ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಸಿಯಾಗಿರುವಾಗಲೇ
ಹಳಚಿ ಹೋದ ಅಡುಗೆಗೆ
ಮಾಲಿಕರಾಗುವ ಕಷ್ಟ
ಯಾರಿಗೂ ಬರಬಾರದು
ಒಲವೆಂಬುದು ಅದೆಷ್ಟು ಎಚ್ಚರದಲಿ
ಉಂಡರೂ ತಟ್ಟೆ ಯಿಂದ
ಸೋರಿ ನೆಲಕೆ ಸೇರಿ‌ ಮರಳಿ
ಕೈಗೆಟುಕದಂತಾದುದಕೆ
ಸಾಕ್ಷಿಯಾದ ದುರ್ದೈವಿಗಳ‌
ಪಟ್ಟಿಯಲಿ ನಮ್ಮ ಹೆಸರಿಗೂ
ಜಾಗ ಇಷ್ಟು ಬೇಗ ಸಿಗುವದೆಂದು
ಎಣಿಸಿರದ ಮೂರ್ಖತನಕೆ
ಸಾಕ್ಷಿಯಾಗಿರುವ ಹಣೆಬರಹ
ನಿರ್ಧಾರವಾಗಿದೆ.

ಒಂದಿಷ್ಟು ಹರಿದಾಗಲೆ
ನಾವು ಅಂಚಿಗೆ ಸರಿದದ್ದು
ಪರಿತ್ಯಕ್ತರಾದದ್ದು
ಮಾತಿನಲಿ ಹೇಳದೆ ನಾ
ಸೊತು ಹೋಗಿರುವೆ

ನಾಜೂಕು ಗಾಜನು
ಒಡೆಯದಂತೆ
ಕಾದಿಟ್ಟಿದ್ದೆ ಟಳಾರೆಂದು
ಚೂರು ಚೂರಾದ ಮೇಲೆ
ಯಾವ ದೇವರು
ತಾನೆ ಕೂಡಿಸಬಲ್ಲ

ವಿದಾಯಕ್ಕೆ ನಾಕು ಹನಿ‌
ಕಣ್ಣೀರು ಮಾತಿಲ್ಲ ದ
ಎರಡು‌ ಮಾತು
ಅರ್ಪಿಸಿ ದೂರ ಹೊರಟಿರುವೆ
ಇದೇ ಜನ್ಮದಲಿ ಮರಳಿ
ಸೇರುವ ಕನಸು ಕೈಗೂಡದ ಅರಿವಿದ್ದೂ
ಕನಸು ಕಾಣುವ ಹುಚ್ಚುತನ‌ ಮಾಡುವ
ಮನಕೆ ನಾನೆ ಜವಾಬುದಾರ

ಒಂದು ಸತ್ಯದ ಮಾತು
ಈ ವಿರಹವೂ ಒಂದು ರೀತಿಯಲಿ
ಸುಖ ಕೊಡುವದು
ಪ್ರೇಮದ ದುರಂತಕ್ಕೆ
ಇನ್ನೊಂದು ಅಧ್ಯಾಯ ಸೇರಿದೆ ಅಷ್ಟೇ.


About The Author

2 thoughts on “ವೈ‌.ಎಂ.ಯಾಕೊಳ್ಳಿ ಅವರ ಕವಿತೆ-ಕಣ್ಣೀರಿಗೆಲ್ಲಿಯ ಅರ್ಥ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅತ್ಯಂತ ಭಾವಪೂರ್ಣವಾದ ಕವಿತೆ ಸರ್ ಧನ್ಯವಾದಗಳು

Leave a Reply

You cannot copy content of this page

Scroll to Top