ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಾಸದಾಸರ ಮನೆಯ ದಾಸಿಯರ ಮಗ ನಾನೆಂಬ ಭಾವದಿ
ದಾಸನಾಗಬೇಕು ಸದಾಶಿವನ ದಾಸನಾಗಬೇಕು ಆಶಯದಿ
ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಂಬ ಸಾಂತ್ವನದಿ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಎಂದವರು ಇವರು

ಮೆರೆಯದಿರು ಮೆರೆಯದಿರು ಎಲೆ ಮಾನವ ಕೊಡುತ ಎಚ್ಚರಿಕೆ
ನಮಿಸುತಲಿ ಮಂಧರ ಪಾವನ ಇಂದಿರಾ ರಮಣನ ಚರಣಕೆ
ಹೂವ ತರುವವರ ಮನೆಗೆ ಹುಲ್ಲ ತರುವಾ ಬಯಕೆಯ ಅರಿಕೆ
ಬಾರೋ ಭಾಗ್ಯದ ನಿಧಿಯೆಂದು ಕೃಷ್ಣನನು ಕರೆದವರು

ಆರಿಗಾದರೂ ಪೂರ್ವ ಕರ್ಮ ಬಿಡದು ತಿಳಿ ಹೇಳುತಲಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತಲಿ
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕವಾಗಲಿಲ್ಲೆಂದು ಹಲುಬುತಲಿ ಕುಲಕುಲಕುಲವೆಂದು ಹೊಡೆದಾಡದಿರಲು
ಬೋಧಿಸಿದವರು

ಸಜ್ಜನರ ಸಂಗದೊಳು ಇರಿಸೆನ್ನ ರಂಗ ಬೇಡಿಕೆಯ ಮುಂದಿಡುತ
ಏಳು ನಾರಾಯಣ ಏಳು ಲಕ್ಷ್ಮೀರಮಣ ಎಂದು ಏಳಿಸುತ
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎನುತ
ಜಯಮಂಗಳಂ ನಿತ್ಯ ಶುಭಮಂಗಳಂ ಪಾಡಿದವರು


About The Author

Leave a Reply

You cannot copy content of this page

Scroll to Top