ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗದ ಹೃದಯ ಗೆದ್ದ ಮಹಾತ್ಮ
ವಿಶ್ವ ಕಂಡ ಆದರ್ಶ ವ್ಯಕ್ತಿಯ ಆತ್ಮ
ಬೆಳೆದ ಜೈನ ಧರ್ಮವ ಅರಸುತ
ಸತ್ಯ ಶಾಂತಿ ಅಹಿಂಸೆ ಮಂತ್ರ ಸಾರುತ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ ನಾಯಕ
ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ
ಬಹುಮುಖ ವ್ಯಕ್ತಿತ್ವದ ಸಾಧನೆಯ ಸಾಧಕ
ದೇಶದ ಹಿತದೃಷ್ಟಿಯಲ್ಲಿ ಜನ ಸೇವಕ

ಬಾಪೂಜಿ ಒಬ್ಬ ಪ್ರಬುದ್ಧ ಬರಹಗಾರ
ಹಲವಾರು ಪತ್ರಿಕೆಯ ಸಂಪಾದಕ
ಜನಾಂಗೀಯ ತಾರತಮ್ಯದ ಹೋರಾಟಗಾರ
ಎಲ್ಲ ಧರ್ಮವನ್ನು ಪ್ರೀತಿಸುವ ಹರಿಕಾರ

ಉಪವಾಸ ಸತ್ಯಾಗ್ರಹದಿಂದ ಪಡೆದ ಬಲ
ಆತನ ಅಹಿಂಸೆಯ ಮಾರ್ಗದ ನಡೆ ಪ್ರಭಲ
ಮೌಲ್ಯಾಧಾರಿತ ತತ್ವ ಒಳಗೊಂಡ ಜೀವನ
ಖಾದಿ ಬಟ್ಟೆಯಲಿ ಶಾಂತಿಯ ಪಥಚಲನ


About The Author

Leave a Reply

You cannot copy content of this page

Scroll to Top