ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾವ ಪರಿಮಳ ಸೂಸಿ ನಗುತ್ತಿವೆ
ಕೊಚ್ಚೆ ನೀರಿನ ಹರಿವು ನಲುಗುತ್ತಿವೆ
ಮನವೆಂಬ ಕತ್ತಲೆಯ ರೂಪಾ
ಬೆಳಗಬೇಕು ಸಾಲು ದೀಪಾ
ಅರಳಿ ನಗುವ ಹೂವಕೆ
ಚೆಲ್ಲಿದೆ ಕಾರ್ಮೋಡ ಕನವರಿಕೆ

ದುಗುಡ ದುಮ್ಮಾನ ತೊಲಗಬೇಕು
ಅರಿವು ಗುರು ಜ್ಞಾನ ಬೆಳಗಬೇಕು
ತನ್ನ ಬನ್ನಿಸದೇ ತಳದಿಂದ ತುದಿಯವರೆಗೆ
ತಾಳ್ಮೆಯಲಿ ಸನ್ಮಾರ್ಗ ಸಮ ಸಮಾಜಕೆ ಬೆಳಕ
ತೋರಿ ನಡೆಯಬೇಕು ಶರಣ ಕುಲಕೆ

ಅದಾವ ದ್ವೇಷ ಮನಕೆ ಶಾಶ್ವತ ಇಳೆಯಲಿ
ಹೋಗುವಾ ಕಾಲ ಜವರಾಯನ ಕರದಲಿ
ಕಟ್ಟುವಾ ರಜ್ಜುಗ ಮಮತೆ ಮರೆತು
ಮಡಿಲ ಕಂದನಂತೆ ನಾನು ಹರಸು
ತಾಯಂತೆ ನೀನು
ಭೇದ ಭಾವವ ದೂಡಿ ನಗುವ ಹೆಚ್ಚಿಸು ಹೇ ಬಸವಾ

ಕಿಚ್ಚು ಹೆಚ್ಚಿದೆ ಮಮತೆಯ ನೇಹ ಪ್ರೀತಿಯಲಿ
ಕುರುಡು ಕಾಂಚಾಣಕೆ ಮೈ ಮರೆತಿದೆ ಬಾಂಧವ್ಯ
ಅಧಿಕಾರದ ಅಹಂಮಿಕೆಯಲಿ
ಸುಲಿಯುತ್ತಿವೆ ನರ ಆವೇಶ
ತೋರಿ ನಡೆ ಸಾಲುಗಳ ದೀಪದಲಿ
ಸಮಾನತೆ


About The Author

Leave a Reply

You cannot copy content of this page

Scroll to Top