ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೆನಪಾದ ಬಸವಣ್ಣ
ಅಡಿಗಡಿಗೆ
ಅವರಿವರ ಆಚಾರ
ವಿಚಾರ
ಅಜ್ಞಾನದ ಪರಮಾವಧಿ
ಕಂಡು
ಎತ್ತ ಸಾಗಿದೆ ಜನರ
ಜೀವನ ಸಿದ್ಧಾಂತ
ವೈಚಾರಿಕ ನಿಲುವು
ಎಂಬ ಕಳವಳವ
ಹೊತ್ತು ನೆನಪಾದ
ಬಸವಣ್ಣ ಅಡಿಗಡಿಗೆ

ಕಂಡ ಕಂಡಲ್ಲಿ ಮುಳುಗುವವರ
ದೇವರ ಹೆಸರಲ್ಲಿ
ಉಪವಾಸ ಮಾಡುವವರ
ಅಭಿಷೇಕ ಮಾಡಿಸಿ
ಗುಡಿಯ ಸುತ್ತುವವರ
ಅಂಧಕಾರದ ಮನವ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆ

ತನ್ನೊಳಗಿನ ಪ್ರಜ್ವಲಿಸುವ
ಜ್ಯೋತಿಯ ಕಾಣದೆ
ತನ್ನ ಕೆಲಸವನ್ನು ತಾನು ಮಾಡದೆ
ಹಗಲಿರುಳು ಜಪ ಮಾಡುವ
ಭಂಡ ಭಕ್ತರ ನೋಡಿ
ನೆನಪಾದ ಬಸವಣ್ಣ
ಅಡಿಗಡಿಗೆ

ಸಮಾನತೆಯ ಮೆರೆಯದೆ
ಭೇದ -ಭಾವ ಅರಸುವ
ವ್ಯಾಮೋಹದಲ್ಲಿ ಮಿಂದು
ಸ್ವಾರ್ಥಿಯಾಗುವ
ಗೊಡ್ಡು ಸಂಪ್ರದಾಯಗಳಿಗೆ
ಮೊರೆಹೋಗುವ ವೈದಿಕ
ಮನಸುಗಳ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆ


About The Author

1 thought on “ಸುಧಾ ಪಾಟೀಲ ಕವಿತೆ-ನೆನಪಾದ ಬಸವಣ್ಣ”

Leave a Reply

You cannot copy content of this page

Scroll to Top