ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಸದ ತೊಟ್ಟೆ

ಗೆಳೆಯರೇ
ನಾವು ಬದುಕುತ್ತಿಲ್ಲ
ನಿತ್ಯ ನಿರಂತರ
ಸಾಯುತ್ತಿದ್ದೇವೆ
ಕಣ್ಣ ಮುಂದೆ
ಸುಲಿಗೆ ಶೋಷಣೆ
ಮೋಸ ವಂಚನೆ ಸುತ್ತಲೂ
ಜಾತಿ ಮತ್ಸರ ಕೋಮು ಗಲಭೆ
ಭ್ರಷ್ಟತನದ ಸಂಭ್ರಮ
ಕೆಲಸವಿಲ್ಲದ ಕೈಗಳು
ಮದುವೆಯಿಲ್ಲದ ಮಕ್ಕಳು
ಹಸಿವಿನಿಂದ ಬಳಲುತ್ತಿವೆ
ಕೊಳಗೇರಿ ಜೀವಗಳು
ಮಳೆಯಿಲ್ಲದೆ ಬೆಂಡಾದ
ಬಿರುಕು ನೆಲದ ಯೋಗಿಯು
ಟಿವಿ ಪತ್ರಿಕೆ ಸುದ್ಧಿ ಸಂಸ್ಥೆ
ಹೊಗಳು ಯಂತ್ರವಾದವು
ಅಬಲೆಯರ ಅತ್ಯಾಚಾರ
ಮಂಗಳ ಮುಖಿಯರ ಗೋಳು
ನಿರ್ಭಯಳ ಸಾವಿಗೆ
ಎಂದು ಸಿಗುವುದು ನ್ಯಾಯವು
ಸ್ವತಂತ್ರ ಬಂದರೂ
ನಿಲ್ಲಲೊಲ್ಲದು ದೀನ
ದಲಿತರ ಹತ್ಯೆಯು
ದುಡ್ಡು ಜಾತಿ ಬಲದಿಂದಲೇ
ಪುಣ್ಯ ಭಾರತ ಲೂಟಿಯು
ಕೊಲೆ ಹಿಂಸೆ ದೌರ್ಜನ್ಯಕೆ
ಪ್ರಗತಿಪರರು ಸತ್ತರು
ಕವನ ಓದಿ ಖುಷಿ ಆಗಿ
ಮೌನದಿಂದ ಮಲಗುವವರು
ವ್ಯವಸ್ಥೆಯನ್ನು ಪ್ರಶ್ನೆ ಮಾಡದ
ನಮ್ಮ ಮೆದುಳು ಬುದ್ಧಿ
ಕಸದ ತೊಟ್ಟೆಯು
ಸಾಯುತ್ತಿದ್ದೆವೆ ನಿತ್ಯ ನಿತ್ಯ

ಬದುಕುವ ನೆಪದಲ್ಲಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಔಷಧ ಸಂಶೋಧಕ ವಿಜ್ಞಾನಿ-ರಾಮದುರ್ಗ

About The Author

9 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕಸದ ತೊಟ್ಟೆ”

  1. ಅಕ್ಕ ಮಹಾದೇವಿ.

    ನಿಜ ಸರ್ ಉತ್ತಮ ” ಆತ್ಮಶೋಧನೆ ಮಾಡುವ ಕವನ

  2. ಸಮಾಜದ ನಿಜದ ವಸ್ತು ಚಿತ್ರಣ ಸರ್. ಕ್ರಾಂತಿಕಾರಿ ಕವನ. ಮನಸಿನ ಕಸದ ತೊಟ್ಟಿ ಯನ್ನೂ ಒಳ್ಳೆಯ ವಿಚಾರ ಗಳಿಂದ ಹಸನು ಗೊಳಿಸಲು ಪ್ರಯತ್ನಿಸ ಬೇಕು. ಸಮಸ್ಯೆ ಕೇವಲ ಕವನ ಕತೆ ಓದುವುದರಿಂದ ಪರಿಹಾರ ಆಗುವುದಿಲ್ಲ ಎಂಬ ತಮ್ಮ ಯೋಚನೆ ಮೆಚ್ಚುವಂತಹದ್ದು

  3. ಡಾ ಶರಣಮ್ಮ ಗೊರೇಬಾಳ

    ಸಮಾಜದ ನಿಜದ ವಸ್ತು ಚಿತ್ರಣ ಸರ್. ಕ್ರಾಂತಿಕಾರಿ ಕವನ. ಮನಸಿನ ಕಸದ ತೊಟ್ಟಿ ಯನ್ನೂ ಒಳ್ಳೆಯ ವಿಚಾರ ಗಳಿಂದ ಹಸನು ಗೊಳಿಸಲು ಪ್ರಯತ್ನಿಸ ಬೇಕು. ಸಮಸ್ಯೆ ಕೇವಲ ಕವನ ಕತೆ ಓದುವುದರಿಂದ ಪರಿಹಾರ ಆಗುವುದಿಲ್ಲ ಎಂಬ ತಮ್ಮಯೋಚನೆ ಮೆಚ್ಚುವಂತದ್ದು

  4. ತಮ್ಮ ತಲೆಯ ಗೂಡಲ್ಲಿ ಮನಸಿನ ಆಳದಲ್ಲಿ ಎಸ್ಟು ಯೋಚನೆ… ಕವನ ಬಚ್ಚಿಟ್ಟಿದ್ದೀರಿ ಸರ್

  5. ನಿತ್ಯ ಸತ್ಯದ ಬದುಕಿನ ಚಿತ್ರಣ…ಅತ್ಯುತ್ತಮ ಕವನ ಸರ್

    ಜಯಶ್ರೀ ಪಾಟೀಲ

  6. ಅನಸೂಯಾ ಪಾಟೀಲ

    ಕ್ರೂರ ವ್ಯವಸ್ಥೆಯನ್ನು ಪ್ರಶ್ನೆ ಮಾಡದ ಮೆದಳು ಬುದ್ಧಿ ನಿಜಕ್ಕೂ ಕಸದ ತೊಟ್ಟಿ ಸರ್

Leave a Reply

You cannot copy content of this page

Scroll to Top