ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸತ್ಯ ಶೋಧನೆ ಮಾಡಿದ ಗಾಂಧಿಜಿಗೆ
ಸತ್ಯ ಕಂಡಿತು ರೈತನ ಮೊಗದಲ್ಲಿ
ಮಣ್ಣಲ್ಲಿ ಚಿನ್ನ-ಅನ್ನ ಬೆಳೆವ ಕಣ್ಣುಗಳಲ್ಲಿ !

ಗಾಂಧಿಜಿ ಕಂಡಂತೆ ಹಳ್ಳಿಗಳು ದೇಶದ ಆತ್ಮ
ರೈತರು ಹಳ್ಳಿಗಳ ವಾರಸುದಾರರು
ಸ್ವತಂತ್ರ ಭಾರತದ ರಾಯಭಾರಿಗಳು !

ರಾಜಕೀಯ ಸ್ವತಂತ್ರ ದಕ್ಕಿತು
ಮನಸುಗಳ ದಾಸ್ಯ ಕಳಚಲಿಲ್ಲ
ದೇಹಗಳು ಸ್ವತಂತ್ರ, ಮನಸುಗಳು ಪರತಂತ್ರ !

ಸ್ವತಂತ್ರೋತ್ತರ ಭಾರತದ ಹಸಿರು ಕ್ರಾಂತಿ
ಆಹಾರ ಸ್ವಾವಲಂಬಿಯೆಡೆಗೆ ಹೆಜ್ಜೆ
ರೈತನ ಬಾಳು ಹಸಿರಾಗಲಿಲ್ಲ !

ಶಿಕ್ಷಣ, ಉದ್ಯೋಗ, ವ್ಯಾಪಾರ
ಸ್ವತಂತ್ರ ಭಾರತದ ಫಲ
ರೈತನಿಗೆ ಸ್ವಾತಂತ್ರ್ಯ ಕೊಡುವಲ್ಲಿ ವಿಫಲ !

ಕೈಗಾರಿಕೋತ್ಪನ್ನಗಳಿಗೆ
ಮಾಲಿಕರೇ ಕಟ್ಟುವರು ಮಾರುವ ಬೆಲೆ
ರೈತನಿಗೆಲ್ಲಿದೆ ಆ ಸ್ವಾತಂತ್ರ್ಯ!?

ತಂತಮ್ಮ ಬೇಳೆ ಬೇಯಿಸಿಕೊಳ್ಳಲು ಬೇಕು ರೈತ
ರೈತನ ಹೆಸರಲ್ಲಿ ರಾಜಕೀಯ
ರೈತನಿಗೆ ದಕ್ಕಲಿಲ್ಲ ಸ್ವಾತಂತ್ರ್ಯ
ಸ್ವಾತಂತ್ರ್ಯಕ್ಕಿದೆಯೇ ಅರ್ಥ !!??


About The Author

Leave a Reply

You cannot copy content of this page

Scroll to Top