ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೇಳಿಬಿಡು ಎಂದು ಬರುವೆ;
ಎದೆಬಾಗಿಲ ತೆರೆದು ಕಾಯುತ್ತಿರುವೆ ಅನುಗಾಲ!
ಹೊರಟೆ ನೀನೇನು ಹೇಳದೆ;
ಮನೆಬಾಗಿಲ ಬರಿದಾಗಿಸಿ ಮನದಲ್ಲಿ ಬರಗಾಲ!

ಯಾವ ಸುಳಿಯು ಸೆಳೆಯಿತೆ;
ಅರಿಯದೆ ಚಡಪಡಿಸುತ ನಿಡುಸುಯ್ದೆ ನಾನಿಲ್ಲಿ!
ಅದಾವ ಮೋಹಕ್ಕೆ ಸಿಲುಕಿದೆ;
ತಿಳಿಯದೆ ಕಣ್ಣೀರಾದೆ ಕೇಳುವರಿಲ್ಲ ಒಂಟಿಯಿಲ್ಲಿ!

ವಸಂತ ಸುರಿದಿತ್ತು ನೀನಿದ್ದಾಗ!
ಹೊರಟೆ ಬರೀ ಶಿಶಿರದ ಧಗೆ ಬಿಸಿಲು ಆಹಾಕಾರ!
ಹೂಗಂಧ ಅಮಲೆ ನಗುವಾಗ!
ಹೋದೆಯೆ ಕಾರ್ಗತ್ತಲ ನಿಶೆ ಜೀವನ ಅಂಧಕಾರ!

ಚಿಗುರಿತ್ತು ಕೊಟ್ಟುಕೊಂಡ ಪ್ರೀತಿ;
ಸೊರಗಿ ಒಣಗಿ ತರಗೆಲೆಯಂತಾಯಿತೆ ವಿರಹದಿ!
ಕನಸಿತ್ತು ಬದುಕು ಸ್ವರ್ಗದ ರೀತಿ!
ಕಮರಿತೇ ನಿನ್ನ ನಿರ್ಲಕ್ಷ್ಯತೆ ಧಾಳಿಯ ಪ್ರವಾಹದಿ!

ಬಿಲ್ಲ ಕಣ್ಣುಬ್ಬ ಕುಣಿಸಿ ಆಡಿಸಿದೆ;
ನಿನ್ನ ಮನವ ಅರಿಯದೆ ಮೋಸಕ್ಕೆ ವಶವಾದೆನೆ!
ಕಲ್ಲಿನಂತ ಹೃದಯ ನಿನಗೇಕಿದೆ;
ಚೆಲುವೇ ಒಲವ ಅರ್ಪಿಸಿ ಅವಸರಿಸೀ ಸೋತೆನೆ!


About The Author

1 thought on “ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ಹೇಳಿಬಿಡು ಎಂದು ಬರುವೆ…?’”

Leave a Reply

You cannot copy content of this page

Scroll to Top