ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಸೆ ಎಂಬ  ಅಂಬುಧಿ   ಬಾರದಿರು ನೀ ಹತ್ತಿರ ನಿನ್ನ ಸೇರೋ ತವಕದಲ್ಲಿ
 ಹರಿವ ನೀರಿನ ರಭಸದಲಿ ಮರೆಮಾಚಿದ ಸುಳಿ ನೀ
 ಹೋಗು ನೀ ಬಹು ದೂರ…
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…
 ಭರವಸೆಗಳ ಬೆನ್ನ ಹತ್ತಿ ಹೊರಟ ನನಗೆ ಕಾಣದಾಗಿದೆ ನೇಸರ…
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…
 ಆಗಸದಿಂದ ಬರುವ ಕಿರಣಗಳ ಬಾಚಿಕೊಂಡು ಬದುಕ ಬೆಳಕ ಬೆಳಗುವ ಬದುಕ ಬದುಕುವ ಕಾತುರ…..
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…
 ಕಂಡ ಕನಸುಗಳು ಕರಿಮೋಡವಾಗಿ ಆಗಸದಲ್ಲಿ ಸಾಗುತಿರಲು ಬಿರುಗಾಳಿಗೆ ಮುನ್ನುಗ್ಗಿ ಹೋಗುತ್ತಿರಲು ಕನಸು ನನಸಾಗದಿರಲು ಇಳೆಗೆ ಮಳೆ ಬಾರದಿರೆ ಮೋಡಗಳು ಸರಿದವು ಬಹುದೂರ….
 ಸೂಚನೆ ಮರೆ ಮಾಡಿ ಯೋಚನೆ ಬಹು ದೂರ ಸಾಗಿ
 ಏನ್ ಒಂದನ್ನ ಅರಿಯದೆ ಏಕತಾನತೆಯಲ್ಲಿ ಈ ಅಂಬರ…
 ಬೇಸರ ಸುಳಿಯದಿರು ನೀ ನನ್ನ ಹತ್ತಿರ…..
 ನೈಜ ಬದುಕಿನ ನೈಸರ್ಗಿಕತೆಯಲ್ಲಿ ಬಿಟ್ಟುಬಿಡದೆ ಬೀಸಿದರೆ ಬಿರುಗಾಳಿ ಭರವಸೆಯೊಂದು ನಿಜ ಕ್ರೌರ್ಯ……
                    ಏನಂತೀರಿ


About The Author

Leave a Reply

You cannot copy content of this page

Scroll to Top