ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

   
ಅಜ್ಞಾತ ನೆರಳೊಂದು
ನಮ್ಮ ನಡುವೆ
ನಿಂತು ಹೇಗೋ
ಉಪಕಾರಿ ಆಗುವುದು
ಮಾತಲ್ಲಿ
ಮಮತೆಯಿರಿಸಿ
ನಗೆಯಲ್ಲಿ ಉಪಚರಿಸಿ
ಹೃದಯಕ್ಕೆ ಚಿತ್ರವಾಗಿ
ಇದ್ದು ಬಿಡುವುದು
ಗುಣಕ್ಕೊಂದು ಋಣವಾಗಿ
ಮೊಗದಲ್ಲಿ ಗುರುತಾಗಿ
ಸುತ್ತ ನಿಲ್ಲುವುದು
ಎತ್ತರದ ಕನಸುಗಳ
ಮನದಿ ಬೀಜವಾಗಿಸಿ
ಹಗುರವಾಗುವುದು
ಭಾವಕ್ಕಿಷ್ಟು ಭವಕ್ಕಿಷ್ಟು
ಬಿತ್ತಿ ಬಿಡುವುದು
ಬೆಳಕಲ್ಲಿ ನೆರಳಾಗಿ
ನೆರಳಲ್ಲಿ ಬೆಳಕಾಗಿ
 ದೀಪವಾಗುವುದು
ಆದರದ ಸಾದರದ
ಸಾಲುಗಳ ಹಿಡಿದು
ಮುಂದೆ ಸಾಗುವುದು
ಜೊತೆ ನೆಲೆಯಾಗಿ
ಗಟ್ಟಿ ಆಗುವುದು
ನಮ್ಮ ನಗುವಾಗಿ
ಗುರುತಾಗುವುದು…


About The Author

Leave a Reply

You cannot copy content of this page

Scroll to Top