ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಫಿಯಾನ ಗಜಲ್ ೪೭(ಮಾತ್ರೆಗಳು೨೦)

ವಸುಂಧರೆಯ ಒಡಲಿಗೆ ಧಾನ್ಯ ಸಿರಿ ತುಂಬುವನು
ಧರಣಿಗೆ ಸಂಭ್ರಮದಿ ಹಸಿರು ಸೀರೆ ಉಡಿಸುವನು

ಬಾಳಿಗೆ ಅನ್ನ ಆಧಾರ ಉಳಿಸುವುದು ಉಸಿರು
ವಿಶ್ವದ ಸಕಲ ಜೀವರಾಶಿಯನು ಸಲಹುವನು

ಶರಣರ ಸಂತರ ತತ್ವ ತಿಳಿದು ಬಾಳ ಬೇಕು
ದಿನ ಕಾಯಕ ದಾಸೋಹ ನಿಯಮ ಪಾಲಿಸುವನು

ಪ್ರಕೃತಿ ಮುನಿದರೆ ಜಗಕೆಲ್ಲ ಬರಗಾಲ ನೋಡು
ಕಾತುರದಿ ವರುಣನ ಆಗಮನವ ಕಾಯುವನು

ನಿತ್ಯ ಕಷ್ಟದ ಬದುಕು ನಡೆಸುವ ಅನ್ನದಾತ
ನೇಸರನ ಚೈತನ್ಯ ಪ್ರಭೆಯನು ಬಯಸುವನು


About The Author

Leave a Reply

You cannot copy content of this page

Scroll to Top