ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶ್ರೀಕಾಂತಯ್ಯ ಮಠ

ಆರಿದ ಮನಸ್ಸಿನ ಬೆಳಕು

ಬಾಯಿಯೊಳಗೆ ಬಂತು ಸುಳ್ಳಿನ ಮಾತು
ಹೃದಯದಿಂದ ಬರಲಿಲ್ಲ ಸತ್ಯದ ಮಾತು

ಆಡುವ ನುಡಿಗೆ ಕೊನೆಯಿರಲಿಲ್ಲ
ಆಡದ ಮಾತಿನ ಸತ್ಯ ಯಾರೂ ಹೊರಲಿಲ್ಲ

ಆರೋಪದ ಮನೆ ಗದ್ದಲವಿತ್ತು
ಕಾರಣವಿಲ್ಲದ ನೆಪ ಜೋರು ಸದ್ದು ಮಾಡಿತ್ತು

ನಮ್ಮವರೆಂಬ ಬಂಧ ಕಾಣಲೆಯಿಲ್ಲ
ನಾನು ಎನ್ನುವ ಗರ್ವ ಪರ್ವತವಾಗಿತ್ತಲ್ಲ

ಸೋಲುವ ದಾರಿ ಎಲ್ಲರಿಗೂ ಎದುರಾಗಿ ಬರುವುದಿಲ್ಲಿ
ಗೆಲ್ಲುವ ದಾರಿ ಕೆಲವೊಬ್ಬರಿಗೆ ಸಿಗುವುದಿಲ್ಲಿ

ಮನಸ್ತಾಪದಲ್ಲಿ ಮನಸ್ಸಿನ ಪರಿಸ್ಥಿತಿ ಸುಧಾರಿಸಲಿಲ್ಲ
ಹಠಮಾರಿಯಲ್ಲಿ ನಿಜ ಸ್ಥಿತಿ ಯಾರೂ ತಿಳಿಯಲಿಲ್ಲ

ಕೊನೆ ಘಳಿಗೆ ಮನೆಯಲ್ಲಿ ಶಾಂತಿ ದೀಪ ಹಚ್ಚಲಿಲ್ಲ
ಅಂತಿಮ ತೀರ್ಪಿನಲ್ಲಿ ನ್ಯಾಯ ಬೆಳಕು ನಮಗಿಲ್ಲ


ಶ್ರೀಕಾಂತಯ್ಯ ಮಠ

About The Author

Leave a Reply

You cannot copy content of this page

Scroll to Top