ಕಾವ್ಯ ಸಂಗಾತಿ
ಸವಿತಾ ದೇಶಮುಖ ಕವಿತೆ
ʼಬಿಡುಗಡೆʼ


ಬಂಧ -ಸಂಬಂಧ ಕಳಚಿ
ಬಿಡುಗಡೆಯ- ಬೇಡಿಗೆ
ಬದ್ಧರಾದ ಬಂಧಿತರಿಗೆ
ನೋಡಿ ನೊಂದಿದೆ ಮನ….
ವರ್ಷಗಟ್ಟಲೆ ಕೂಡಿ ಸುಖಿಸಿ
ನಲಿದು -ಒಲಿದು – ಬಲಿತು
ಸಣ್ಣಅಪ ಮಾತುಗಳಿಗೆ
ಕಳಚಿ ಬಿಟ್ಟಿತೇ…. ?
ಕೂಡಿ ಕಂಡ ಹೊಂಗನಸು
ಹುಟ್ಟಿದ ಕರುಳು ಕುಡಿಯ
ಮರೆತು ,ತಮ್ಮ- ತಮ್ಮ
ಅಹಂ ಸಂತೈಸಲು ಹೊರಟ
ಮರೆತು ಒಲವು -ಪ್ರೇಮ..
ತಂದೆ -ತಾಯಿ- ಬಳಗ
ಬಿಟ್ಟು ದೂರ ಹೊಂಟವರ
ಕಂಡು ಮನ ಮರ-ಮರ
ಮರಗಿತ್ತು, ಕತ್ತಲೆಯ ಕಾರಿ ……
ಎತ್ತ ಇಳಿದಿದೆ- ಎತ್ತಣ
ಹೊರಳಿದೆ ಸಂಸ್ಕೃತಿಯ
ಬೇರ, ಸಂಸ್ಕಾರ ಮರೆಮಾಚಿ
ಹಿರಿ ಆಯಾಮ ಚೌಕಟ್ಟ….
ಮದುವೆ-ಬಂಧನ- ದಾಟಿ
ಬಾಂಧವ್ಯ ಜಂಜಾಟ ಆಟ,
ಅಭಿಮಾನದ ಕೂಟ …
ಮಕ್ಕಳ -ಕುಟುಂಬದ ಆತ್ಮ –
ವಂಚಿಸಿ ನೂಕಿ ನಿಂದಿವೆ,
ಅರೆ ಕ್ಷಣದಲ್ಲಿ ಎಲ್ಲ ತೀರಿಸಿ
ನೀನು ಬೇರೆ -ನಾನು ಬೇರೆ
ಕಳಚಿ ಬಂಧನದ ಕೊಂಡಿ..
ಸೋಲು ಗೆಲುವಿನ ಆಣತಿ
ನಡೆದು ತೀರದ ಪಯಣದತ….
ಬಿಡುಗಡೆಯ ನೊಗ ಹೋತು….
ಕರಳು ಕೊರೆಯುವ ಮಾತು …
ಸವಿತಾ ದೇಶಮುಖ




ತುಂಬಾ ಚೆನ್ನಾಗಿ ಬರೆದಿದ್ದೀರಿ ಸವಿತಾ ಮನ ಮುಟ್ಟುವ ಹಾಗೆ ಹಾರ್ದಿಕ ಶುಭಾಶಯಗಳು ಅಭಿನಂದನೆಗಳು
Thanku mam
ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಂ ಅಭಿನಂದನೆಗಳು ತಮಗೆ