ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾಸ್ಕರನ ಕಡು ಕೋಪಕೆ
 ತತ್ತರಿಸಿಹಳು ಧರಣಿ
ಬೆಂಡಾಗಿ ಬಸವಳಿದು
 ಕಾದಿಹಳು ಸೆರಗೊಡ್ಡಿ

 ಹಸಿರೊದ್ದ ವಸಂಧರೆಯ ಬೆಡಗು
  ಬಣ್ಣ ಮಾಸಿದೆ ರವಿಯ ತಾಪಕೆ
 ನಲಿದುಕ್ಕುವ ಜಲರಾಶಿ
 ಗಂಟಲೊಣಗಿ ಬಿಕ್ಕುತಿವೆ

 ಹಸಿರು ಗಿರಿ ದಟ್ಟ ಕಾನನ
 ಮಬ್ಬಡರುತಿವೆ ತಾವಿಂದು
 ತೇಲಿ ಮರೆಯಾಗುತಿಹ
 ಮೇಘಗಳ ಕರೆಯುತಿವೆ

 ಕೋಗಿಲೆ ಗಿಳಿ ಗೊರವಂಕಗಳ
 ದಾಹ ತಣಿಯದಾಗಿದೆ
 ಇನ್ನಾದರೂ ಕೃಪೆದೋರು ವರುಣ
ಚೆಲ್ಲು ಪ್ರೀತಿಯ ಹನಿಗಳ ಧರೆಗೆ

ಮಧುಮಾಲತಿರುದ್ರೇಶ್ ಬೇಲೂರು

About The Author

2 thoughts on “ಮಧುಮಾಲತಿರುದ್ರೇಶ್ ಬೇಲೂರು ಅವರ ಕವಿತೆ-“ವರುಣನಿಗೊಂದು ಕೋರಿಕೆ””

Leave a Reply

You cannot copy content of this page

Scroll to Top