ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಬಂಧ ಕೊಂಡಿ ಕಳಚಿ
ಮೇಲುಗೈ ಸಾಧಿಸಿದೆ ತನ್ನತನ
ಅನುಬಂಧವಾಗಿ ಊರಾಚೆ
ಸ್ವಾರ್ಥ ವಿಶ್ವಾಸ ಘಾತುಕತನ

ಸನಿಹವಿದ್ದವರಿಲ್ಲ ಸನಿಹದಿ
ಆಂತರ್ಯದಿ ಅನತಿದೂರವೇ
ಮುನಿಸು ಬಿಗುಮಾನ ಮನದಿ
ಅರಿವು ದೂರ ಎಲ್ಲ ಅಪಾರ್ಥವೇ

ಹಿಡಿತ ಮೀರಿದ ಮಾತಿನ ಧಾಟಿ
ಹತೋಟಿ ತಪ್ಪಿದ ವಿಕಲ್ಪ ಚಿಂತನೆ
ಅಭಿಮಾನವೆನ್ನುವುದೇ ಅಜ್ಞಾನ
ಅವಿನಾಭಾವವೇ ಇಲ್ಲಿ ನಿರ್ನಾಮ

ನನ್ನವರೆoಬರು ಕನಸಿನಲ್ಲಿ ಕಣ್ಮರೆ
ದೂರವಾಗಿಹೆವು ನಮ್ಮವರಿಗೆ ನಾವು
ತೊರೆ ವಿಶ್ವಾಸ ನಾವು ಇರುವೆಡೆಯಲ್ಲೇ
ಕಳೆದುಹೋಗುತಿದ್ದೆವಾ.. ಮತ್ತೇನು

ಹಿರಿದು ಕಿರಿದು ಬೇಧವನೆ ಮರೆತು
ಕಾರ್ಯ ನಿರ್ವಹಿಸಿದೆ ಬೇಧ ತಂತು
ಗೌರವದ ನಡೆಯೇ ಇಲ್ಲಿ ದುರ್ಲಭ
ಬಂಧಿಸಿಹು ಬಿಡಿಸಲಾರದ ಕಬಂಧ

—————

About The Author

Leave a Reply

You cannot copy content of this page

Scroll to Top