ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಾತಿ ಕಂದಕದಿ ಅಮೃತವೆಂದೆಣಿಸಿ
ಹಾಲಾಹಲದಿ ತೇಲಿದ್ದು ಹೆಣದ ರಾಶಿ
ತಾಯ್ ಎದೆಯ ಅಮೃತ ಕುಡಿದು
ವಿಷ ಕಕ್ಕುವ ಬಾಯಿಗೆ ಅಮೃತ ಲೇಪನ

ಮತಿಗೆಟ್ಟು ಮತಕ್ಕೆ ಜೋತು ಬಿದ್ದು ಹರೆಯಕೆ ಕಿಚ್ಚಿಟ್ಟ ಬೆಂಕಿಯಲಿ ಮೈ ಕಾಯಿಸುವ ಲಂಡ
ಗುಲಾಮರ ಅಟ್ಟಹಾಸಕೆ ಸಂಭ್ರಮದ ಅಮೃತ

ಅವರೇನೋ ತನು ಮನ ಧನದಿ ಕಟ್ಟಿಟ್ಟು
ತಿರಂಗ, ಕಾಯ ವಾಚಾ ಮನಸಾ ಕಾಯಿರೆಂದು
ಅಭಯವಿತ್ತು ಇಟ್ಟ ಮಾತಿಗೆ ತಪ್ಪದೇ ಹರಿಸಿದ್ದು ಕೇಸರಿ ನೆತ್ತರು,ಮೆರೆಸಿದ್ದು ಮತ್ಸರ

ಬರೆದಿಟ್ಟ ಠರಾವಿಗೆ ಸದ್ಗತಿ ತೋರಿ ಸ್ವತಃ ಬರೆಯುತಿಹರು ಮೇಲಿಂದ ಮರಣ ಶಾಸನ
ದಿಕ್ಕೆಟ್ಟ ದಲಿತ ಬೆಂಕಿ ಇಕ್ಕಿ ತನ್ನದೇ ಹೆಣಕ್ಕೆ
ಮುಗಿಲಿಗೆ ಬಾಯ್ತೆರೆದು ನಿಂತಿಹನು
ಆತ್ಮ ಸತ್ತ ಸೂತಕಕೆ ಅಮೃತ ಉಣಿಸಲು

ಹೇಳು ಆಯಿ ಯಾರು ಮಕ್ಕಳು??
ನೀನ್ಹೆತ್ತವರಲ್ಲವೆ ನಾವೆಲ್ಲರು
ಅವನೇಕೆ ಹೀನ, ಇವನೇಕೆ ಕುಲೀನ
ನಿನ್ನುದರದಿ ಭೇದವುಂಟೆ
ನಿನ್ನ ರಕುತಕೆ ಮಲಿನವುಂಟೇ ನೀನೇ ಹೇಳು


About The Author

Leave a Reply

You cannot copy content of this page

Scroll to Top