ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶ್ರೀನಿವಾಸ ಜಾಲವಾದಿ

ಭಾರ ಹೊತ್ತವರು

ತಲೆಯ ಮೇಲಿನ ಭಾರ ಹೊತ್ತವರು
ತಲೆ ಎತ್ತಿ ತಿರುಗುವವರು ಅವರು
ಭಾರ ಅತಿ ಭಾರ ಜಡತ್ವದನುಭವ
ಲೋಕದ ಭಾರ ಹೊತ್ತವನೂ ಹೀಗೆಯೆ?
ಇರಬಹುದು ಇರಬಹುದು ಎಲ್ಲರ
ನೋಟ ನೋಡಿದರೆ ಹಾಗೇ ಅನಿಸಿತಲ್ಲ?

ತಲೆಯಲಿರುವುದನಿಳಿಸಿ ನಿಂತ ಸಂತ
ಕಥೆಯಲಿ ಎಲ್ಲ ಹೂರಣ ತುಂಬಿ ತಾ
ಕಡಿಕೆ ಮರೆಗೆ ಸರಿಯೊ ಅವಸರದಲಿ
ಇರುವವ ತಾನೇ ಕಥೆಯಲಿ ಮುಖ್ಯ
ಭೂಮಿಕೆಯಲಿ ವಿಜೃಂಭಿಸಿದನಲ್ಲ?
ಇದಕೇನ ಹೇಳೂದು ತಿಳಿಯುತಿಲ್ಲ!

ಅವನೇ ಅವನು ಒಮ್ಮೆ ಎಂದವ
ಬಿಟ್ಟೂ ಬಿಡದೇ ನಿರಂತರ ಮೈಮರೆಸಿದ
ಜಗದ ಜಂಜಡ ಮರೆಸಿದಾತ ಜಗದಾತ
ಕೈಲಾಸದಲಿ ಶಂಕ ಚಕ್ರ ತ್ರಿಶೂಲಧರ
ವೈಕುಂಠವೂ ಅವನದೇ ಅಂತೆ ಹೌದೆ?
ಗೊತ್ತಿಲ್ಲವೆಂದ ಪಾರ್ವತ್ಲಕ್ಷ್ಮಿ ಭಾರವಿಳಿಸಿ
ನಡೆದರು ಅರಿವಿನ ಮನೆಗೆ ನಿರಾಳವಾಗಿ!

ಎಲ್ಲೇ ಎಲ್ಲ ಮೀರಿದವ ಮತ್ತೆ ಬರುವನೆ?
ಹೊಸ ಬುತ್ತಿಯ ಭಾರದ ಭಾವ ತರುವನೆ?
ಗೊತ್ತಿಲ್ಲ ಏನು ಬೇಕಾದರೂ ಆದೀತಲ್ಲಿ
ಇಂವ ಇರುವ ಭಾರ ಭಾವ ಅರಗಿದಲ್ಲಿ!


ಶ್ರೀನಿವಾಸ ಜಾಲವಾದಿ
ನಿವೃತ್ತ ಉಪಪ್ರಾಂಶುಪಾಲರು
ಸುರಪುರ






                                     

About The Author

3 thoughts on “ಶ್ರೀನಿವಾಸ ಜಾಲವಾದಿಯವರಕವಿತೆ-ಭಾರ ಹೊತ್ತವರು”

Leave a Reply

You cannot copy content of this page

Scroll to Top