇಲ್ಲಾ-ಪಾಪಿ ಪಕ್ಷದಆಮಿಷಕ್ಕೊಳಗಾಗಿದ್ದಾನೆ. ಹೆಣ್ಣನ್ನು ವಿವಸ್ತ್ರಗೊಳಿಸುವಾಗಕೈ ಕಬಂಧವಾದಾಗಲೇ  ಅವನಲ್ಲಿದ್ದಎನ್ನುವ  ಗುಮಾನಿ.ಇಸ್ರೆಲ್ ಪ್ಯಾಲೆಸ್ತೇನ್ ನಡುವೆಪ್ರೇಮ ಸೇತು ಕಟ್ಟಬೇಕಿದ್ದವನುರಕ್ತದಾಹಿಯಾಗುತ್ತಿದ್ದನೆ? ನೀನಂದುಕೊಂಡಂತೆನಿನ್ನ ಪ್ರಭು ನನ್ನ ಹೆಣ್ತನ ಕಾಯನು!ನನ್ನಾತ್ಮ ರಕ್ಷಣೆ ನನ್ನ ಹೊಣೆಅದಕೆ  ಬೂಟನ್ನೆ ಎತ್ತಿಟ್ಟಿದ್ದೇನೆ ನೀನದನ್ನುಅವನು ಕೊಟ್ಟ ಶಕ್ತಿ ಎಂದುಕೊಂಡರೆನಾನದಕೆ ಹೊಣೆಯಲ್ಲ ಭಾರತಿ ಅಶೋಕ್

ಭಾರತಿ ಅಶೋಕ್‌ ಕವಿತೆ “ಪಕ್ಷ ಬದಲಿಸಿದ್ದಾನೆ ಕರ್ತ” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ನಿತ್ಯನೂತನ” ನಿದ್ದೆಗೊಮ್ಮೆ ನಿತ್ಯ ಮರಣಎದ್ದ ಸಲ ನವೀನ ಜನನ”ದರಾ ಬೇಂದ್ರೆಯವರಅದ್ಭುತ ಕವನಗಳ ಸಾಲುನೆನೆಯುತ್ತ ಅಡಿ ಇಡೋಣಆಗಲಿ  ನಿತ್ಯ ನೂತನ… ದಿನ ತಿಂಗಳು ವರ್ಷಗಳುಮತ್ತೆ ಮತ್ತೆ ಮರಳಲಿಪರಿವರ್ತನೆ ಜಗದ ನಿಯಮಹೊಸ ಮೆಟ್ಟಿಲು, ಹೊಸ ಸಂಕಲ್ಪ ನಮ್ಮದಾಗಲಿ ನವ ನವೀನಹೊಸ ಬದುಕು ನಿತ್ಯ ನೂತನ… ಸಮಸ್ಟಿ ಇರಲಿ ಚಿಂತನಸಮನ್ವತೆ ಇರಲಿ ಮಂಥನಪ್ರಶಾಂತತೆ ಕಾಪಾಡಿ ಪ್ರಮಾಣಿಕಸಬ್ಯತೆ ಸೌಜನ್ಯತೆ ಕೂಡಿರಲಿಅರಿವಿನ ಪ್ರಯತ್ನ ಮಾಡಿರಿದಿನವೂ ಸಾಗಲಿ ನಿತ್ಯ ನೂತನ… ಪ್ರಕೃತಿಯ ಮಡಿಲಿನ ಪ್ರೀತಿದಿನವು ನಿತ್ಯ ನೂತನವಾಗಲಿಸೃಷ್ಟಿಯ ಚೈತ್ರ ಆರಂಭಇಬ್ಬನಿಯ ಜೊತೆಗೂಡಿಪ್ರತಿಫಲನ ನೀಡಿ ನೇಸರಬೆಟ್ಟದ ಮಧ್ಯೆ ಇರುವ ರವಿ ಬೆಳಗಲಿ… ಹೊಂಬಣ್ಣದ ನೇಸರ ಜಗಕೆಲ್ಲಸ್ವಾಗತ ಹೊಸ ಉತ್ಸಾಹ  ಹೊಸ ಚಿಲುಮೆಂತಿರಲಿಅದ್ಭುತ ಪ್ರಪಂಚ ಜ್ಞಾನ ದೀವಿಗೆಸಮಾನತೆ ಸಹಕಾರ ಇರಲಿಹೊಸ ವರುಷದ ಸಂಭ್ರಮ ನಿತ್ಯ ನೂತನವಾಗಲಿ…  ವಿಜಯಲಕ್ಷ್ಮಿ ಕೆ ಹಂಗರಗಿ

ವಿಜಯಲಕ್ಷ್ಮಿ ಕೆ ಹಂಗರಗಿ ಕವಿತೆ “ನಿತ್ಯನೂತನ” Read Post »

ಪುಸ್ತಕ ಸಂಗಾತಿ

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ

ಪುಸ್ತಕ ಸಂಗಾತಿ ಸುಮತಿ ನಿರಂಜನ್ ಚಂದಕಚರ್ಲ ರಮೇಶ್ ಬಾಬು ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು” “ಮಧ್ಯಮಗತಿಯ ಸುಗಮ ಗದ್ಯ” ಮೂಲತಃ ಬಳ್ಳಾರಿಯವರಾದ ಚಂದಕಚರ್ಲ ರಮೇಶ್ ಬಾಬು ಅವರು ಹೈದರಾಬಾದ್ ಕನ್ನಡಿಗರು. ಹೊರನಾಡಿನ ಕನ್ನಡ ಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇವರು ಕನ್ನಡ ನಾಟ್ಯ ರಂಗದ ಕಾರ್ಯಕಾರಿ ಸಮಿತಿಯ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್, ತೆಲಂಗಾಣ ಘಟಕದ ಸಂಘಟನಾ ಕಾರ್ಯದರ್ಶಿಯೂ ಆಗಿರುವರು. ಇವರು ತೆಲುಗು, ಕನ್ನಡ ಎರಡರಲ್ಲೂ ಪ್ರವೀಣರು. ಕವಿತೆ, ಲಘು ಬರಹಗಳು, ಅಂಕಣಗಳು, ಅನುವಾದ ಕೃತಿಗಳು (ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ)- ಹೀಗೆ ಒಟ್ಟು ಮೂವತ್ತು ಕೃತಿಗಳನ್ನು ರಚಿಸಿದ್ದಾರೆ. ಆಚೀಚಿನ ಆಯಾಮಗಳು ಸಂಕಲನದಲ್ಲಿ ಒಟ್ಟು ಮೂವತ್ತನಾಲ್ಕು ಲೇಖನಗಳಿವೆ. ಈ ಅಂಕಣ ಗೊಂಚಲಿನಲ್ಲಿ ಬಗೆಬಗೆಯ ಹೂವುಗಳು. ಎಲ್ಲವೂ ದಿನ ನಿತ್ಯ ನಮ್ಮ ತೋಟಗಳಲ್ಲಿ ಸಾಮಾನ್ಯವಾಗಿ ಕಾಣುವಂತಹವು. ಅವುಗಳ ಮೇಲೆ ತುಂತುರು ಹನಿ ಚೆಲ್ಲಿದಂತೆ ತೆಳು ಹಾಸ್ಯ. ಕೆಲವಕ್ಕೆ ವೈಚಾರಿಕತೆಯ ಘಮವಿದ್ದರೆ, ಕೆಲವಕ್ಕೆ ಅಧ್ಯಾತ್ಮದ ಅಗರುಬತ್ತಿಯ ಪರಿಮಳ, ಸಣ್ಣಕ್ಕೆ- ಯಾವುದೂ ಮೂಗಿಗೆ ಬಡಿಯುವಂತದಲ್ಲ. ಹಿತ ಮಿತ, ನವಿರು. ಶ್ರೀಸಾಮಾನ್ಯನ ದೈನಂದಿನ ಜೀವನದಲ್ಲಿ ಬರುವ ಚಿಕ್ಕ ಪುಟ್ಟ ಸವಾಲುಗಳು, ಅನಿವಾರ್ಯತೆಗಳ ಮೇಲೆ ಬರೆದ ಕಿರು ವ್ಯಾಖ್ಯಾನಗಳು- ಮನೆಯನ್ನು ಹೊಕ್ಕ ಇಲಿಯಿಂದ ಹಿಡಿದು ನೆರೆ ಹೊರೆ, ಗತಕಾಲದ ಟೂ ಇನ್ ಒನ್, ಗಾಂಧಿವಾದದ ಪ್ರಸ್ತುತತೆ ವರೆಗೆ – ಇಲ್ಲಿಯ ಬರಹದ ವಸ್ತುಗಳ ಹರವು ವಿಶಾಲ. ದಿಟ್ಟತನದಿಂದ ತನ್ನದೇ ಆದ ಧೋರಣೆಯನ್ನು ಅಭಿವ್ಯಕ್ತಿಸುತ್ತದೆ- “ಮೇರಾ ಭಾರತ್ ಮಹಾನ್”. ಬಯೋಪಿಕ್ ಬಗ್ಗೆ ಹೇಳುವಾಗ- ಚಲನಚಿತ್ರಗಳಲ್ಲಿ ಪುರಾಣ ಪುರುಷರ ಚಿತ್ರಣದಿಂದ ಹಿಡಿದು, ಕ್ರೀಡಾಪಟುಗಳ ರಾಜಕಾರಣಿಗಳ ಮೇಲಣ ಚಲನಚಿತ್ರಗಳನ್ನು ವಿಶ್ಲೇಷಿಸುವ ಬಗೆ ಇವರ ಅಧ್ಯಯನಶೀಲತೆಗೆ ಕನ್ನಡಿ. ಭಾಷೆ, ಅದರಲ್ಲೂ ಕನ್ನಡದ ಮೇಲಿನ ಲೇಖನಗಳಲ್ಲಿ ಕನ್ನಡಾಭಿಮಾನ ತುಂಬಿ ತುಳುಕುವುದು ಮಾತ್ರವಲ್ಲ ಉತ್ತಮ ಸಲಹೆಗಳೂ ಕಾಣುವುವು. ಸ್ವಂತ ಅನುಭವದ ಕುರಿತಾದ “ಆಕಾಶಯಾನವೂ…”, “ನಾವು ಇಲಿಯನ್ನು ಹೊರಗಟ್ಟಿದೆವು…”, “ನೋ ಪಾರ್ಕಿಂಗ್”- ಇತ್ಯಾದಿಗಳು ನಮ್ಮೆಲ್ಲರ ಅನುಭವವನ್ನು ಪ್ರತಿಫಲಿಸುವ ಆಪ್ತತೆ ಹೊಂದಿವೆ. ನನ್ನ ಮೆಚ್ಚಿನವು- ಶ್ವಾನೋಪಾಖ್ಯಾನ, (ಗ್ರೇಟ್ ಡೇನ್ ಗೆ “ಕಾಲಭೈರವ”, ಪೊಮರೇನಿಯನ್- ಭೂಮಿಗೆ ಸಮಾನಾಂತರವಾಗಿರುವ “ಕುಳ್ಳ ಕುನ್ನಿ” !), ಫೇಸ್ಬುಕ್ ಪ್ರಭಂಜನ, ಬೀಗರು (ಗಟ್ಟಿತನವಿರುವುದರಿಂದ ಬೀಗ ಎಂಬ ಹೆಸರು ಬಂದಿರಬಹುದು ಎಂಬ ಊಹೆ !), ನಿರೂಪಕರ ಪಾತ್ರ – ಕಬಡ್ಡಿ ಆಟಗಾರರಂತೆ ನಿರ್ದಿಷ್ಟ ಮಿತಿಯಲ್ಲಿ ನಡೆಯಬೇಕಾದ ಪರಿಸ್ಥಿತಿ, ಮನೆಕೆಲಸದ ಸಾಮ್ರಾಜ್ಞಿ -(ಮನೆಯೊಡೆಯನನ್ನೆ ರೂಮಿನಿಂದ ಹೊರಗೋಡಿಸಲು ಕೋಲುಧಾರಿಣಿಯಾಗಿ ಒರೆಸಲು ನಿಂತ ಮಹಿಷಾಸುರ ಮರ್ದಿನಿ!), ವಜ್ರದಂತಕ್ಕೊಂದು ಕ್ಷತಿ ( ದಂತಸ್ಥ- ಹಲ್ಕಟ್ ಡಾಕ್ಟರ್!) – ಚಿಕ್ಕ ಚಿಕ್ಕ ಕುಂಚಕಾರಿತನದಿಂದ ಮನ ಸೆಳೆದ ಉದಾಹರಣೆಗಳು. ಭಾರವೆನಿಸದ ಈ ಲಲಿತ ಕಿರು ( ಯಾವುದೂ ೩-೪ ಪುಟ ಮೀರಿಲ್ಲ) ಪ್ರಬಂಧಗಳಲ್ಲಿ ಅಬ್ಬರವಿಲ್ಲ, ವ್ಯಂಗ್ಯದಲ್ಲಿ ಮೊನಚಿಲ್ಲ, ಹಾಸ್ಯದಲ್ಲಿ ಕಹಿಯಿಲ್ಲ, ಭಾಷೆಯಲ್ಲಿ ಶಬ್ದ ಪ್ರದರ್ಶನವಿಲ್ಲ. ನನಗೆ ಥಟ್ಟಂತ ನೆನಪಾದದ್ದು ಆರ್ .ಕೆ. ಲಕ್ಷ್ಮಣರ ಶ್ರೀಸಾಮಾನ್ಯನ ವ್ಯಂಗ್ಯ ಚಿತ್ರಗಳು. ಅಷ್ಟೇ ಖುಷಿ ಕೊಡುವಂತಹವು. ಸುಮತಿ ನಿರಂಜನಹೈದರಾಬಾದ್

ಚಂದಕಚರ್ಲ ರಮೇಶ್ ಬಾಬು ಅವರ ಅಂಕಣ ಬರಹಗಳ ಸಂಕಲನ- “ಆಚೀಚಿನ ಆಯಾಮಗಳು”ಸುಮತಿ ನಿರಂಜನ Read Post »

You cannot copy content of this page

Scroll to Top