ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಮುಖವಾಡ ಕಳಚಲೇಬೇಕು
ಸತ್ಯದ ಅಲೆ ಎಲ್ಲೆಡೆ
 ಹರಡಬೇಕು.
ನಮ್ಮ ಏಳಿಗೆಯ ಬೆಳಕನ್ನು ನೋಡಿ,
ಹೆಣ್ಣೆ ಹೆಣ್ಣಿಗೆ ವಿರೋಧವೇಕೆ?

ಮಕ್ಕಳ ತಾಯಿಯಾಗಿ ಬೆಳೆದವಳು,
ಇನ್ನೊಬ್ಬಳ ಹೆಜ್ಜೆಗೆ ಹಳ್ಳ ಹಾಕುವುದೇಕೆ?
ಬೆಳಕಿಗೆ ಬೆಂಕಿ ಹಚ್ಚುವ ದೃಷ್ಟಿಯಲಿ
ನಾಟಕ ಆಡೋಕೆ ಇನ್ನು ತೆರೆ ಬೀಳಲೇಬೇಕು.

ಹೊರಗೆ ನಗು, ಒಳಗೆ ವಿಷದ ಮಾತು,
ಬೆರಳಚ್ಚಿದ ಹೂವಿನಲ್ಲಿ ಹಿಂಸೆಗೊಂದು ತಾತ್ವಿಕ ನಾಟ್ಯ.
ಎದ್ದು ನಿಲ್ಲೋ ಹೆಣ್ಣು ನೋಡಿ ತಾಳಲಾರದೆ,
ಅವಳ ಓಟವನ್ನೇ ಕುಗ್ಗಿಸಲು ನಟನೆ ಮಾಡುತ್ತಾರೆ.

ಅವನ ಆಟದ ಮುಕ್ತಾಯವಿಲ್ಲದಿದ್ದರೂ,
ಈಕೆಯ ಆಟವೇ ಹೆಚ್ಚು ನೋವಿನ ಮಾತು.
ಒಬ್ಬನು ಬಲವಂತೆ ಸುತ್ತಿದ್ರೆ,
ಇನ್ನೊಬ್ಬಳು ಮರುಭಾವದ ಮಾರುಬಜಾರ.

ಅಕ್ಕಮಹಾದೇವಿಯಂತೆ ಶರಣಿ ನಟಿಸುತ್ತಾಳೆ,
ಆದರೆ ಅವಳ ತ್ಯಾಗ-ನಿಷ್ಠೆಗೆ ನಿಜವಾದ ಗೌರವವಿಲ್ಲದೆ.
ಆವರಣದ ಮಾತುಗಳಿಂದಲೇ ಆಕೆಯ ಪ್ರತಿಷ್ಠೆ ಕತ್ತಲಾಗುತ್ತದೆ,
ದರ್ಶನವಿಲ್ಲದ ವಚನಗಳಿಂದ ಗರ್ಭವಿಲ್ಲದ ಆಡಂಬರ!


About The Author

2 thoughts on “ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ-ʼಮುಖವಾಡ ಕಳಚಲೇಬೇಕುʼ”

Leave a Reply

You cannot copy content of this page

Scroll to Top