ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನಗೇಕೆ ಇಂತ ಶಿಕ್ಷೆ
ನಾನು ನಿಮ್ಮ ಒಡನಾಡಿ ಅಲ್ಲವೇ
ಮೋಹದ ಮದವೇರಿ
ದಾಳಿಕೋರರ ಸಂಚಿಗೆ
ಸಿಲುಕಿಸಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ದೇವತಾಮೂರ್ತಿಗೇ ಎರಗುವಿರೆ
ಕರಳಬಳ್ಳಿಯಲಿ ಉದಯಿಸಿದ್ದು
ಕೈ ಹಿಡಿದು ನಡೆಸಿ
ದಾರಿ ತೋರಿಸಿದ್ದು
ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಬಾಹುಗಳಲಿ ಬಂಧಿಸಿ
ನಾಲಿಗೆ ಸೀಳಿ
ರೋಧನೆಯ ಹತ್ತಿಕ್ಕಿ
ಸುಖಕೆ ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಬಾಹ್ಯ ನೋಟಕೆ
ಬೆರಗಾಗಿ ಅಂತರಾತ್ಮ ಮರೆಸಿ
ಬೇಹುಗಾರಿಕೆಯಲಿ ಬೀಳಿಸಿ
ಎಲ್ಲ ಮರೆತದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಸಹನಾ ಮೂರ್ತಿ ದುರ್ಗೆಯಾಗಲು
ವಾತ್ಸಲ್ಯಕೆ ಕಿಚ್ಚು ಹಚ್ಚಿ
ಬೆಚ್ಚಿ ಬೀಳಿಸಿ
ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ನಿರ್ಭಯಾಳಿಗೇ ಭಯ ಹುಟ್ಟಿಸಿ
ಮನಿಷಾಳ ಮನಸ್ಸಿಗೆ ಘಾಸಿ
ಹೂ ಮನಕೆ ಮುಳ್ಳು ತಾಗಿಸಿ
ಎಲ್ಲ ಮರೆತಿದ್ದು ಸರಿಯೇ

ನನಗೇಕೆ ಇಂತ ಶಿಕ್ಷೆ
ಅಂಗರಚನೆಗೆ ಮಾರು ಹೋಗಿ
ತೃಣದ ಅರಿವಿಲ್ಲದೆ
ಬದುಕು ಸಾವಿನ ನಡುವಿನ ನಂಟು
ವಾತ್ಸವದಿ ಎಲ್ಲ ಮರೆತಿದ್ದು ಸರಿಯೇ.


About The Author

Leave a Reply

You cannot copy content of this page

Scroll to Top