ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹುಟ್ಟುವ ಮೊದಲೇ
ಕೂಸಿಗೆ ಕ್ಯಾನ್ಸರ್
ಅವನ ಕೆಮ್ಮುವ ಧ್ವನಿ
ಗರ್ಭದಿಂದಲೇ ಕೇಳುತ್ತಿದೆ,
ಬೀಸುವ ಗಾಳಿ
ಸುಡುವ ಸೂರ್ಯ
ಎರಡೂ ಜೀವಕ್ಕೆ ಮಾರಕ
ಧರೆಗಿಳಿದ ಮಳೆಯಂತು
ಬಿಚ್ಚಿಟ್ಟಿದೆ ನಮ್ಮೂರ ಜಾತಕ.

ದಶಕಗಳಿಂದಿಚೆಗೆ ನೆಟ್ಟ
ಪ್ರಗತಿಯ ಸಸಿ
ಇಗಂತೂ ಆಳವಾಗಿ ಬೇರೂರಿದೆ,
ತನ್ನ ಸೊಂಡಿಲು ಚಾಚಲು
ಹುನ್ನಾರವಂತೂ ನಡದೆ ಇದೆ.
ಸತ್ತವರ ಸಂಖ್ಯೆಯ ಮೇಲೆ.

ಊರು ಬಿಟ್ಟು ಹೋದವರು
ನೂರು ವರ್ಷದ ನಂತರವೂ
ಜೋಡಿಯಾಗಿಯೇ ಬಂದಿದ್ದಾರೆ ಜಾತ್ರಗೆ.
ಇದ್ದವರ ಪೈಕಿ ವಿಧುರ ವಿದುವೆಯರ ಸಂಖ್ಯೆಯೆ
ಹೆಚ್ಚು ಮತದಾರರ ಪಟ್ಟಿಯಲಿ.

ಕೆಮ್ಮುತ್ತಾ ಬಂದ ಗಂಡನಿಗೆ
ಔಷಧಿ ಕೊಡಲು ಹೆಂಡತಿ ಇಲ್ಲ
ಅಳುವ ಮಕ್ಕಳ ಹೆಂಡತಿಯ
ಕಣ್ಣೀರ ವರೆಸಲು ಗಂಡನಿಲ್ಲ
ಹಗಲೆಲ್ಲ ಬದುಕಿಗೆ
ಗುದ್ದಾಟವಾದರೆ
ರಾತ್ರಿ ಸಾವಿನ ಜೊತೆ ನರಳಾಟ.

ಈಗಂತೂ ನನ್ನೂರಲ್ಲಿ
ವಾಸದ ಮನೆಗಳ ಸಂಖೆಗಿಂತ
ಗೋರಿಗಳ ಸಂಖೆಯೇ ಹೆಚ್ಚು,
ಆದರೂ
ಅಲ್ಲೋಬ್ಬ ರಾಜಕಾರಣಿ
ನನ್ನೂರಿನ ಕೈಗಾರಿಕರಣದ
ಪ್ರಗತಿಯ ಬಗ್ಗೆ ಭಾಷಣ
ಮಾಡುತ್ತಲೇ ಇದ್ದಾನೆ.


About The Author

Leave a Reply

You cannot copy content of this page

Scroll to Top