ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ಸಾಯ್ತಿ
ಸಾಹಿತ್ಯಕ್ಕೆಂದು ಬರೆದು
ತಂದುಕೊಳ್ಳುವಿ ದುಃಸ್ಥಿತಿ

ನೋಡುವವರಿಲ್ಲ ಕೇಳುವವರಿಲ್ಲ
ನಿನ್ನ ಭಾವನೆ ಚಿಲುಮೆಯನು
ಒತ್ತರಿಸಿ ಬಂದ ಭಾವನೆಗಳೂ
ಕಾಗದ ದೊರಕದೆ ಮೌನವಾಗಿದೆ

ತುತ್ತು ಕೂಳು ಸಿಕ್ಕೀತೆ
ಇದರೊಳಗೆ ಒಂದೇ ಇದ್ದರೆ
ಶಾಯಿ ಹಾಳೆ ಹಾಳು ಮಾಡಿ
ಕೆಡಿಸಿಕೊಂಡು ನಿದ್ರೆ

ಯಾರಿಗಾಗಿ ಬರೆಯುತ್ತಿ
ಅಕ್ಷರಗಳ ಬುತ್ತಿ ಬಿಚ್ಚಿ
ತುಂಬಿಕೊಂಡರೂ ಮನದ ಹೊಟ್ಟಿ
ಖಾಲಿಯಲ್ಲಾ ನಿನ್ನ ತಟ್ಟೆ

ಲಾಭದ ಹೆಸರಿನ ಮೋಹದಲಿ
ನಿನ್ನ ಹಿಂದೆ ತಳ್ಳುವರು
ಕಾಗುಣಿತ ಅರಿಯದವರೂ
ಮೇಧಾವಿಗಳಾಗಿ ಮೆರೆವರು

ಹರಕು ಬಟ್ಟೆ ಕಿತ್ತ ಚಪ್ಪಲಿ
ಇದೊಂದೇ ಗತಿ ನಿನಗೆ
ನೀ ಬರೆದ ಹಾಳಿ ನೀಡುವುದು
ಮೌನದಿ ನಿನಗೆ ಚಪ್ಪಾಳೆ

ಇದ್ದಾಗ ನೀ ಕವಿಯಲ್ಲ
ಸತ್ತ ಮೇಲೆ ನೀ ಮೇಧಾವಿ
ನೋಡುವರು ಆಮೇಲೆ ಒಂದೊಂದೆ ಹಾಳಿ
ನಿನ್ನ ಚಿತ್ರಕ್ಕೊಂದು ಮಾಲೆ ಹಾಕಿ


ಪ್ರಮೋದ ಜೋಶಿ

About The Author

1 thought on “ಪ್ರಮೋದ ಜೋಶಿ ಅವರ ಕವಿತೆ ಸಾಹಿತಿ”

  1. ಇದ್ದಾಗ ಮತ್ತು ಇರದಾಗ, ಹುಂಬ ಮತ್ತು ಢಂಬ ಮನಸ್ಸುಗಳೆದುರು ಕನ್ನಡಿಯನ್ನೇ ಇಟ್ಟಿರುವಿರಿ

Leave a Reply

You cannot copy content of this page

Scroll to Top