ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶಸ್ತ್ರಾಸ್ತ್ರಗಳನ್ನು ಹೊಂದುವುದೆಂದರೆ
ರಕ್ಷಣೆಗೋಸುಗ ತಿಳಿಯಿದನು
ಅಮಾಯಕರ ಜೀವ ತೆಗೆಯುವುದೆಂದರೆ
ಘಾತುಕತನ ಅಲ್ಲವೇನು?

ದ್ವೇಷದ ಜ್ವಾಲೆ ಕೆನ್ನಾಲಿಗೆ ಚಾಚಿದರೆ
ಅಮಾಯಕರ ಜೀವಕೆಲ್ಲಿಯ ರಕ್ಷಣೆ
ಮುಯ್ಯಿಗೆ ಮುಯ್ಯಿ ತೀರಿಸುವುದೆಂದರೆ
ಯುಗ ಕಳೆದರೂ ತೀರದು ಬವಣೆ

ಜೀವ ತೆಗೆಯಲೆಂದೇ ಭುವಿಗೆ ಬಂದಂತಿದೆಯಲ್ಲ!
ಮೆದುಳಿನಲ್ಲಿ ಹದುಳ ತುಂಬದ ಅಮಾಯಕರು
ಬದುಕಿನ ಮತ್ತೊಂದು ಮಜಲಿನ ಅರಿವಿರದೆ
ಕುಹಕ ಜಾಲಕೆ ಬಲಿಯಾದ ದುರ್ದೈವಿಗಳು

ಪ್ರತಿಯೊಬ್ಬನೂ ಬಾಡಿಗೆದಾರ ಈ ಧರಣಿಗೆ
ಅನ್ಯರ ನೆಲ ಕಬಳಿಸುವ ಹೀನತೆ ಏತಕೆ?
ಸಾಧನೆಯ ಹಾದಿಗೆ ಮುಳ್ಳನೆಳೆದು
ದೇವ ಕೊಟ್ಟ ದೇಹವನ್ನು ವ್ಯರ್ಥಗೊಳಿಸಲೇಕೆ?

ಎಲ್ಲಿ ಮೊಳೆತು, ಎಲ್ಲಿ ಬೆಳೆಯುವವೀ ಕರ್ಮಟಗಳು
ಬೇರುಸಹಿತ ಕೀಳುವವರಾರಿದನು?
ಕರುಳ ರಸ ಬಸಿದು ಜನ್ಮ ನೀಡಿದವಳ
ಸಂಕಟದ ಪರಾಕಾಷ್ಠೆಗೆ ವಿರಾಮವಿಡುವವರಾರು?


About The Author

Leave a Reply

You cannot copy content of this page

Scroll to Top