ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಬಂಧ ಕೊಂಡಿ ಕಳಚಿ
ಮೇಲುಗೈ ಸಾಧಿಸಿದೆ ತನ್ನತನ
ಅನುಬಂಧವಾಗಿ ಊರಾಚೆ
ಸ್ವಾರ್ಥ ವಿಶ್ವಾಸ ಘಾತುಕತನ

ಸನಿಹವಿದ್ದವರಿಲ್ಲ ಸನಿಹದಿ
ಆಂತರ್ಯದಿ ಅನತಿದೂರವೇ
ಮುನಿಸು ಬಿಗುಮಾನ ಮನದಿ
ಅರಿವು ದೂರ ಎಲ್ಲ ಅಪಾರ್ಥವೇ

ಹಿಡಿತ ಮೀರಿದ ಮಾತಿನ ಧಾಟಿ
ಹತೋಟಿ ತಪ್ಪಿದ ವಿಕಲ್ಪ ಚಿಂತನೆ
ಅಭಿಮಾನವೆನ್ನುವುದೇ ಅಜ್ಞಾನ
ಅವಿನಾಭಾವವೇ ಇಲ್ಲಿ ನಿರ್ನಾಮ

ನನ್ನವರೆoಬರು ಕನಸಿನಲ್ಲಿ ಕಣ್ಮರೆ
ದೂರವಾಗಿಹೆವು ನಮ್ಮವರಿಗೆ ನಾವು
ತೊರೆ ವಿಶ್ವಾಸ ನಾವು ಇರುವೆಡೆಯಲ್ಲೇ
ಕಳೆದುಹೋಗುತಿದ್ದೆವಾ.. ಮತ್ತೇನು

ಹಿರಿದು ಕಿರಿದು ಬೇಧವನೆ ಮರೆತು
ಕಾರ್ಯ ನಿರ್ವಹಿಸಿದೆ ಬೇಧ ತಂತು
ಗೌರವದ ನಡೆಯೇ ಇಲ್ಲಿ ದುರ್ಲಭ
ಬಂಧಿಸಿಹುದು ಬಿಡಿಸಲಾರದ ಕಬಂಧ

—————————————-

About The Author

1 thought on “ಮಾಲಾ ಚೆಲುವನಹಳ್ಳಿ ಅವರ ಕವಿತೆ ʼಕಬಂಧʼ”

  1. ಭಾವ – ಅವಿನಾಭಾವ ಮತ್ತು ಸ್ವಂತಿಕೆಯ ನಡುವಲ್ಲಿನ ಸಂಕೀರ್ಣತೆಯನ್ನು, ತಮ್ಮ ಈ ” ಕಬಂಧ ” ಕಾವ್ಯಾಧಾರೆಯಲ್ಲಿ, ಪಡಿಮೂಡಿಸಿ, ಸಂಬಂಧ ಮತ್ತು ಮಾನಸಿಕ ಸ್ವಂತಿಕೆಯಲ್ಲಿನ, ಅವ್ಯಕ್ತ ಬಂಧನದ ಹಿನ್ನೆಲೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಿ, ಸಂಭಂದಗಳಲ್ಲಿನ ಶ್ರೇಷ್ಠತೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೌಲ್ಯಗಳನ್ನು, ಅವಿನಾಭಾವತೆಯ ಪದದಲ್ಲಿ ಸೂಕ್ಷ್ಮವಾಗಿ ಹೇಳಿದ್ದೀರಿ! ಸಂಬಂಧಗಳ ಬಂಧನ, ಸ್ನೇಹದ ಸಂಕೋಲೆಯ ಸ್ವರೂಪದಲ್ಲಿದ್ದರೆ, ಆ ಆ ಸಾರ್ಥಕಬದುಕಿನ ಸಾರದ ಸ್ವರೂಪವೇ, ಈ ಕಾವ್ಯದ ಶ್ರೇಷ್ಠತೆ! ಅಭಿನಂದನೆಗಳು ಮೇಡಂ!!.

Leave a Reply

You cannot copy content of this page

Scroll to Top