ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುರು ಅರವಿಂದರು
ಬೇಂದ್ರೆ ಕಂಡ ಚೇತನ
ಅನುಭಾವ ದರ್ಶನ
ಶುದ್ಧ ಅಂತಃಕರುಣ

ಗೋದುತಾಯಿ ಅಜ್ಜಿಯು
ಜೀವಕ್ಕ ಜೀವ ಬಾಳ
ಬೇಂದ್ರೆಯೊಳು ಕರುಳ
ಆಶೀರ್ವಾದ ಬಹಳ

ವ್ಯಾಕುಲತೆ ಹರಿದು
ಸಚಿತ್ತದಿ ಬರೆದು
ಗಾರುಡಿಗರಾದರು
ಕಾವ್ಯ ಸಿದ್ಧಿ ಪಡೆದು

ನಾಕುತಂತಿ ನುಡಿಸ್ರಿ
ನಾದಲೀಲೆ ತಿಳ್ಕೋಳ್ರಿ
ಬೇಂದ್ರೆ ಹಾಡ ಕಲ್ಕೋರಿ
ಜೀವನವನ್ನ ಗೆಲ್ರಿ

ಅಗಲಿಕೆಯ ದುಃಖ
ಪದದೊಳಗ ತೀಡ
ಕಷ್ಟವನೆಲ್ಲ ದೂಡ
ಬಿಡುಗಡೆಗೆ ಹಾಡ

ಶಬ್ಧ ಗಾರುಡಿಗನ
ಪದಕೆಲ್ಲ ಜೀವಿತ್ತ
ಕವಿತಾ ಉಸಿರಾತ
ಅನನ್ಯ ಬೆಳಕಾತ

This image has an empty alt attribute; its file name is ae7173b5-dbd9-405d-b6ba-c02c65e07aeb-744x1024.jpg

About The Author

Leave a Reply

You cannot copy content of this page

Scroll to Top