ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೋಯಿಸಬೇಡ ನನ್ನ ಮನವ
ಬಾಡಿಸಬೇಡ ನಗುವ ಮೊಗವ
ಕರಗಿಸಬೇಡ ಈ ಮುಗ್ಧ ಹೃದಯ
ಸುರಿಯಬೇಡ ಕಣ್ಣೀರ ಮಳೆಯ
ನನಗೆ ನೀ  ಶಾಪವಾಗಬೇಡ ಒಡೆಯ..

ತಡೆಯದೆ ಕಂಬನಿ ಜಾರಿದೆ ಕೆನ್ನೆಗೆ
ಸೋತು ಶರಣಾಗಿ ಬಸಿದ ಇಳೆಗೆ
ಮೂಕ ರೋದನೆ ನನ್ನ ಪಾಲಿಗೆ
ಯಾರ ಶಾಪ ತಟ್ಟಿದೆ ಬದುಕಿಗೆ
ನಿತ್ಯವೂ ನನಗೆ ಸುಡುಗಾಡ ಬೇಗೆ.

ರಾಶಿ ರಾಶಿ ಬಿದ್ದ ಕನಸಿನ ಕಂತೆ
ನೆಮ್ಮದಿಯಿರದ ಈ ಬಾಳ ಸಂತೆ
ತಿನ್ನುತ ತಲೆಯ ಕೊರೆದಿದೆ ಚಿಂತೆ
ಅರಳಿದ ಸುಮವು ಸಂಜೆಗಷ್ಟೇ
ಭರವಸೆ ಕಳಕೊಂಡ ನಾ ನತದೃಷ್ಟೆ.

ಬಾಳಿನ ದೀಪ ಉರಿಯದು ಇಲ್ಲಿ
ನೆಲೆಯಿಲ್ಲ ಬತ್ತಿಗೆ ಬಿರುಗಾಳಿಯಲ್ಲಿ
ನಿತ್ಯವೂ ವ್ಯಥೆಯ ಕಥೆಯ ನಡುವಲ್ಲಿ
ಮೌನವ ಹೆಣೆದ ಸರಪಳಿಯಲ್ಲಿ
ಬಂಧನವಾಗಿದೆ ನಗುವು ಇಲ್ಲಿ.

ನಾ ಮುಟ್ಟಿ ಬೇಡುವೆ ನಿನ್ನ ಪುಣ್ಯ ಪಾದ
ಕೇಳದಾದೆಯಾ ಈ ಮನದ ಆರ್ತನಾದ
ಮರಳಿ ಕೊಡುವೆಯಾ ನೆಮ್ಮದಿ ಯೋಗ
ಕರುಣಿಸು ಎನಗೆ ಭಾಗ್ಯದ ಒಂದು ಭಾಗ
ಬರುವುದು ಅರ್ಥ ಬದುಕಿಗೆ ಆಗ.


About The Author

Leave a Reply

You cannot copy content of this page

Scroll to Top