ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕಿನ
ಆದ್ರತೆಗಳಿಗೊಮ್ಮೆ
ಕಿವಿಕೊಟ್ಟು
ಆಹ್ಲಾದ
ಎನಿಸುವಂತಹ
ಆಸೆಗಳನ್ನು
ಕೊಡವಿಕೊಂಡು
ಕನಸಿಗೊಂದು
ಕವಿತೆಯ ಮುನ್ನುಡಿ
ಬರೆದವಳು ನಾರಿ…

ಕೌಮುದಿಯ
ಕುಂಕುಮದ
ಕಾವ್ಯದೊಳು
ಕರಗದ ಅದೆಷ್ಟೋ
ನೋವಿನ ನೂಕು
ನುಗ್ಗಲುಗಳ
ನುರಿತ ನುಡಿಗಳು
ಹರಿತವಾಗಿ ಚುಚ್ಚಿದಾಗಲೂ
ಬಚ್ಚಿಟ್ಟಿದ್ದು ನಾರಿ…

ಭಾವ ಗಮ್ಯದ
ಗಳಿಕೆಗೆ
ಪದಗಳ ಗುಣಾಕಾರ
ಮಾಡಿ
ಪವಿತ್ರತೆಗೆ
ಪುಣ್ಯ ಪಡೆದದ್ದು
ಮುಡಿದ ಮಲ್ಲಿಗೆಯೆ..?
ಮುಟ್ಟಿಗೂ
ಮೆತ್ತಿದ ಮೈಲಿಗೆಗೆ
ಮೊರೆ ಹೋದ
ಮನುಷ್ಯತ್ವದ
ಮಾರಣ ಹೋಮದೊಳು
ಬಲಿ ಕುರಿ ನಾರಿ…

ಕರ್ತೃ
ಕೃತಿ
ಕರ್ಮ
ಇವೆಲ್ಲಾ
ಅಂಕೆಗಿಟ್ಟು
ಶಂಕೆ ಬಿಟ್ಟು
ಬರೆದ
ಸಾಲುಗಳಿಗೆ
ಅರ್ಥಗಳ ಸಂಖ್ಯೆ
ಸಿಗದಷ್ಟು…
ಒಂದಷ್ಟು ಉಳಿದಿದ್ದರೆ,
ಅರಿತು ಬೆರೆತು
ಅಂತರಂಗದ ತೃಪ್ತಿಗೆ
ತರ್ಜುಮೆಯ ಪೂರ್ಣ ವಿರಾಮ
ಬೊಟ್ಟಿಟ್ಟು ಸಿಂಗರಿಸುವವಳು

ರುದ್ರಾಗ್ನಿ ನಾರಿ


About The Author

Leave a Reply

You cannot copy content of this page

Scroll to Top