ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾಡಲಾದರೂ ಏನು
ಮರವಿಂದು ಸಸಿಯಾಯ್ತು
ಹರೆ ಬರುವುದೆಂದು ಖುಷಿಪಡಲೇ
ಶ್ರಮದ ವ್ಯರ್ಥಕೆ ದುಃಖಿಸಲೇ

ಅರಿವಿನ ಅರಿವು ಈಗಾಯ್ತು
ಬೋರ್ಗಲ್ಲ ಮೇಲೆ ನೀರು ಸುರಿದಿದ್ದು
ಹರಯದ ಆಯು ಮುಗಿದರೂ
ಹತ್ತಬೇಕು ಒಂದನೆ ಮೆಟ್ಟಿಲು

ಅಳುಕಿ ಅಳುವದಕ್ಕಿಂತಾ
ದುಡಿದು ಬದುಕುವುದು ಲೇಸು
ಸಸಿ ಮತ್ತೆ ಬೆಳೆಯಲು
ಬೇಲಿ ಬೇಕು ಆಸುಪಾಸು

ಇಡದಿದ್ದರೆ ನೀಗಾ ಕಳುವಿಗೆ ಜಾಗಾ
ಎಚ್ಚರಿತ ರಕ್ಷಣೆ ಬೇಕೇಬೇಕು
ನಿರ್ಲಕ್ಷ್ಯದಿ ಕಳೆದ ಕ್ಷಣಕೆ
ಒಪ್ಪಿ ತಲೆ ಬಾಗಲೇಬೇಕು

ದುಡಿಯಲು ಯಾವ ಭಯವಿಲ್ಲಾ
ಆಯುವಿನ ಕೃಪೆ ಬೇಕೇ ಬೇಕು
ಬರುವುದು ಹೋಗುವುದು ಇದ್ದದ್ದೆಂದು
ಬದುಕಲು ಬದುಕು ಬದುಕಬೇಕು

ಹಂಗೇ ಇಲ್ಲದ ಜೀವಿಗೆ
ಭಂಗವೆಂದೂ ಬಾರದು
ನಂಬಿಕೆಯಿಂದಲೇ ಆಗುವುದೆಲ್ಲಾ
ನಂಬಿ ಎಂದೂ ಕೆಡಬಾರದು

ಬರುವ ಕ್ಷಣ ಸ್ವಾಗತಿಸುತ
ಕಳೆದ ಕ್ಷಣ ಮರೆಯೋಣ
ಹೆಣಗುತ್ತಲಾದರು ಬದುಕಿ
ನಮಗೆ ನಾವೇ ಮೆರೆಯೋಣ


About The Author

3 thoughts on “ಪ್ರಮೋದ ಜೋಶಿ ಅವರ ಕವಿತೆ, “ನಮಗೆ ನಾವೇ ಮೆರೆಯೋಣ””

Leave a Reply

You cannot copy content of this page

Scroll to Top