ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೋಗಬೇಡ ಹಸಿರು ನೀ ಭೂಲೋಕವ ಬಿಟ್ಟು
ಸಾಗುವಳಿ ಮಾಡುವರು ಬಡರೈತರು ನೋಡು
ನೀಗಿಸುತ ದಾಹವ ಜೀವಿಗಳ ಮನತಣಿಸಿ
ಬಾಗುವರು ತಾಯೆಂದು ಭೂ ತಾಯಿಗೆ ನಮಿಸಿ….

ಧರೆಗಿಳಿಯುತಿರಬೇಕು ಮಳೆರಾಯ ಗುಡಿಕಟ್ಟಿ
ತರತರದ ಅನುಭವವು ಭುವಿ ಜನಕೆ ನೋಡು
ಸುರಿಯುತಿರೆ ಜಲಧಾರೆ ಮೈ ಮನವು ಅರಳುವುದು
ಹರುಷವಲ್ಲವೆ ಜಗಕೆ ಭೂ ತಾಯಿ ಕೇಳು ….

ಪುಟ್ಟಮಕ್ಕಳನು ಸಾಕುವೆ ನಿನ್ನೊಡಲಲ್ಲಿ ಭೂ ತಾಯಿ
ಬಿಟ್ಟೋಡುವರು ಕೊನೆಗಾಲ ಬಂದಾಗ
ಋಣಿ ಎಂದು ನಿನಗಾಗಿ ಭೂ ತಾಯಿ ನೀ ನೋಡ
ನಿಟ್ಟುಸಿರು ಬಿಡದಲೆ ಬಾಳುವೆವು ನಿನ್ನೊಡಲಲ್ಲಿ….

ಅಂತಸ್ತು ತುಂಬಿರುವ ನೂರಾರು ನಗರಗಳು
ಅಂತರಿಕ್ಷವ ಚುಂಬಿಸುತಲಿರುವುದು ನೋಡು
ಅಂತರವು ಇಲ್ಲದಿರೆ ಸೂಚನೆಯ ನೀಡುವುದು
ಅಂತಿಮ ಕ್ಷಣವದುವೆ ಪರಿಸರ ನಾಶಗೊಳಿಸೆ….

ಮಾಗುತಿರುವ ಹಣ್ಣಂತೆ ರುಚಿಯಾಗಿರಲು
ಸಾಗುತಿರಬೇಕು ಜೀವನದಿ ಸಂತಸದಲಿ
ಬಾಗುತಿರಬೇಕು ಹಿರಿಯರಿಗೆ ಗೌರವವಾಗಿ
ಕಾಯುತಿರಲು ಒಳ್ಳೆಯ ಸಮಯಕ್ಕಾಗಿ…….


About The Author

Leave a Reply

You cannot copy content of this page

Scroll to Top