ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಧ್ಯ ರಾತ್ರಿ ಎದ್ದು ನೀರ
ಕುಡಿಯಲು ಅಡುಗೆ ಮನೆ
ಬಾಗಿಲು ತೆರೆದರೆ
ಅಬ್ಬಾ ಅದೇನು ರಾಶಿ ರಾಶಿ ಜಿರಳೆ
ಸಂತೆಗೆ ನೆರೆದ ಹಾಗೆ
ರೇಶನ್ ಅಂಗಡಿ ಮುಂದೆ
ಟಿಕೆಟ್ ಆಕಾಂಕ್ಷಿ ರಾಜಕಾರಣಿ
ಪ್ರೇಮಭಿಕ್ಷೆಗೆ ಕಾದಿರುವ ಹರೆಯದವ
ಮಹಾರಾಣಿ ಕಾಲೇಜಿನ ಎದುರು
ಏನವುಗಳ ಆಕಾರ, ಮೀಸೆ ಯ ಕೂದಲು
ಚಿಕ್ಕ ಪುಟ್ಟ ಮರಿ ಮರಿ ಮಿಲಿಮಿಟರು
ಅರ್ಧ ಇಂಚು ಪೂರ್ತಿ ಇಂಚು
ಮೊಳದುದ್ದ ಬೆಳೆದಾವು ಬಿಟ್ಟರೆ
ಆದಾ ವು ಮಾರುದ್ದ ಹಾವು
ಯಜ್ಞ ಮಾಡಲೇ ಲಂಕಾ ದಹನವೇ
ಗ್ಯಾಸ್ ಚೇಂಬರ್ ಇರಲೇ
ಗನ್ ತೆಗೆದು ಹೊಡೆದು ಉರುಳಿಸಲೇ
ಬುಲ್ ದೋಜರ್ ತಂದು
ಉರುಳಿಸಲೇ ಸಾಲು ಸಾಲು ಗಳ
ಯಾವುದಯ್ಯಾ ಸೂಕ್ತ ಯಾವುದು
ನಾನೇನು ಬುದ್ಧನೇ
ಮಹಾವೀರನ ವಂಶಜನೆ
ಶಾಂತಿ ಮಂತ್ರ ಜಪಿಸಲು
ಇನ್ನೊಂದು ಕೆನ್ನೆ ತೋರಲು
ನಾನೇನು ಮಹಾತ್ಮನೇ
ಬೆಳಗಾಗೆದ್ದು ಮರೆಯದೆ
ಹಿಟ್ಟು ಪಟ್ಟು ವಿಷ ಜೆಲ್ಲು
ತಂದು ಇಕ್ಕಬೇಕಿವಕೆ ಪರಲೋಕ
ಪ್ರಯಾಣಕೆ ಪಾಸು ಪೋರ್ಟ್
ಏನಾದರನ್ನಲಿ ಪರಿಸರ ಭಕ್ತರು
ಲಿವ್ ಅಂಡ್ ಲೆಟ್ ಲಿವ್ ಸಂಘದವರು
ಬದುಕಲಾರೆ ನಾ ಈ ಅರೆ ಬರೆ
ಕೆಂಪು ಸೈನಿಕರ ನಡುವೆ
ಪ್ರತಿದಿನ ಹೆದರುತ್ತಾ
ಶಕ್ತಿಯ ಕೊಡು, ಶಕ್ತಿಯ ಕೊಡು
ಶಕ್ತಿಯ ಕೊಡು,ಶಕ್ತಿಯ ಕೊಡು
ಹೇ ಪ್ರಭೋ ಜಿರಳೆ
ಹೋಮ ಮಾಡಲು
ಶಕ್ತಿಯ ಕೊಡು, ಶಕ್ತಿಯ ಕೊಡು
ಶಕ್ತಿಯ ಕೊಡು,ಶಕ್ತಿಯ ಕೊಡು
ಹೇ ಪ್ರಭೋ ಜಿರಳೆ
ಹೆಣ ಸಾಗಿಸಲು
ಶಕ್ತಿಯ ಕೊಡು, ಶಕ್ತಿಯ ಕೊಡು
ಶಕ್ತಿಯ ಕೊಡು,ಶಕ್ತಿಯ ಕೊಡು
ಹೇ ಪ್ರಭೋ ಜಿರಳೆ
ಇಂದ ಜೀವನ ಮುಕ್ತಿಗೆ
ಪ್ರಭೋ ಬಿದ್ದೇನಯಾ ನಿನ್ನ
ಪಾದಕೆ ಮುಕ್ತಿಯ ನೀಡು
ನನಗೆ ಇಲ್ಲ ಜಿರಳೆಗೆ…..


About The Author

5 thoughts on “ಎಚ್. ಗೋಪಾಲ ಕೃಷ್ಣ ಅವರ ಹಾಸ್ಯ ಕವನ ಜಿರಳೆ”

Leave a Reply

You cannot copy content of this page

Scroll to Top