ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹದಿ ಹರೆಯದಾಗ
ತುಂಬಿದ ಮೈ ಮನಸು
ಆ ಸೋಗಲಾಡಿತನ
ಮಾತುಗಳೇ ಕವನ.

ಶೋಡಷಿಯ ಮನಸು
ಕಳವಳಿಸುತಿದೆ,
ದೃಷ್ಟಿ ಆಕಾಶದಲಿ
ಹೇಳಿದ್ದು ಕೇಳಿಸದೆ.

ದೃಷ್ಟಿಯುದ್ಧ ಮಾಡುತ
ಮಾತಾಡದೆ ನೋಡುತ
ಪರಸ್ಪರ ಹೃದಯ-
-ಕದ್ದ ಕಳ್ಳರಿವರು.

ಉಬ್ಬುಗಲ್ಲದ ಪೋರಿ
ಕನ್ನಡಿಯ ನೋಡುತ,
ಮನಸು ಕದ್ದವನ
ಕಣ್ಣಲ್ಲಿ ಹುಡುಕುತ.

ರಂಗೇರಿದ ಮುಖದ
ನಿನ್ನ ಚಿತ್ರ ಬರೆದೆ,
ನಿನ್ನಷ್ಟೇ ಸರಳವು
ನನ್ನ ಕೈಯ ಕುಂಚವು.

ಮುಂಗುರುಳ ಚೆಲುವೆ
ತನ್ನಲ್ಲೇ ಕಳೆದಳು,
ಕನ್ನಡಿಯ ಒಳಗೆ
ತನ್ನನ್ನೇ ಹುಡುಕೋಳು.


About The Author

Leave a Reply

You cannot copy content of this page

Scroll to Top