ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದದ ಚಂದದ ತವರೂರು
ಕಬ್ಬಿನ ಸಿಹಿಯಿದು ನಮ್ಮೂರು..
ಬಳುಕುವ ಬಳ್ಳಿಯ ನೋಟವಿದು
ಹೊನ್ನ ಪಚ್ಚೆ ಹಸಿರಿನ ಸೊಬಗಿದು..//

ನಮ್ಮ ಗಾವ ಚಂದನ ಬಲವು
ಗ್ರಾಮ್ಯ ನುಡಿಯೇ ಶ್ರೀಗಂಧವು..
ಹಳ್ಳಿಯ ಕಡೆ ಮಮತೆಯ ನಡೆ
ಕೂಡಿ ಬಾಳುವ ನವನೀತ ಗುಣವು..//

ನಗು ನಗುತ ನಲಿದು ಬಾಳೋಣ
ಖುಷಿಯಲಿ ಕೂಡಿ ನಡೆಯೋಣ..
ಬೆಳೆದ ಧಾನ್ಯದ ರಾಶಿಯ ಮಾಡಿ
ಭೂತಾಯಿಗೆ ಹಾಡಿ ನಮಿಸೋಣ..//

ನಮ್ಮೂರ ಚೆಲುವಿನ ಐಸಿರಿ
ಸೊಗಡು ಕಂಪಿನ ವನಸಿರಿ..
ಬಾಳಿನ ಗುಡಿ ಅರಮನೆಯಂಗೆ
ಬಾಳಕ್ಕೆ ಕುಣಿವ ನವಿಲoಗೆ..//


About The Author

5 thoughts on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರ ಕವಿತೆ,’ನಮ್ಮೂರು ನವಿಲoಗೆ..’”

    1. ನಿಮ್ಮೂರ ಕವನ ಬಹಳ ಸೊಗಸಾಗಿ ಕಬ್ಬಿನ ಸಿಹಿ ಹಂಚಿದ ಕವಿತೆ

Leave a Reply

You cannot copy content of this page

Scroll to Top